ಬೆಂಗಳೂರು: ರಾಜ್ಯದಲ್ಲಿ ಇನ್ನೂ ಕೆಲವು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಕೆಲವು ಕಡೆ ಮುಂದಿನ ನಾಲ್ಕು ದಿನ ಹಗುರದಿಂದ ಕೂಡಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಅ. 24ರಂದು ಕೆಲವು ಕಡೆ ಸಿಡಿಲು, ಮಿಂಚಿನ ಆರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.
ದಕ್ಷಿಣ ಒಳನಾಡಿನ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಮೈಸೂರು, ಹಾಸನ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಮಂಡ್ಯ, ತುಮಕೂರು, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ ಜಲ್ಲೆಗಳಲ್ಲಿ ಮುಂದಿನ ಎರಡು ದಿನ ಸಾಧಾರಣ ಹಾಗೂ ಅ.26ರಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಧಾರವಾಡ, ಕೊಪ್ಪಳ, ಹಾವೇರಿ, ಗದಗ ಜಿಲ್ಲೆಗಳ ಕೆಲವು ಕಡೆ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇದ್ದು, ಅ.27ರಂದು ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ರಾಜ್ಯದಲ್ಲಿ ಮುಂಗಾರು ಶನಿವಾರ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯ ಹಾಗೂ ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಮೈಸೂರ ನಗರದಲ್ಲಿ ತಲಾ 5 ಸೆಂ.ಮೀ, ಹಾಸನ, ಬೆಂಗಳೂರು ನಗರ ಜಿಲ್ಲೆಯ ಹೊಸಕೋಟೆ ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ4 ಸೆಂ.ಮೀ ಚಾಮರಾಜನಗರ ಮಲೆಮಹಾದೇಶ್ವರ, ಚಿಕ್ಕಬಳ್ಳಾಪುರ ತೊಂಡೆಬಾವಿಯಲ್ಲಿ 3 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯಲ್ಲಿಸಾಧಾರಣ ಮಳೆ
ಮಂಗಳೂರು: ಕರಾವಳಿಯಲ್ಲಿ ಮತ್ತೆರಡು ದಿನಗಳ ಕಾಲ ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಶನಿವಾರ 13.4 ಮಿ.ಮೀ ಮಳೆಯಾಗಿದೆ.
ಯೆಲ್ಲೋ ಅಲರ್ಟ್ ನೀಡಿದರ ಪರಿಣಾಮ ಕರಾವಳಿಯ ಗ್ರಾಮೀಣ ಭಾಗದಲ್ಲಿ ಸಂಜೆ ಹೊತ್ತು ಮಳೆಯಾಗುತ್ತಿದೆ. ಅ.26ರ ಬಳಿಕ ರಾಜ್ಯಕ್ಕೆ ಹಿಂಗಾರು ಪ್ರವೇಶ ಆಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಅಲ್ಲಿಯವರೆಗೆ ಸಾಧಾರಣ ಮಳೆಯಾಗುವ ಸರದಿ ಮುಂದುವರಿಯಲಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಒಳಸುಳಿಗಾಳಿಯ ಜತೆಗೆ ವಿಪರೀತ ಒತ್ತಡ ಇರುವುದರಿಂದ ಈ ರೀತಿಯಲ್ಲಿ ಮಳೆಯಾಗುತ್ತಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಹಾವೇರಿಯಲ್ಲಿ ಧಾರಾಕಾರ ಮಳೆ
ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶನಿವಾರ ಮಧ್ಯಾಹ್ನ ಗುಡುಗು ಸಿಡಿಲು ಸಹಿತ ಅರ್ಧ ಗಂಟೆಗೂ ಅಧಿಕ ಹೊತ್ತು ಧಾರಾಕಾರ ಮಳೆ ಸುರಿಯಿತು. ಮಳೆಯಿಂದಾಗಿ ರಸ್ತೆಯ ಮೇಲೆ ನೀರು ಹರಿದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು.
ಕೆಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಕಂಡುಬಂದಿತು. ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಕೊಯ್ಲಿಗೆ ಬಂದಿರುವ ಜೋಳ, ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆಗಳಿಗೆ ಮಳೆಯು ಹಾನಿಯನ್ನುಂಟು ಮಾಡುತ್ತಿದ್ದು, ರೈತರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿತು.
ಹುಣಸೂರು ತಾಲೂಕಿನಲ್ಲಿಭಾರಿ ಮಳೆ
ಹುಣಸೂರು: ತಾಲೂಕಿನಾದ್ಯಂತ ಶನಿವಾರ ಮುಂಜಾನೆ ಸುರಿದ ಗುಡುಗು ಸಹಿತ ಜಡಿ ಮಳೆಗೆ ಅಲ್ಲಲ್ಲಿ ಹಾನಿಯಾಗಿದ್ದರೆ, ತಿಪ್ಪಲಾಪುರದಲ್ಲಿವಿ ದ್ಯುತ್ ತಗುಲಿ ಹಸುವೊಂದು ಸಾವನ್ನಪ್ಪಿದೆ.
ತಾಲೂಕಿನ ಹನಗೋಡು ಹೋಬಳಿಯ ತಿಪ್ಪಲಾಪುರದಲ್ಲಿ ವಿದ್ಯುತ್ ತಗುಲಿ ಸಣ್ಣಮ್ಮರಿಗೆ ಸೇರಿದ ಹಸುವೊಂದು ಮೃತಪಟ್ಟಿದೆ. ಕಸಬಾ ಹೋಬಳಿಯ ಕಾಳೇಗೌಡನಕೊಪ್ಪಲಿನ ಬೋರಯ್ಯರಿಗೆ ಸೇರಿದ ಮನೆ ಚಾವಣಿ ಸಂಪೂರ್ಣ ಬಿದ್ದು ಹೋಗಿದ್ದು, ದಾಸ್ತಾನು ಮಾಡಿದ್ದ ದವಸ-ಧಾನ್ಯ ನೀರಿನಲ್ಲಿ ತೋಯ್ದು ಹೋಗಿದೆ.
ಗ್ರಾಮಾಂತರ ಪ್ರದೇಶದ ಹನಗೋಡು, ಬಿಳಿಕೆರೆ, ಕಸಬಾ ಹೋಬಳಿಯಲ್ಲೂ ಸಾಕಷ್ಟು ಮಳೆಯಾಗಿದ್ದರೆ, ಗಾವಡಗೆರೆ ಭಾಗದಲ್ಲಿ ಸಾಧಾರಣ ಮಳೆ ಬಿದ್ದಿರುವ ಬಗ್ಗೆ ವರದಿಯಾಗಿದೆ. ಸಾಕಷ್ಟು ಬೆಳೆಯೂ ಹಾನಿಯಾಗಿದೆ.
ಸಂತೇಬೆನ್ನೂರು ಮಳೆ ಆರ್ಭಟಕ್ಕೆ 8 ಮನೆಗಳಿಗೆ ಹಾನಿ
ಸಂತೇಬೆನ್ನೂರು (ದಾವಣಗೆರೆ): ಹೋಬಳಿಯಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಯಿಂದ ರೈತ ಸಂಘದ ಜಿಲ್ಲಾಧ್ಯಕ್ಷ, ನಾಗೇನಹಳ್ಳಿಯ ಹಾಲಪ್ಪ ಎಂಬುವರ ಮನೆ ಸಂಪೂರ್ಣ ಹಾನಿಗೀಡಾಗಿದೆ. ಮೇದಿಕೆರೆ ಗ್ರಾಮದ ಹನಮಂತಪ್ಪ, ದೊಡ್ಡಬ್ಬಿಗೆರೆ ಯಂಕಮ್ಮ, ತೊಪೇನಹಳ್ಳಿ ಅಂಜಿನಪ್ಪ, ಯಕ್ಕೆಗೊಂದಿ ಶಾರದಮ್ಮ, ಲೋಕಪ್ಪ, ಮಂಜಮ್ಮ ಹಾಗೂ ಸಿದ್ಧನಮಠ ಗ್ರಾಮದ ಶಶಿಕಲಾ ಎಂಬುವವರ ಮನೆ ಸೇರಿ ಒಟ್ಟು ಎಂಟು ಮನೆಗಳಿಗೆ ಹಾನಿಯಾಗಿದ್ದು, ಸುಮಾರು 6 ಲಕ್ಷ ರೂ. ಮೌಲ್ಯದ ನಷ್ಟ ಸಂಭವಿಸಿದೆ ಎಂದು ಆರ್.ಐ. ವಿಶ್ವನಾಥ್ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆ: ಸರಾಸರಿ 13.4ಮಿ. ಮೀ. ಮಳೆ, 4ಲಕ್ಷ ರೂ. ನಷ್ಟ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 13.4ಮಿ. ಮೀ. ಮಳೆ ಬಿದ್ದಿದೆ, ಸಾರ್ವಜನಿಕ ಆಸ್ತಿಪಾಸ್ತಿಗೆ 4ಲಕ್ಷ ರೂ. ಹಾನಿ ಸಂಭವಿಸಿದೆ.
ಕಾರ್ಕಳ ತಾಲೂಕಿನ ಕಣಜಾರು ಗ್ರಾಮದ ಹರಿಶ್ಚಂದ್ರ (20,000 ರೂ.), ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಶೇಷಿ ಪೂಜಾರ್ತಿ (75,000 ರೂ.), ಅಂಪಾರು ಗ್ರಾಮದ ಗುಣರತ್ನ (80,000 ರೂ.), ಕರುಣಾಕರ (50,000 ರೂ.) ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ.
ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಖಲೀಫ್ (35,000 ರೂ.), ಕುಂದ ಬಾರಂದಾಡಿ ಗ್ರಾಮದ ಪ್ರೇಮಾ ಪೂಜಾರ್ತಿ (40,000 ರೂ.) ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದ್ದರೆ ಹೆಂಗವಳ್ಳಿ ಗ್ರಾಮದ ಹಾಲು ಡೈರಿಗೆ ಸಿಡಿಲು ಬಡಿದು ವಿದ್ಯುತ್ ಉಪಕರಣ ಹಾನಿಯಿಂದ 1,00,000 ರೂ. ನಷ್ಟವಾಗಿದೆ.
ಮಳೆ ಎಷ್ಟು?
ಉಡುಪಿ: 7.1ಮಿ.ಮೀ., ಬ್ರಹ್ಮಾವರ: 24.7ಮಿ. ಮೀ., ಕಾಪು: 13.7ಮಿ. ಮೀ., ಕುಂದಾಪುರ: 2.5ಮಿ. ಮೀ., ಬೈಂದೂರು: 1.3ಮಿ. ಮೀ., ಕಾರ್ಕಳ: 23.6ಮಿ. ಮೀ., ಹೆಬ್ರಿ: 27.8ಮಿ. ಮೀ.
ಕೇರಳದಲ್ಲಿ ಮತ್ತೆ ಮಳೆ ಅಬ್ಬರ, ಉತ್ತರಾಖಂಡದಲ್ಲಿ 75 ಸಾವು
ಕೊಟ್ಟಾಯಂ: ಕೇರಳದ ಕೊಟ್ಟಾಯಂ ಮತ್ತು ಪಥನಂತಿಟ್ಟ ಜಿಲ್ಲೆಗಳಲ್ಲಿ ಶನಿವಾರ ಮತ್ತೆ ಮಳೆ ಆರ್ಭಟಿಸುತ್ತಿದೆ. ಇದರಿಂದ ಈ ಜಿಲ್ಲೆಗಳಲ್ಲಿ ಪುನಃ ಪ್ರವಾಹ ಭೀತಿ ಎದುರಾಗಿದೆ. ಪಥನಂತಿಟ್ಟದಲ್ಲಿ ಪುನಃ ಭೂಕುಸಿತ ಸಂಭವಿಸಿದೆ. ಈ ನಡುವೆ, ರಾಜ್ಯಾದ್ಯಂತ ಸೋಮವಾರದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅತ್ತ ಉತ್ತರಾಖಂಡದಲ್ಲಿ ಲಮ್ಖಾಗಾ ಪಾಸ್ನಲ್ಲಿ ಶನಿವಾರ ಮತ್ತಿಬ್ಬರು ಚಾರಣಿಗರ ಮೃತದೇಹ ಪತ್ತೆಯಾಗಿದ್ದು, ಮೃತರ ಸಂಖ್ಯೆ 75ಕ್ಕೆ ಏರಿದೆ. ಜಮ್ಮು-ಕಾಶ್ಮೀರದಲ್ಲಿಯೂ ಭಾರಿ ಮಳೆಯಿಂದಾಗಿ ಹಲವೆಡೆ ಹಿಮಕುಸಿತಗಳು ಸಂಭವಿಸಿವೆ. ದಿಲ್ಲಿಯಲ್ಲಿ ಭಾನುವಾರ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಮೈಸೂರು, ಹಾಸನ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಮಂಡ್ಯ, ತುಮಕೂರು, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ ಜಲ್ಲೆಗಳಲ್ಲಿ ಮುಂದಿನ ಎರಡು ದಿನ ಸಾಧಾರಣ ಹಾಗೂ ಅ.26ರಂದು ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಧಾರವಾಡ, ಕೊಪ್ಪಳ, ಹಾವೇರಿ, ಗದಗ ಜಿಲ್ಲೆಗಳ ಕೆಲವು ಕಡೆ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇದ್ದು, ಅ.27ರಂದು ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ರಾಜ್ಯದಲ್ಲಿ ಮುಂಗಾರು ಶನಿವಾರ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯ ಹಾಗೂ ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಮೈಸೂರ ನಗರದಲ್ಲಿ ತಲಾ 5 ಸೆಂ.ಮೀ, ಹಾಸನ, ಬೆಂಗಳೂರು ನಗರ ಜಿಲ್ಲೆಯ ಹೊಸಕೋಟೆ ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ4 ಸೆಂ.ಮೀ ಚಾಮರಾಜನಗರ ಮಲೆಮಹಾದೇಶ್ವರ, ಚಿಕ್ಕಬಳ್ಳಾಪುರ ತೊಂಡೆಬಾವಿಯಲ್ಲಿ 3 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯಲ್ಲಿಸಾಧಾರಣ ಮಳೆ
ಮಂಗಳೂರು: ಕರಾವಳಿಯಲ್ಲಿ ಮತ್ತೆರಡು ದಿನಗಳ ಕಾಲ ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಶನಿವಾರ 13.4 ಮಿ.ಮೀ ಮಳೆಯಾಗಿದೆ.
ಯೆಲ್ಲೋ ಅಲರ್ಟ್ ನೀಡಿದರ ಪರಿಣಾಮ ಕರಾವಳಿಯ ಗ್ರಾಮೀಣ ಭಾಗದಲ್ಲಿ ಸಂಜೆ ಹೊತ್ತು ಮಳೆಯಾಗುತ್ತಿದೆ. ಅ.26ರ ಬಳಿಕ ರಾಜ್ಯಕ್ಕೆ ಹಿಂಗಾರು ಪ್ರವೇಶ ಆಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಅಲ್ಲಿಯವರೆಗೆ ಸಾಧಾರಣ ಮಳೆಯಾಗುವ ಸರದಿ ಮುಂದುವರಿಯಲಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಒಳಸುಳಿಗಾಳಿಯ ಜತೆಗೆ ವಿಪರೀತ ಒತ್ತಡ ಇರುವುದರಿಂದ ಈ ರೀತಿಯಲ್ಲಿ ಮಳೆಯಾಗುತ್ತಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಹಾವೇರಿಯಲ್ಲಿ ಧಾರಾಕಾರ ಮಳೆ
ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶನಿವಾರ ಮಧ್ಯಾಹ್ನ ಗುಡುಗು ಸಿಡಿಲು ಸಹಿತ ಅರ್ಧ ಗಂಟೆಗೂ ಅಧಿಕ ಹೊತ್ತು ಧಾರಾಕಾರ ಮಳೆ ಸುರಿಯಿತು. ಮಳೆಯಿಂದಾಗಿ ರಸ್ತೆಯ ಮೇಲೆ ನೀರು ಹರಿದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು.
ಕೆಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಕಂಡುಬಂದಿತು. ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಕೊಯ್ಲಿಗೆ ಬಂದಿರುವ ಜೋಳ, ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆಗಳಿಗೆ ಮಳೆಯು ಹಾನಿಯನ್ನುಂಟು ಮಾಡುತ್ತಿದ್ದು, ರೈತರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿತು.
ಹುಣಸೂರು ತಾಲೂಕಿನಲ್ಲಿಭಾರಿ ಮಳೆ
ಹುಣಸೂರು: ತಾಲೂಕಿನಾದ್ಯಂತ ಶನಿವಾರ ಮುಂಜಾನೆ ಸುರಿದ ಗುಡುಗು ಸಹಿತ ಜಡಿ ಮಳೆಗೆ ಅಲ್ಲಲ್ಲಿ ಹಾನಿಯಾಗಿದ್ದರೆ, ತಿಪ್ಪಲಾಪುರದಲ್ಲಿವಿ ದ್ಯುತ್ ತಗುಲಿ ಹಸುವೊಂದು ಸಾವನ್ನಪ್ಪಿದೆ.
ತಾಲೂಕಿನ ಹನಗೋಡು ಹೋಬಳಿಯ ತಿಪ್ಪಲಾಪುರದಲ್ಲಿ ವಿದ್ಯುತ್ ತಗುಲಿ ಸಣ್ಣಮ್ಮರಿಗೆ ಸೇರಿದ ಹಸುವೊಂದು ಮೃತಪಟ್ಟಿದೆ. ಕಸಬಾ ಹೋಬಳಿಯ ಕಾಳೇಗೌಡನಕೊಪ್ಪಲಿನ ಬೋರಯ್ಯರಿಗೆ ಸೇರಿದ ಮನೆ ಚಾವಣಿ ಸಂಪೂರ್ಣ ಬಿದ್ದು ಹೋಗಿದ್ದು, ದಾಸ್ತಾನು ಮಾಡಿದ್ದ ದವಸ-ಧಾನ್ಯ ನೀರಿನಲ್ಲಿ ತೋಯ್ದು ಹೋಗಿದೆ.
ಗ್ರಾಮಾಂತರ ಪ್ರದೇಶದ ಹನಗೋಡು, ಬಿಳಿಕೆರೆ, ಕಸಬಾ ಹೋಬಳಿಯಲ್ಲೂ ಸಾಕಷ್ಟು ಮಳೆಯಾಗಿದ್ದರೆ, ಗಾವಡಗೆರೆ ಭಾಗದಲ್ಲಿ ಸಾಧಾರಣ ಮಳೆ ಬಿದ್ದಿರುವ ಬಗ್ಗೆ ವರದಿಯಾಗಿದೆ. ಸಾಕಷ್ಟು ಬೆಳೆಯೂ ಹಾನಿಯಾಗಿದೆ.
ಸಂತೇಬೆನ್ನೂರು ಮಳೆ ಆರ್ಭಟಕ್ಕೆ 8 ಮನೆಗಳಿಗೆ ಹಾನಿ
ಸಂತೇಬೆನ್ನೂರು (ದಾವಣಗೆರೆ): ಹೋಬಳಿಯಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಯಿಂದ ರೈತ ಸಂಘದ ಜಿಲ್ಲಾಧ್ಯಕ್ಷ, ನಾಗೇನಹಳ್ಳಿಯ ಹಾಲಪ್ಪ ಎಂಬುವರ ಮನೆ ಸಂಪೂರ್ಣ ಹಾನಿಗೀಡಾಗಿದೆ. ಮೇದಿಕೆರೆ ಗ್ರಾಮದ ಹನಮಂತಪ್ಪ, ದೊಡ್ಡಬ್ಬಿಗೆರೆ ಯಂಕಮ್ಮ, ತೊಪೇನಹಳ್ಳಿ ಅಂಜಿನಪ್ಪ, ಯಕ್ಕೆಗೊಂದಿ ಶಾರದಮ್ಮ, ಲೋಕಪ್ಪ, ಮಂಜಮ್ಮ ಹಾಗೂ ಸಿದ್ಧನಮಠ ಗ್ರಾಮದ ಶಶಿಕಲಾ ಎಂಬುವವರ ಮನೆ ಸೇರಿ ಒಟ್ಟು ಎಂಟು ಮನೆಗಳಿಗೆ ಹಾನಿಯಾಗಿದ್ದು, ಸುಮಾರು 6 ಲಕ್ಷ ರೂ. ಮೌಲ್ಯದ ನಷ್ಟ ಸಂಭವಿಸಿದೆ ಎಂದು ಆರ್.ಐ. ವಿಶ್ವನಾಥ್ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆ: ಸರಾಸರಿ 13.4ಮಿ. ಮೀ. ಮಳೆ, 4ಲಕ್ಷ ರೂ. ನಷ್ಟ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 13.4ಮಿ. ಮೀ. ಮಳೆ ಬಿದ್ದಿದೆ, ಸಾರ್ವಜನಿಕ ಆಸ್ತಿಪಾಸ್ತಿಗೆ 4ಲಕ್ಷ ರೂ. ಹಾನಿ ಸಂಭವಿಸಿದೆ.
ಕಾರ್ಕಳ ತಾಲೂಕಿನ ಕಣಜಾರು ಗ್ರಾಮದ ಹರಿಶ್ಚಂದ್ರ (20,000 ರೂ.), ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಶೇಷಿ ಪೂಜಾರ್ತಿ (75,000 ರೂ.), ಅಂಪಾರು ಗ್ರಾಮದ ಗುಣರತ್ನ (80,000 ರೂ.), ಕರುಣಾಕರ (50,000 ರೂ.) ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ.
ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಖಲೀಫ್ (35,000 ರೂ.), ಕುಂದ ಬಾರಂದಾಡಿ ಗ್ರಾಮದ ಪ್ರೇಮಾ ಪೂಜಾರ್ತಿ (40,000 ರೂ.) ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದ್ದರೆ ಹೆಂಗವಳ್ಳಿ ಗ್ರಾಮದ ಹಾಲು ಡೈರಿಗೆ ಸಿಡಿಲು ಬಡಿದು ವಿದ್ಯುತ್ ಉಪಕರಣ ಹಾನಿಯಿಂದ 1,00,000 ರೂ. ನಷ್ಟವಾಗಿದೆ.
ಮಳೆ ಎಷ್ಟು?
ಉಡುಪಿ: 7.1ಮಿ.ಮೀ., ಬ್ರಹ್ಮಾವರ: 24.7ಮಿ. ಮೀ., ಕಾಪು: 13.7ಮಿ. ಮೀ., ಕುಂದಾಪುರ: 2.5ಮಿ. ಮೀ., ಬೈಂದೂರು: 1.3ಮಿ. ಮೀ., ಕಾರ್ಕಳ: 23.6ಮಿ. ಮೀ., ಹೆಬ್ರಿ: 27.8ಮಿ. ಮೀ.
ಕೇರಳದಲ್ಲಿ ಮತ್ತೆ ಮಳೆ ಅಬ್ಬರ, ಉತ್ತರಾಖಂಡದಲ್ಲಿ 75 ಸಾವು
ಕೊಟ್ಟಾಯಂ: ಕೇರಳದ ಕೊಟ್ಟಾಯಂ ಮತ್ತು ಪಥನಂತಿಟ್ಟ ಜಿಲ್ಲೆಗಳಲ್ಲಿ ಶನಿವಾರ ಮತ್ತೆ ಮಳೆ ಆರ್ಭಟಿಸುತ್ತಿದೆ. ಇದರಿಂದ ಈ ಜಿಲ್ಲೆಗಳಲ್ಲಿ ಪುನಃ ಪ್ರವಾಹ ಭೀತಿ ಎದುರಾಗಿದೆ. ಪಥನಂತಿಟ್ಟದಲ್ಲಿ ಪುನಃ ಭೂಕುಸಿತ ಸಂಭವಿಸಿದೆ. ಈ ನಡುವೆ, ರಾಜ್ಯಾದ್ಯಂತ ಸೋಮವಾರದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅತ್ತ ಉತ್ತರಾಖಂಡದಲ್ಲಿ ಲಮ್ಖಾಗಾ ಪಾಸ್ನಲ್ಲಿ ಶನಿವಾರ ಮತ್ತಿಬ್ಬರು ಚಾರಣಿಗರ ಮೃತದೇಹ ಪತ್ತೆಯಾಗಿದ್ದು, ಮೃತರ ಸಂಖ್ಯೆ 75ಕ್ಕೆ ಏರಿದೆ. ಜಮ್ಮು-ಕಾಶ್ಮೀರದಲ್ಲಿಯೂ ಭಾರಿ ಮಳೆಯಿಂದಾಗಿ ಹಲವೆಡೆ ಹಿಮಕುಸಿತಗಳು ಸಂಭವಿಸಿವೆ. ದಿಲ್ಲಿಯಲ್ಲಿ ಭಾನುವಾರ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.