ಆ್ಯಪ್ನಗರ

ಉತ್ತರ ಕರ್ನಾಟಕ: ಮಳೆ ಅಬ್ಬರಕ್ಕೆ ಜನ ತತ್ತರ, ಸಿಡಿಲಿಗೆ 11 ಬಲಿ

ಉತ್ತರ ಕರ್ನಾಟಕ ಭಾಗದ ಬಹುತೇಕ ಭಾಗಗಳಲ್ಲಿ ಭಾನುವಾರ ಅಕಾಲಿಕ ಮಳೆ ಸುರಿದೆ. ಸಿಡಿಲು-ಗುಡುಗು, ಗಾಳಿ ಮಳೆಗೆ ಮೂವರು ಮಕ್ಕಳು ಸೇರಿದಂತೆ ಹನ್ನೊಂದು ಮಂದಿ ಬಲಿಯಾಗಿದ್ದಾರೆ.

Vijaya Karnataka 16 Apr 2018, 7:17 am
ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಬಹುತೇಕ ಭಾಗಗಳಲ್ಲಿ ಭಾನುವಾರ ಅಕಾಲಿಕ ಮಳೆ ಸುರಿದೆ. ಸಿಡಿಲು-ಗುಡುಗು, ಗಾಳಿ ಮಳೆಗೆ ಮೂವರು ಮಕ್ಕಳು ಸೇರಿದಂತೆ ಹನ್ನೊಂದು ಮಂದಿ ಬಲಿಯಾಗಿದ್ದಾರೆ.
Vijaya Karnataka Web rain


ಏಕಾಏಕಿ ಸುರಿದ ಭಾರಿ ಮಳೆಯ ಅಬ್ಬರಕ್ಕೆ ಬೀದರ್‌, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟ ಜಿಲ್ಲೆಯ ಅನೇಕ ಕಡೆ ಧಾರಾಕಾರ ಮಳೆ ಬಿದ್ದಿದೆ. ನೂರಾರು ಕುರಿ, ಕೋಳಿಗಳೂ ಸಿಡಿಲಿಗೆ ಆಹುತಿಯಾಗಿವೆ. ಕೊಪ್ಪಳ ಜಿಲ್ಲೆಯ ಅನೇಕ ಕಡೆ ಆಲಿಕಲ್ಲು ಮಳೆ ಬಿದ್ದಿದ್ದು ನೂರಾರು ಎಕರೆ ಭತ್ತದ ಬೆಳೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಬಾದಾಮಿ ತಾಲೂಕು ನೀಲಗುಂದ ಗ್ರಾಮದ ಹೊರವಲಯದ ಜಮೀನಿನ ಶೆಡ್‌ನಲ್ಲಿದ್ದ ಆಕಳನ್ನು ಮನೆಗೆ ಬಿಡಲು ತೆರಳಿದ್ದಾಗ ಸಿಡಿಲು ಬಡಿದು ರೈತ ಮತ್ತು ಹಸು ಮೃತಪಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ