ಬೆಂಗಳೂರು : ರಾಜ್ಯದಲ್ಲಿ ಬಿಸಿಲ ಧಗೆ ಆರಂಭವಾಗಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ.
ವಾಯುಭಾರ ಕುಸಿತದಿಂದ ಮಾರ್ಚ್ ಎರಡನೇ ವಾರದಲ್ಲಿ ಮಳೆ ಸುರಿದಿತ್ತು. ಬೇಸಿಗೆ ಮಳೆಯಿಂದಾಗಿ ರಾಜ್ಯದ ಬಹುತೇಕ ಕಡೆ ತಾಪಮಾನ ಕುಸಿದಿತ್ತು. ಈಗ ಬೇಸಿಗೆಯ ನಿಜವಾದ ದಿನಗಳು ಆರಂಭವಾಗಿದ್ದು, ದಿನೇದಿನೆ ಸೆಕೆ ಅಧಿಕವಾಗುತ್ತಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಧಗೆ ಹೆಚ್ಚಿದ್ದು, ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ಗೆ ಏರಿದೆ. ಈ ತಿಂಗಳಾಂತ್ಯದಲ್ಲಿ ಇನ್ನೂ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಲಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ತಾಪಮಾನ 37-38 ಡಿಗ್ರಿ ಸೆಲ್ಸಿಯಸ್ ತಲುಪಿದೆ.
ಹವಾಮಾನ ಇಲಾಖೆಯ ಮಾಹಿತಿಯಂತೆ, ಕಲಬುರ್ಗಿಯಲ್ಲಿ 40.4 ಡಿಗ್ರಿ , ಬಳ್ಳಾರಿಯಲ್ಲಿ 40 ಡಿಗ್ರಿ , ವಿಜಯಪುರದಲ್ಲಿ 38 ಡಿಗ್ರಿ , ಬಾಗಲಕೋಟ, ಹಾವೇರಿ, ಕೊಪ್ಪಳ, ರಾಯಚೂರಿನಲ್ಲಿ 37 ಡಿಗ್ರಿ , ಚಿತ್ರದುರ್ಗ, ಚಾಮರಾಜನಗರದಲ್ಲಿ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
ವಾಯುಭಾರ ಕುಸಿತದಿಂದ ಮಾರ್ಚ್ ಎರಡನೇ ವಾರದಲ್ಲಿ ಮಳೆ ಸುರಿದಿತ್ತು. ಬೇಸಿಗೆ ಮಳೆಯಿಂದಾಗಿ ರಾಜ್ಯದ ಬಹುತೇಕ ಕಡೆ ತಾಪಮಾನ ಕುಸಿದಿತ್ತು. ಈಗ ಬೇಸಿಗೆಯ ನಿಜವಾದ ದಿನಗಳು ಆರಂಭವಾಗಿದ್ದು, ದಿನೇದಿನೆ ಸೆಕೆ ಅಧಿಕವಾಗುತ್ತಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಧಗೆ ಹೆಚ್ಚಿದ್ದು, ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ಗೆ ಏರಿದೆ. ಈ ತಿಂಗಳಾಂತ್ಯದಲ್ಲಿ ಇನ್ನೂ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಲಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ತಾಪಮಾನ 37-38 ಡಿಗ್ರಿ ಸೆಲ್ಸಿಯಸ್ ತಲುಪಿದೆ.
ಹವಾಮಾನ ಇಲಾಖೆಯ ಮಾಹಿತಿಯಂತೆ, ಕಲಬುರ್ಗಿಯಲ್ಲಿ 40.4 ಡಿಗ್ರಿ , ಬಳ್ಳಾರಿಯಲ್ಲಿ 40 ಡಿಗ್ರಿ , ವಿಜಯಪುರದಲ್ಲಿ 38 ಡಿಗ್ರಿ , ಬಾಗಲಕೋಟ, ಹಾವೇರಿ, ಕೊಪ್ಪಳ, ರಾಯಚೂರಿನಲ್ಲಿ 37 ಡಿಗ್ರಿ , ಚಿತ್ರದುರ್ಗ, ಚಾಮರಾಜನಗರದಲ್ಲಿ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.