ಆ್ಯಪ್ನಗರ

ಕರಾವಳಿ, ಮಲೆನಾಡಿನಲ್ಲಿ ಭರ್ಜರಿ ಮಳೆ

ರಾಜ್ಯದ ಬಹುತೇಕ ಭಾಗಗಳನ್ನು ಮುಂಗಾರು ಆವರಿಸಿರುವುದರಿಂದ ಮಳೆ ಜೋರಾಗಿದೆ. ಕರಾವಳಿಯಲ್ಲಿ ಜೂ.14ರ ವರೆಗೆ ಆರೆಂಜ್‌ ಅಲರ್ಟ್‌ ಮತ್ತು ಜೂ.15 ರಂದು ಯೆಲ್ಲೋ ಅಲರ್ಟ್‌ ಘೋಷಿಸ­ಲಾಗಿದೆ.

Vijaya Karnataka Web 12 Jun 2020, 6:50 am
ಬೆಂಗಳೂರು: ನೈಋುತ್ಯ ಮುಂಗಾರು ಕರಾವಳಿ, ಮಲೆನಾಡು ಭಾಗದಲ್ಲಿ ಚುರುಕಾಗಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲೂ ಮಳೆ ಆರಂಭವಾಗಿದೆ. ರಾಜ್ಯದ ಬಹುತೇಕ ಭಾಗಗಳನ್ನು ಮುಂಗಾರು ಆವರಿಸಿರುವುದರಿಂದ ಮಳೆ ಜೋರಾಗಿದೆ. ಕರಾವಳಿಯಲ್ಲಿ ಜೂ.14ರ ವರೆಗೆ ಆರೆಂಜ್‌ ಅಲರ್ಟ್‌ ಮತ್ತು ಜೂ.15 ರಂದು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ಉತ್ತರ ಒಳನಾಡಿನಲ್ಲಿ ಜೂ.13ರ­ವರೆಗೆ ಆರೆಂಜ್‌ ಅಲರ್ಟ್‌ ಹಾಗೂ ಜೂ.14ರಂದು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಜೂ.13ವರೆಗೆ ಆರೆಂಜ್‌ ಅಲರ್ಟ್‌, ಜೂ.14 ರಂದು ಯೆಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂ.11ರಂದು ಮುಂಜಾನೆ 8.30ರ­ ವರೆಗಿನ ವರದಿ ಪ್ರಕಾರ ಉಡುಪಿ ಜಿಲ್ಲೆಯ ಬಡನಿಡಿಯೂರು ವ್ಯಾಪ್ತಿಯಲ್ಲಿ 239 ಮಿ.ಮೀ. ಮಳೆಯಾಗುವ ಮೂಲಕ ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾದ ಪ್ರದೇಶ ಎಂದು ಇಲಾಖೆ ದಾಖಲಿಸಿದೆ. ಕೊಲ್ಲೂರು, ಕುಂದಾಪುರದಲ್ಲಿ 90 ಮಿ.ಮೀ., ಕಾರವಾರ, ಗೈರುಸೊಪ್ಪದಲ್ಲಿ 80 ಮಿ.ಮೀ., ಮಂಗಳೂರು, ಕಾರ್ಕಳ, ಪಣಂಬೂರಿನಲ್ಲಿ 70 ಮಿ.ಮೀ., ಅಂಕೋಲ ಮೂಡಬಿದಿರೆ, ಹೊನ್ನಾ ವರ, ಇಂಡಿಯಲ್ಲಿ 60 ಮಿ.ಮೀ. ಮಳೆ ಸುರಿದಿದೆ.

ಮುಂಗಾರು ಅವಧಿಯಲ್ಲಿ ಈವರೆಗೆ ರಾಜ್ಯದಲ್ಲಿ ಒಟ್ಟು 66.5 ಮಿ.ಮೀ. ಮಳೆ­ಯಾಗಿದೆ. ಈ ಅವಧಿಯಲ್ಲಿ ವಾಡಿಕೆಯಂತೆ 57 ಮಿ.ಮೀ. ಮಳೆಯಾಗುತ್ತದೆ. ಈ ಬಾರಿ ಮುಂಗಾರು ರಾಜ್ಯಕ್ಕೆ ಆಗಮಿಸಿದ ಕೆಲವೇ ದಿನಗಳಲ್ಲಿ ಉತ್ತಮ ಮಳೆ ಆರಂಭವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ