ಆ್ಯಪ್ನಗರ

ರಾಜ್ಯದಲ್ಲೂ ಹಕ್ಕಿಜ್ವರ ಭೀತಿ..! ಎಲ್ಲೆಡೆ ಹೈಅಲರ್ಟ್‌; ಸಂಕಷ್ಟಕ್ಕೆ ಸಿಲುಕಿದ ಕುಕ್ಕುಟೋದ್ಯಮ..!

ಹಕ್ಕಿ ಜ್ವರದ ಭೀತಿ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ ಮುಂದಿನ 10 ದಿನಗಳವರೆಗೆ ಕೋಳಿಮಾಂಸ ತರಿಸಿಕೊಳ್ಳುವುದಕ್ಕೆ ಮಧ್ಯಪ್ರದೇಶ ಸರಕಾರ ನಿರ್ಬಂಧ ಹೇರಿದೆ. ಇಂದೋರ್‌, ಮಾಲ್ವಾ, ಅಗರ್‌, ಮಂದ್‌ಸೌರ್‌ನಲ್ಲಿ ಇತ್ತೀಚೆಗೆ ಭಾರಿ ಸಂಖ್ಯೆಯಲ್ಲಿ ಕಾಗೆಗಳು ಮೃತಪಟ್ಟಿವೆ.

Vijaya Karnataka Web 7 Jan 2021, 7:52 am
ಬೆಂಗಳೂರು: ಕೇರಳದಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರ ಸೋಂಕು ರಾಜ್ಯದಲ್ಲೂ ಕಾಣಿಸಿಕೊಳ್ಳುವ ಭೀತಿ ಎದುರಾಗಿದ್ದು, ಎಲ್ಲ ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಕೋಳಿ ಶೀತ ಜ್ವರದ ಬಾಧೆಯಿಂದ ಕುಕ್ಕುಟೋದ್ಯಮ ಸಂಕಷ್ಟಕ್ಕೆ ಸಿಲುಕಿದೆ.
Vijaya Karnataka Web Bird flu  image
Representative image.


ಸದ್ಯ ರಾಜ್ಯದಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಆದರೆ ಕೋಳಿಶೀತ ಜ್ವರದ ಸರ್ವೇಕ್ಷಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅವರು, ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.

ಬಡವ ನೀನ್‌ ಮಡಗ್ದಂಗೆ ಇರು ಎಂಬಂತೆ ಸುಮ್ಮನಿದ್ದೇವೆ; ಸರ್ಕಾರದ ವಿರುದ್ಧ ಬಿಜೆಪಿ ಶಾಸಕ

ಈ ನಡುವೆ, ಹಕ್ಕಿ ಜ್ವರ ಸೋಂಕಿನ ಖಚಿತೆಗಾಗಿ ಮಂಗಳೂರಿನ ಮಂಜನಾಡಿ ಗ್ರಾಮದ ಆರಂಗಡಿಯಲ್ಲಿ ಮಂಗಳವಾರ ಸತ್ತ 6 ಕಾಗೆಗಳ ಕಳೇಬರಹವನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಎಸ್‌ಆರ್‌ಡಿಎಲ್‌ ಲ್ಯಾಬ್‌ಗೆ ಕಳುಹಿಸಲಾಗಿದೆ.

ಆಮದಿಗೆ ನಿಷೇಧ
ಹಕ್ಕಿ ಜ್ವರದ ಭೀತಿ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ ಮುಂದಿನ 10 ದಿನಗಳವರೆಗೆ ಕೋಳಿಮಾಂಸ ತರಿಸಿಕೊಳ್ಳುವುದಕ್ಕೆ ಮಧ್ಯಪ್ರದೇಶ ಸರಕಾರ ನಿರ್ಬಂಧ ಹೇರಿದೆ. ಇಂದೋರ್‌, ಮಾಲ್ವಾ, ಅಗರ್‌, ಮಂದ್‌ಸೌರ್‌ನಲ್ಲಿ ಇತ್ತೀಚೆಗೆ ಭಾರಿ ಸಂಖ್ಯೆಯಲ್ಲಿ ಕಾಗೆಗಳು ಮೃತಪಟ್ಟಿವೆ. ಎಚ್‌5ಎನ್‌8 (ಹಕ್ಕಿ ಜ್ವರ) ಸೋಂಕಿನ ವೈರಾಣು ಮೃತ ಕಾಗೆಗಳಲ್ಲಿ ಪತ್ತೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಆಮದಿಗೆ ಸರಕಾರ ನಿಷೇಧ ವಿಧಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ