ಆ್ಯಪ್ನಗರ

22ಕ್ಕೆ ಸುಪ್ರೀಂನಲ್ಲಿ ವಿಚಾರಣೆ, ರಾಜಕೀಯ ಭವಿಷ್ಯದ ಅಳಿವು-ಉಳಿವಿನ ಆತಂಕದಲ್ಲಿ ಅನರ್ಹರು

​ಒಂದು ವೇಳೆ ಸುಪ್ರೀಂಕೋರ್ಟ್‌ ಸ್ಪೀಕರ್‌ ತೀರ್ಮಾನವನ್ನು ಎತ್ತಿ ಹಿಡಿದರೆ ಆಗ ಅನರ್ಹರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ, ಬದಲಿಗೆ ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಬಹುದು.

Vijaya Karnataka 14 Oct 2019, 8:15 pm
ಬೆಂಗಳೂರು: ಶಾಸಕ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್‌ ತೀರ್ಪು ಪ್ರಶ್ನಿಸಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ 17 ಮಂದಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಇದೇ 22 ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅನರ್ಹರು ಅಕ್ಟೋಬರ್‌ 18ಕ್ಕೆ ದಿಲ್ಲಿಗೆ ತೆರಳುತ್ತಿದ್ದಾರೆ.
Vijaya Karnataka Web Disqualified MLA


ದಿಲ್ಲಿ ಭೇಟಿ ಸಂದರ್ಭದಲ್ಲಿಅನರ್ಹ ಶಾಸಕರು ತಮ್ಮ ವಕೀಲರೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ದಾಖಲೆಗಳು ಹಾಗೂ ಮಾಹಿತಿಗಳನ್ನು ಪೂರೈಸಲಿದ್ದಾರೆ. ಬಹುತೇಕ ಶೇ. 70 ರಿಂದ 80 ರಷ್ಟು ವಿಚಾರಣೆ ಮುಗಿದಿದೆ ಎಂದು ವಿಚಾರಣೆ ಹಂತದಲ್ಲೇ ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿಈ ಸಲ ವಿಚಾರಣೆ ಆರಂಭವಾಗಿ ಬಹುತೇಕ ಅಂತಿಮ ತೀರ್ಪು ಹೊರಬೀಳಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಮೂರು ದಿನ ಮೊದಲೇ ದಿಲ್ಲಿಗೆ ತೆರಳುತ್ತಿರುವ ಅನರ್ಹರು ವಿಚಾರಣೆ ಮುಗಿಯುವ ತನಕ ದಿಲ್ಲಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಚುನಾವಣಾ ಆಯೋಗವು ಈ ತಿಂಗಳ 24ಕ್ಕೆ ನಿಗದಿಪಡಿಸಿದ್ದ ಉಪ ಚುನಾವಣೆಯನ್ನು ಡಿಸೆಂಬರ್‌ 5ಕ್ಕೆ ಮುಂದೂಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಮುಂದಿನ ವಿಚಾರಣೆಯನ್ನು ಅ.22ಕ್ಕೆ ನಿಗದಿಪಡಿಸಿತ್ತು. ಅದರಂತೆ ಇದೀಗ ವಿಚಾರಣೆ ನಡೆಯಲಿದೆ.

ಒಂದು ವೇಳೆ ಸುಪ್ರೀಂಕೋರ್ಟ್‌ ಸ್ಪೀಕರ್‌ ತೀರ್ಮಾನವನ್ನು ಎತ್ತಿ ಹಿಡಿದರೆ ಆಗ ಅನರ್ಹರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ, ಬದಲಿಗೆ ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಬಹುದು. ಇಲ್ಲವೇ ಸ್ಪೀಕರ್‌ ತೀರ್ಮಾನಕ್ಕೆ ತಡೆ ನೀಡಿ ಅನರ್ಹಗೊಳಿಸುವ ಮೊದಲೇ ಶಾಸಕರು ಸಲ್ಲಿಸಿರುವ ರಾಜೀನಾಮೆ ಪತ್ರಗಳನ್ನು ಸ್ಪೀಕರ್‌ ಪರಿಗಣಿಸಬೇಕು ಎಂದು ಸೂಚಿಸಿದರೆ ಆಗ ಮತ್ತೆ ರಾಜೀನಾಮೆ ಅಂಗೀಕಾರ ಪ್ರಕ್ರಿಯೆಗಳು ನಡೆಯಬಹುದು. ಹೀಗಾಗಿ ಅನರ್ಹರ ಭವಿಷ್ಯ ಸುಪ್ರೀಂ ತೀರ್ಪಿನ ಮೇಲೆ ನಿಂತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ