ಆ್ಯಪ್ನಗರ

ಬಿಸಿಲ ಬೇಗೆ: ಕರ್ನಾಟಕ ಕೊತ ಕೊತ

ಬರದಿಂದಾಗಿ ಬೆಳೆಗಳು ಸುಟ್ಟು ಹೋಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಜನರು ಮಾತ್ರವಲ್ಲ, ಸಾಕು ಪ್ರಾಣಿ-ಪಕ್ಷಿಗಳು ಕೂಡಾ ನೀರು-ನೆರಳಿಗಾಗಿ ತಹತಹಿಸುತ್ತಿದ್ದು, ಕಾಡು ಪ್ರಾಣಿಗಳಂತೂ ನೀರನ್ನು ಆರಸಿ ನಾಡಿಗೆ ವಲಸೆ ಬರುವ ಸ್ಥಿತಿ ನಿರ್ಮಾಣಗೊಂಡಿದೆ.

Vijaya Karnataka 11 May 2019, 5:30 am
ಬೆಂಗಳೂರು: ಸುಡುವ ಬಿಸಿಲು, ಬರಿದಾಗಿರುವ ಅಂತರ್ಜಲ, ಒಣಗಿ ಹೋದ ಬೆಳೆಗಳು, ಕುಡಿಯುವ ಕೊಡ ನೀರಿಗೂ ತತ್ವಾರ: ಇದು ಬಿಸಿಲ ಬೇಗೆಯ ನಡುವೆ ಜಲಕ್ಷಾಮದಿಂದ ತತ್ತರಿಸುತ್ತಿರುವ ರಾಜ್ಯದ ಬಹುಭಾಗದ ಪರಿಸ್ಥಿತಿ.
Vijaya Karnataka Web ಬಿಸಲ ತಾಪಮಾನ
ಬಿಸಲ ತಾಪಮಾನ


ಬೇಸಿಗೆಯ ತಾಪಕ್ಕೆ ರಾಜ್ಯ ಅಕ್ಷರಶಃ ಕೊತಕೊತ ಕುದಿಯುತ್ತಿದೆ. ಕೆಲವೆಡೆ ಹಗಲಿನ ಕೆಲವು ಹೊತ್ತು ಜನರು ಮನೆಯಿಂದ ಹೊರ ಬರಲಾಗದ ಸ್ಥಿತಿ ಇದೆ. ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ನಡೆಯುವ, ಯಾವತ್ತೋ ಬರುವ ಟ್ಯಾಂಕರ್‌ ನೀರಿಗಾಗಿ ಕಾಯುವ ಚಿತ್ರಗಳು ಎಲ್ಲೆಡೆ ಕಾಣಿಸುತ್ತಿದೆ.


ಬರದಿಂದಾಗಿ ಬೆಳೆಗಳು ಸುಟ್ಟು ಹೋಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಜನರು ಮಾತ್ರವಲ್ಲ, ಸಾಕು ಪ್ರಾಣಿ-ಪಕ್ಷಿಗಳು ಕೂಡಾ ನೀರು-ನೆರಳಿಗಾಗಿ ತಹತಹಿಸುತ್ತಿದ್ದು, ಕಾಡು ಪ್ರಾಣಿಗಳಂತೂ ನೀರನ್ನು ಆರಸಿ ನಾಡಿಗೆ ವಲಸೆ ಬರುವ ಸ್ಥಿತಿ ನಿರ್ಮಾಣಗೊಂಡಿದೆ.

ರಾಜ್ಯದ 176 ತಾಲೂಕುಗಳ ಪೈಕಿ 156ರಲ್ಲಿ ಬರ ಪರಿಸ್ಥಿತಿ ನಿರ್ಮಾಣಗೊಂಡಿರುವುದನ್ನು ಸ್ವತಃ ರಾಜ್ಯ ಸರಕಾರವೇ ಒಪ್ಪಿಕೊಂಡಿದ್ದು, ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಇಡೀ ರಾಜ್ಯ ನೆರವಿಗಾಗಿ ಹಾತೊರೆಯುತ್ತಿದ್ದು, ಪರಿಹಾರ ಕಾರ್ಯ ತ್ವರಿತಗೊಳ್ಳಬೇಕಾಗಿದೆ.

ಮುಂಗಾರುಪೂರ್ವ ಮಳೆ ಕೊರತೆ

ರಾಜ್ಯದಲ್ಲಿ ಬಿಸಿಲ ಬೇಗೆ ಉಲ್ಬಣಗೊಳ್ಳಲು ಮುಂಗಾರುಪೂರ್ವ ಮಳೆ ಕೊರತೆ ಕಾರಣ ಎನ್ನುವುದು ಹವಾಮಾನ ತಜ್ಞರ ಅಭಿಮತ. ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮೇಲ್ಮೈ ಸುಳಿಗಾಳಿ, ಚಂಡಮಾರುತ ಪ್ರಭಾವದಿಂದ ಸ್ವಲ್ಪ ಮಳೆಯಾಗಿದೆಯಾದರೂ ವಾಡಿಕೆಯಷ್ಟು ಮಳೆ ಬಿದ್ದಿಲ್ಲ. ಹೀಗಾಗಿ, ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡಿನಲ್ಲಿ ಪರಿಸ್ಥಿತಿ ಗಂಭೀರವಾಗಿದೆ.

ಸಹಿಸಲಸಾಧ್ಯ ಸೆಕೆ

ರಾಜ್ಯದ ಬಹುಭಾಗಗಳಲ್ಲಿ ಸಹಿಸಲಸಾಧ್ಯ ಸೆಕೆ ಇದೆ. ಮಲೆನಾಡು ಜಿಲ್ಲೆಗಳಾಗದ ಶಿವಮೊಗ್ಗ(35 ಡಿಗ್ರಿ), ಮಡಿಕೇರಿ (26), ಚಿಕ್ಕಮಗಳೂರು (30) ಜಿಲ್ಲೆಗಳಲ್ಲೂ ಈ ಬಾರಿ ವಿಪರೀತ ಬಿಸಿಲು ಕಂಗೆಡಿಸಿದೆ. ತಂಪಿನ ತಾಣವಾದ ಆಗುಂಬೆಯಲ್ಲಿ 33 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿರುವುದು ಬೇಗೆಯ ತೀವ್ರತೆಯನ್ನು ತೋರಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ