ಆ್ಯಪ್ನಗರ

ಎಚ್‌ಡಿಕೆಯಿಂದ ಕೆಂಗಲ್‌ಗೆ ಅವಮಾನ : ಬಿಎಸ್‌ವೈ

'ನನಗೂ ಖಾಸಗಿ ಜೀವನ ಇದೆ ಕಡತಗಳನ್ನು ಪರಿಶೀಲಿಸಲು ಏಕಾಂತ ಬೇಕು...

Vijaya Karnataka 22 Nov 2018, 5:00 am
ಬೆಂಗಳೂರು: 'ನನಗೂ ಖಾಸಗಿ ಜೀವನ ಇದೆ. ಕಡತಗಳನ್ನು ಪರಿಶೀಲಿಸಲು ಏಕಾಂತ ಬೇಕು. ಅದಕ್ಕಾಗಿ ತಾಜ್‌ ವೆಸ್ಟೆಂಡ್‌ನಲ್ಲಿ ರೂಂ ಮಾಡಿದ್ದೇನೆ' ಎಂದು ಹೇಳುವ ಮೂಲಕ ವಿಧಾನಸೌಧ ಕಟ್ಟಿದ ಕೆಂಗಲ್‌ ಹನುಮಂತಯ್ಯ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.
Vijaya Karnataka Web bs


ತಾಜ್‌ವೆಸ್ಟೆಂಡ್‌ನಲ್ಲಿ ರೂಂ ಮಾಡಿರುವ ಬಗ್ಗೆ ಕುಮಾರಸ್ವಾಮಿ ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ''ವಿಧಾನಸೌಧ ರಾಜ್ಯಕ್ಕೆ ದೇಗುಲ ಇದ್ದಂತೆ. ಹಿಂದಿನ ಎಲ್ಲ ಮುಖ್ಯಮಂತ್ರಿಗಳು ಅಲ್ಲಿಯೇ ಕುಳಿತು ಅಧಿಕಾರ ನಡೆಸಿದ್ದಾರೆ. ಒಂದು ಕಡೆ ಸರಕಾರದ ಹಣ ಉಳಿಸಲು ನಾನು ಸರಕಾರಿ ಕಾರು ಬಳಸುವುದಿಲ್ಲ ಎಂದು ಹೇಳುವ ನೀವು ಇನ್ನೊಂದೆಡೆ ಐಷಾರಾಮಿ ಹೊಟೇಲ್‌ನಲ್ಲಿ ನೆಲೆಸುವ ಮೂಲಕ ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತೀದ್ದೀರಿ. ನೀವು ಖಾಸಗಿ ಜೀವನ ಬಯಸುವವರು ಇನ್ನೊಂದೆಡೆ ಮುಖ್ಯಮಂತ್ರಿಯಾಗಿ ಹೇಗೆ ಸಾರ್ವಜನಿಕ ಜೀವನ ನಡೆಸುತ್ತಿದ್ದೀರಿ'', ಎಂದು ಪ್ರಶ್ನಿಸಿದ್ದಾರೆ.

''ನಿಮ್ಮ ನಡೆ-ನುಡಿಯಲ್ಲಿ ಸಾಮ್ಯತೆ ಇಲ್ಲ. ಇದನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈಗಾಗಲೇ ಬಹಳಷ್ಟು ಮಂತ್ರಿಗಳು ಖಾಸಗಿ ಸ್ಥಳದಿಂದ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ನೀವು ವಿಧಾನಸೌಧಕ್ಕೆ ಬೀಗ ಹಾಕಬಹುದೆಂಬ ಭಯ ನನ್ನನ್ನು ಕಾಡುತ್ತಿದೆ,'' ಎಂದು ವ್ಯಂಗ್ಯವಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ