ಆ್ಯಪ್ನಗರ

ಕೋವಿಡ್‌ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಎಚ್‌ಡಿಕೆಗೆ ಸಿಗದ ಬೆಡ್‌! ಸುಧಾಕರ್‌ ಪ್ರತಿಕ್ರಿಯೆ ಏನು?

ಕೋವಿಡ್‌ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಎಚ್‌ಡಿಕೆಗೆ ಸಿಗದ ಬೆಡ್‌ ಎಂಬ ಸುದ್ದಿಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು ಈ ಬಗ್ಗೆ ಏನಂದರು ಎಂಬ ಮಾಹಿತಿ ಇಲ್ಲಿದೆ.

Vijaya Karnataka Web 17 Apr 2021, 2:53 pm

ಹೈಲೈಟ್ಸ್‌:

  • ಕೋವಿಡ್‌ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಎಚ್‌ಡಿಕೆಗೆ ಸಿಗದ ಬೆಡ್‌!
  • ಈ ಆರೋಪದ ಕುರಿತಾಗಿ ಆರೋಗ್ಯ ಸಚಿವ ಸುಧಾಕರ್‌ ಏನಂದರು
  • ಬೆಂಗಳೂರಿನಲ್ಲಿ ಸುಧಾಕರ್‌ ನೀಡಿರುವ ಸ್ಪಷ್ಟೀಕರಣ ಏನು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Karnataka Health Minister K. Sudhakar
ಬೆಂಗಳೂರು: ಕೋವಿಡ್‌ ಸೋಂಕಿತರಾದರೂ ಚಿಕಿತ್ಸೆಗೆ ಮಣಿಪಾಲ್‌ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿಗೆ ಬೆಡ್‌ ಸಿಗಲಿಲ್ಲ ಎಂಬ ವಿಚಾರವನ್ನು ಆರೋಗ್ಯ ಸಚಿವ ಕೆ ಸುಧಾಕರ್‌ ನಿರಾಕರಿಸಿದ್ದಾರೆ.
ಈ ಕುರಿತಾಗಿ ಬೆಂಗಳೂರಿನಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತಾಗಿ ನಾನೇ ಖುದ್ದಾಗಿ ಎಚ್‌ಡಿಕೆ ಬಳಿ ಮಾತಾಡಿದ್ದೇನೆ. ಅಷ್ಟೇ ಅಲ್ಲದೆ ಮಣಿಪಾಲ್ ಅವರ ಜತೆ ಕೂಡ ಮಾತಾಡಿದ್ದೇನೆ. ಮತ್ತೆ ಹೆಚ್ ಡಿ ಕೆ ಜತೆ ಮಾತಾಡಿದಾಗ ಅವರು ಹೇಳಿದರು ನನಗೆ ಸರ್ಜರಿಯಾಗಿದೆ, ಅಪೋಲೊದಲ್ಲಿ ಸಂಬಂಧಪಟ್ಡ ವೈದ್ಯರು ಇದ್ದಾರೆ, ಹಾಗಾಗಿ ನಾನು ಅಲ್ಲಿಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕೋವಿಡ್‌ ಪಾಸಿಟಿವ್‌ ಆದ ಎಚ್‌ಡಿಕೆಗೆ ಬೆಡ್ ಇಲ್ಲ ಎಂದ ಮಣಿಪಾಲ್ ಆಸ್ಪತ್ರೆ!

ಈ ವಿಚಾರವಾಗಿ ಅಪೋಲೋ ಆಸ್ಪತ್ರೆಯ ಸಿಇಒ ಬಳಿ ಸರ್ಕಾರದ ಪರವಾಗಿ ಮಾತನಾಡುತ್ತೇನೆ ಎಂದು ತಿಳಿಸಿದ್ದೆ, ತಾವು ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಅಂತ ತಿಳಿಸಿದ್ದೆ , ಎಚ್‌ಡಿಕೆಗೆ ಈಗ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ರೆಡಿ ಇದೆ ಎಂದರು.

ಬೆಡ್ ಸಿಗಲಿಲ್ಲ ಎಂಬ ಮಾಹಿತಿಯನ್ನು ನಾನೇ ಖುದ್ದಾಗಿ ಹೆಚ್ ಡಿ ಕೆ ಯಿಂದ ಪಡೆದಿದ್ದೇನೆ, ಈ ನಿಟ್ಟಿನಲ್ಲಿ ಅನಗತ್ಯವಾಗಿ ಈ ರೀತಿ ಸುದ್ದಿ ಯಾರು ಹಬ್ಬಿಸಬೇಡಿ ಎಂದು ಸುಧಾಕರ್‌ ಮನವಿ ಮಾಡಿಕೊಂಡಿದ್ದರು.ಕೋವಿಡ್ ಪಾಸಿಟಿವ್ ಆಗಿರುವ ಎಚ್‌ಡಿಕೆಗೆ ಮಣಿಪಾಲ್‌ ಆಸ್ಪತ್ರೆಯಲ್ಲಿ ಬೆಡ್‌ ಸಿಗಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಸ್ಪಷ್ಟೀಕರಣ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ