ಆ.8, 9ರಂದು ಭರ್ಜರಿ ಮಳೆ ನಿರೀಕ್ಷೆ : ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್
ರಾಜ್ಯದ ಎಲ್ಲ ಭಾಗಗಳಲ್ಲಿ ಮುಂಗಾರು ಚುರುಕಾಗಿದೆ ಕರಾವಳಿಯ ಎಲ್ಲ ಜಿಲ್ಲೆಗಳು, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಆ...
Vijaya Karnataka 6 Aug 2019, 9:38 am
ಬೆಂಗಳೂರು: ರಾಜ್ಯದ ಎಲ್ಲ ಭಾಗಗಳಲ್ಲಿ ಮುಂಗಾರು ಚುರುಕಾಗಿದೆ. ಕರಾವಳಿಯ ಎಲ್ಲ ಜಿಲ್ಲೆಗಳು, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಆ.8 ಹಾಗೂ 9ರಂದು ಭಾರಿ ಮಳೆಯ (ರೆಡ್ ಅಲರ್ಟ್) ಎಚ್ಚರಿಕೆ ನೀಡಲಾಗಿದೆ.
ಹಲವು ದಿನಗಳಿಂದ ದುರ್ಬಲವಾಗಿದ್ದ ಮುಂಗಾರು ಆಗಸ್ಟ್ ಆರಂಭದಲ್ಲಿ ಮತ್ತೆ ಚುರುಕುಗೊಂಡಿದೆ. ಕೆಲ ದಿನಗಳಿಂದ ಉತ್ತರ ಒಳನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಈಗ ಕರಾವಳಿ, ದಕ್ಷಿಣ ಒಳನಾಡು ಸೇರಿ ರಾಜ್ಯದ ಎಲ್ಲ ಭಾಗಗಳಲ್ಲಿ ಮುಂಗಾರು ಚುರುಕಾಗಿ ಮಳೆ ಬರುತ್ತಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸೋಮವಾರ ಕದ್ರಾದಲ್ಲಿ 170, ಹೊಸನಗರ, ಲಿಂಗನಮಕ್ಕಿಯಲ್ಲಿ 140, ಕೊಲ್ಲೂರು, ಸಿದ್ದಾಪುರದಲ್ಲಿ 130, ಲೊಂಡ, ಕಳಸ, ಆಗುಂಬೆಯಲ್ಲಿ 120, ಕಮ್ಮರಡಿಯಲ್ಲಿ 110, ಮುಲ್ಕಿಯಲ್ಲಿ 100, ಧರ್ಮಸ್ಥಳದಲ್ಲಿ 90, ಹುಂಚದಕಟ್ಟೆ, ಕಾರವಾರದಲ್ಲಿ 80, ಕಿರವತ್ತಿ, ಮಾಣಿ, ಪುತ್ತೂರು, ಗೋಕರ್ಣ, ಹೊನ್ನಾವರ, ಮಂಗಳೂರು, ವಿರಾಜಪೇಟೆ, ತೀರ್ಥಹಳ್ಳಿ, ಮೂಡಿಗೆರೆ, ಅಂಕೋಲದಲ್ಲಿ 70 , ಕಾರ್ಕಳ, ಮಡಿಕೇರಿ, ಕೊಪ್ಪ, ತಾಳಗುಪ್ಪ, ಸಾಗರದಲ್ಲಿ 60, ಹಳಿಯಾಳ, ಮಂಕಿ, ಬನವಾಸಿ, ಸೋಮವಾರಪೇಟೆ, ಸಕಲೇಶಪುರದಲ್ಲಿ 50 ಮಿ.ಮೀ. ಮಳೆ ಸುರಿದಿದೆ.
ಕರಾವಳಿಗೆ ಎಚ್ಚರಿಕೆ
ಅರಬ್ಬಿ ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರೊಂದಿಗೆ ಅಲೆಗಳಬ್ಬರ ಜೋರಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕಿಳಿಯಬಾರದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಳೆ (ಮಿ.ಮೀ.)
ಗರಿಷ್ಠ- 170 ಕದ್ರ
ಕನಿಷ್ಠ-10 ಎಚ್.ಡಿ.ಕೋಟೆ
ಮುಂಗಾರು ಚುರುಕಾಗಿದೆ. ಮಳೆ ಕೊರತೆಯ ಪ್ರಮಾಣ ಕಡಿಮೆಯಾಗುತ್ತಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮೂರಾಲ್ಕು ದಿನ ಮಳೆ ಮುಂದುವರಿಯಲಿದೆ-ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ, ನಿರ್ದೇಶಕ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ
ಹಲವು ದಿನಗಳಿಂದ ದುರ್ಬಲವಾಗಿದ್ದ ಮುಂಗಾರು ಆಗಸ್ಟ್ ಆರಂಭದಲ್ಲಿ ಮತ್ತೆ ಚುರುಕುಗೊಂಡಿದೆ. ಕೆಲ ದಿನಗಳಿಂದ ಉತ್ತರ ಒಳನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಈಗ ಕರಾವಳಿ, ದಕ್ಷಿಣ ಒಳನಾಡು ಸೇರಿ ರಾಜ್ಯದ ಎಲ್ಲ ಭಾಗಗಳಲ್ಲಿ ಮುಂಗಾರು ಚುರುಕಾಗಿ ಮಳೆ ಬರುತ್ತಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸೋಮವಾರ ಕದ್ರಾದಲ್ಲಿ 170, ಹೊಸನಗರ, ಲಿಂಗನಮಕ್ಕಿಯಲ್ಲಿ 140, ಕೊಲ್ಲೂರು, ಸಿದ್ದಾಪುರದಲ್ಲಿ 130, ಲೊಂಡ, ಕಳಸ, ಆಗುಂಬೆಯಲ್ಲಿ 120, ಕಮ್ಮರಡಿಯಲ್ಲಿ 110, ಮುಲ್ಕಿಯಲ್ಲಿ 100, ಧರ್ಮಸ್ಥಳದಲ್ಲಿ 90, ಹುಂಚದಕಟ್ಟೆ, ಕಾರವಾರದಲ್ಲಿ 80, ಕಿರವತ್ತಿ, ಮಾಣಿ, ಪುತ್ತೂರು, ಗೋಕರ್ಣ, ಹೊನ್ನಾವರ, ಮಂಗಳೂರು, ವಿರಾಜಪೇಟೆ, ತೀರ್ಥಹಳ್ಳಿ, ಮೂಡಿಗೆರೆ, ಅಂಕೋಲದಲ್ಲಿ 70 , ಕಾರ್ಕಳ, ಮಡಿಕೇರಿ, ಕೊಪ್ಪ, ತಾಳಗುಪ್ಪ, ಸಾಗರದಲ್ಲಿ 60, ಹಳಿಯಾಳ, ಮಂಕಿ, ಬನವಾಸಿ, ಸೋಮವಾರಪೇಟೆ, ಸಕಲೇಶಪುರದಲ್ಲಿ 50 ಮಿ.ಮೀ. ಮಳೆ ಸುರಿದಿದೆ.
ಕರಾವಳಿಗೆ ಎಚ್ಚರಿಕೆ
ಅರಬ್ಬಿ ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರೊಂದಿಗೆ ಅಲೆಗಳಬ್ಬರ ಜೋರಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕಿಳಿಯಬಾರದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಳೆ (ಮಿ.ಮೀ.)
ಗರಿಷ್ಠ- 170 ಕದ್ರ
ಕನಿಷ್ಠ-10 ಎಚ್.ಡಿ.ಕೋಟೆ
ಮುಂಗಾರು ಚುರುಕಾಗಿದೆ. ಮಳೆ ಕೊರತೆಯ ಪ್ರಮಾಣ ಕಡಿಮೆಯಾಗುತ್ತಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮೂರಾಲ್ಕು ದಿನ ಮಳೆ ಮುಂದುವರಿಯಲಿದೆ-ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ, ನಿರ್ದೇಶಕ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ