ಅಶೋಕ್ ಆರ್.ಪಿ. ತುಮಕೂರು
ಅನ್ನ, ಅಕ್ಷರ, ಆಶ್ರಯ ನೀಡಿ ಬಾಳಿಗೆ ಬೆಳಕಾಗಿದ್ದ ಸಿದ್ಧಗಂಗಾ ಮಠದ ಲಿಂ. ಡಾ.ಶಿವಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆ ಜ.31 ರಂದು ನಡೆಯಲಿದ್ದು, ಅಂದು ಮಠದ ಸಾವಿರಾರು ಮಕ್ಕಳು ಸಾಮೂಹಿಕ ಕೇಶ ಮುಂಡನ ಮಾಡಿಸಿಕೊಳ್ಳಲಿದ್ದಾರೆ ! ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಪುಣ್ಯಸ್ಮರಣೆ ದಿನಾಂಕ ಪ್ರಕಟಿಸಿದ್ದು, ಮಠದಲ್ಲಿ ಓದುತ್ತಿರುವ ಸುಮಾರು 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಾಮೂಹಿಕವಾಗಿ ಕೇಶ ಮುಂಡನ ಮಾಡಿಸಿಕೊಳ್ಳಲಿದ್ದಾರೆ. ಈ ಮೂಲಕ ತಮ್ಮನ್ನು ಪೊರೆದ ನಡೆದಾಡುವ ದೇವರಿಗೆ ಭಕ್ತಿ ಸಮರ್ಪಣೆ ಮಾಡಲು ಮುಂದಾಗಿದ್ದಾರೆ.
ಕಿರಿಯ ಶ್ರೀಗಳ ಸಮ್ಮತಿ:
ಸಿದ್ಧಗಂಗಾ ಮಠದಲ್ಲಿ ಪ್ರಾಥಮಿಕ ಶಿಕ್ಷ ಣದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಕಲಿಯುತ್ತಿರುವ ಸುಮಾರು 8 ಸಾವಿರ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಈ ಎಲ್ಲಾ ಮಕ್ಕಳನ್ನು ಸಿದ್ಧಗಂಗಾ ಶ್ರೀಗಳು ಅತ್ಯಂತ ಪ್ರೀತಿಯಿಂದ ಪೊರೆಯುತ್ತಿದ್ದರು.
ಮಕ್ಕಳಿಗೆ ಯಾವುದೇ ಕೊರತೆಯಿಲ್ಲದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಓದಿಸುತ್ತಿದ್ದರು. ಶ್ರೀಗಳ ಅಗಲಿಕೆಯಿಂದ ಮಠದ ವಿದ್ಯಾರ್ಥಿಗಳು ಅನಾಥ ಭಾವದಿಂದ ನೊಂದಿದ್ದಾರೆ. ಆ ನೋವಿನಿಂದಾಗಿ ಹೊರ ಬರಲಾಗದ ವಿದ್ಯಾರ್ಥಿಗಳು ಇದೀಗ ತಮ್ಮ ಕೇಶ ಮುಂಡನ ಮಾಡಿಸಿಕೊಂಡು ತಮ್ಮ ಆರಾಧ್ಯ ದೈವಕ್ಕೆ ನಮಿಸಲು ಮುಂದಾಗಿದ್ದಾರೆ.
ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೇಶ ಮುಂಡನ ಮಾಡಲು ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘ ಮುಂದಾಗಿದೆ. ಈ ಕುರಿತು ಸಮಾಜದ ಮುಖಂಡರು ಕಿರಿಯ ಶ್ರೀಗಳನ್ನು ಭೇಟಿ ಮಾಡಿ ಶನಿವಾರ ಮನವಿ ಸಲ್ಲಿಸಿದ್ದಾರೆ. ಕಿರಿಯ ಶ್ರೀಗಳು ಸಮಾಜದ ಮನವಿಗೆ ಸಮ್ಮತಿ ಸೂಚಿಸಿದ್ದಾರೆ.
ಜ.29 ರಂದು ಸವಿತಾ ಸಮಾಜದ ಸಾವಿರಾರು ಯುವಕರು ಸಿದ್ಧಗಂಗಾ ಮಠದ ವಿದ್ಯಾರ್ಥಿಗಳಿಗೆ ಕೇಶ ಮುಂಡನ ಮಾಡಲಿದ್ದಾರೆ. ಇದು ಒಂದು ಹೊಸ ದಾಖಲೆ ಸೃಷ್ಟಿಸುವ ಸಾಧ್ಯತೆಗಳಿವೆ.
ಅನ್ನ, ಅಕ್ಷರ, ಆಶ್ರಯ ನೀಡಿ ಬಾಳಿಗೆ ಬೆಳಕಾಗಿದ್ದ ಸಿದ್ಧಗಂಗಾ ಮಠದ ಲಿಂ. ಡಾ.ಶಿವಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆ ಜ.31 ರಂದು ನಡೆಯಲಿದ್ದು, ಅಂದು ಮಠದ ಸಾವಿರಾರು ಮಕ್ಕಳು ಸಾಮೂಹಿಕ ಕೇಶ ಮುಂಡನ ಮಾಡಿಸಿಕೊಳ್ಳಲಿದ್ದಾರೆ !
ಕಿರಿಯ ಶ್ರೀಗಳ ಸಮ್ಮತಿ:
ಸಿದ್ಧಗಂಗಾ ಮಠದಲ್ಲಿ ಪ್ರಾಥಮಿಕ ಶಿಕ್ಷ ಣದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಕಲಿಯುತ್ತಿರುವ ಸುಮಾರು 8 ಸಾವಿರ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಈ ಎಲ್ಲಾ ಮಕ್ಕಳನ್ನು ಸಿದ್ಧಗಂಗಾ ಶ್ರೀಗಳು ಅತ್ಯಂತ ಪ್ರೀತಿಯಿಂದ ಪೊರೆಯುತ್ತಿದ್ದರು.
ಮಕ್ಕಳಿಗೆ ಯಾವುದೇ ಕೊರತೆಯಿಲ್ಲದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಓದಿಸುತ್ತಿದ್ದರು. ಶ್ರೀಗಳ ಅಗಲಿಕೆಯಿಂದ ಮಠದ ವಿದ್ಯಾರ್ಥಿಗಳು ಅನಾಥ ಭಾವದಿಂದ ನೊಂದಿದ್ದಾರೆ. ಆ ನೋವಿನಿಂದಾಗಿ ಹೊರ ಬರಲಾಗದ ವಿದ್ಯಾರ್ಥಿಗಳು ಇದೀಗ ತಮ್ಮ ಕೇಶ ಮುಂಡನ ಮಾಡಿಸಿಕೊಂಡು ತಮ್ಮ ಆರಾಧ್ಯ ದೈವಕ್ಕೆ ನಮಿಸಲು ಮುಂದಾಗಿದ್ದಾರೆ.
ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೇಶ ಮುಂಡನ ಮಾಡಲು ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘ ಮುಂದಾಗಿದೆ. ಈ ಕುರಿತು ಸಮಾಜದ ಮುಖಂಡರು ಕಿರಿಯ ಶ್ರೀಗಳನ್ನು ಭೇಟಿ ಮಾಡಿ ಶನಿವಾರ ಮನವಿ ಸಲ್ಲಿಸಿದ್ದಾರೆ. ಕಿರಿಯ ಶ್ರೀಗಳು ಸಮಾಜದ ಮನವಿಗೆ ಸಮ್ಮತಿ ಸೂಚಿಸಿದ್ದಾರೆ.
ಜ.29 ರಂದು ಸವಿತಾ ಸಮಾಜದ ಸಾವಿರಾರು ಯುವಕರು ಸಿದ್ಧಗಂಗಾ ಮಠದ ವಿದ್ಯಾರ್ಥಿಗಳಿಗೆ ಕೇಶ ಮುಂಡನ ಮಾಡಲಿದ್ದಾರೆ. ಇದು ಒಂದು ಹೊಸ ದಾಖಲೆ ಸೃಷ್ಟಿಸುವ ಸಾಧ್ಯತೆಗಳಿವೆ.