ಆ್ಯಪ್ನಗರ

ಎರಡು ಕಡೆ ನಾಮಪತ್ರ ಸಲ್ಲಿಸಿದ ಎಚ್‌ಡಿಕೆ

ರಾಮನಗರ ಹಾಗೂ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್‌...

Vijaya Karnataka 21 Apr 2018, 5:00 am
ರಾಮನಗರ : ರಾಮನಗರ ಹಾಗೂ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಎರಡು ಕಡೆ ನಾಮಪತ್ರ ಸಲ್ಲಿಸಿದರು.
Vijaya Karnataka Web hdk


ಪತ್ನಿ ಅನಿತಾ ಕುಮಾಸ್ವಾಮಿ,ಧಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಫಾರೂಖ್‌, ತಾಲೂಕು ಜೆಡಿಎಸ್‌ ಘಟಕದ ಅಧ್ಯಕ್ಷ ರಾಜೇಶೇಖರ್‌ ಸಾಥ್‌ ನೀಡಿದರು.

ದೇವಾಲಯ, ಚರ್ಚ್‌, ಮಸೀದಿಯಲ್ಲಿ ಪ್ರಾರ್ಥನೆ: ರಾಮನಗರದ ಚಾಮುಂಡೇಶ್ವರಿ ದೇವರ ಸನ್ನಿಧಿಯಲ್ಲಿ ಬೆಳಗ್ಗೆ ನಾಮಪತ್ರಗಳನ್ನಿಟ್ಟು ಕುಮಾರಸ್ವಾಮಿ ಪೂಜೆ ಸಲ್ಲಿಸಿದರು. ನಂತರ ನಗರದ ರೈಲು ನಿಲ್ದಾಣದ ಬಳಿ ಇರುವ ಸೆಂಟ್‌ ಫಿಲಾಮಿನ ಚರ್ಚ್‌, ಬನ್ನಿಮಹಾಕಾಳಮ್ಮ ದೇವಾಲಯ, ಸ್ಟೇಷನ್‌ ರಸ್ತೆಯ ಬಲಮುರಿ ಗಣಪತಿ ದೇವಸ್ಥಾನ ಬಳಿಕ ಅರ್ಕಾವತಿ ನದಿ ದಂಡೆಯ ಮೇಲಿರುವ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ