ಆ್ಯಪ್ನಗರ

ಆದೇಶ ಪಾಲಿಸದ ಅಧಿಕಾರಿಗಳನ್ನು ಜೈಲಿಗಟ್ಟಬೇಕಾಗುತ್ತದೆ: ಹೈಕೋರ್ಟ್‌

ನ್ಯಾಯಾಲಯಗಳ ಆದೇಶಗಳಿಗೆ ಕ್ಯಾರೇ ಎನ್ನದ ಅಧಿಕಾರಿಗಳನ್ನು ಜೈಲಿಗೆ ಹಾಕಿದರೆ ಮಾತ್ರ ಎಲ್ಲರಿಗೂ ಬುದ್ಧಿ ಬರುತ್ತದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಬಿ.ವೀರಪ್ಪ ಬುಧವಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Vijaya Karnataka Web 12 Jul 2018, 11:48 am
ಬೆಂಗಳೂರು: ನ್ಯಾಯಾಲಯಗಳ ಆದೇಶಗಳಿಗೆ ಕ್ಯಾರೇ ಎನ್ನದ ಅಧಿಕಾರಿಗಳನ್ನು ಜೈಲಿಗೆ ಹಾಕಿದರೆ ಮಾತ್ರ ಎಲ್ಲರಿಗೂ ಬುದ್ಧಿ ಬರುತ್ತದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಬಿ.ವೀರಪ್ಪ ಬುಧವಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web court jpge


ಬಾರ್‌ವೊಂದರ ಪರವಾನಗಿ ರದ್ಧತಿ ಪ್ರಕರಣದಲ್ಲಿ ಮೇ 28ರಂದು ತಾವು ಹೊರಡಿಸಿದ್ದ ಆದೇಶ ಪಾಲಿಸದಕ್ಕೆ ಕೆಂಡಾಮಂಡಲರಾದ ನ್ಯಾಯಮೂರ್ತಿಗಳು, ಅಧಿಕಾರಿಗಳ ವರ್ತನೆಗೆ ಛೀಮಾರಿ ಹಾಕಿದರು. ಹೈಕೋರ್ಟ್‌ ಆದೇಶ ಹೊರಡಿಸಿ ಒಂದೂವರೆ ತಿಂಗಳು ಕಳೆದರೂ ಏಕೆ ಪಾಲಿಸಿಲ್ಲ? ಅಬಕಾರಿ ಆಯುಕ್ತರು ಈವರೆಗೆ ಏನು ಮಾಡುತ್ತಿದ್ದರು? ಕೆ.ಪಿ.ಗ್ರೂಪ್‌ ಅರ್ಜಿ ವಿಚಾರಣೆ ನಡೆಸಿ ಆದೇಶ ಹೊರಡಿಸಲು ಅವರಿಗೆ ಅಡ್ಡಿಯೇನು? ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದಿಲ್ಲ. ಕಚೇರಿಯಲ್ಲಿ ಕೂತು ಬೇರೆ ವ್ಯವಹಾರಗಳನ್ನು ನಡೆಸುತ್ತಾರೆ ಎಂದು ಚಾಟಿ ಬೀಸಿದರು.

ಅಲ್ಲದೆ, ಸರಕಾರಿ ಅಧಿಕಾರಿಗಳು ಕೋರ್ಟ್‌ ಆದೇಶಕ್ಕೇ ಗೌರವ ಕೊಡುವುದಿಲ್ಲ ಎನ್ನುವುದಾದರೆ, ಇನ್ಯಾವುದನ್ನು ಗೌರವಿಸುತ್ತಾರೆ. ನ್ಯಾಯಾಲಯವು ತಮಾಷೆಗೆ ಆದೇಶಗಳನ್ನು ಹೊರಡಿಸುತ್ತದೆಯೇ? ಹತ್ತು ಮಂದಿ ಅಧಿಕಾರಿಗಳಿಗೆ ಜೈಲಿಗೆ ಕಳುಹಿಸಿದರೆ ಮಾತ್ರ ಬುದ್ಧಿ ಬರುತ್ತದೆ’’ ಎಂದು ಖಡಕ್‌ ಆಗಿ ನುಡಿದರು.

ನಂತರ ಬೆಂಗಳೂರು ನಗರ ಅಬಕಾರಿ ಆಯುಕ್ತರು (ಪೂರ್ವ), ಅರ್ಜಿದಾರರಾದ ಕೆ.ಪಿ.ಗ್ರೂಪ್‌ ಸಲ್ಲಿಸಿರುವ ಅಪೀಲ್‌ ಅನ್ನು ಜು.16ರೊಳಗೆ ಪರಿಗಣಿಸಿ ಆದೇಶ ಹೊರಡಿಸಬೇಕು. ತಪ್ಪಿದರೆ ಜು. 17ರಂದು ಅವರು ಕೋರ್ಟ್‌ಗೆ ಹಾಜರಾಗಬೇಕು ಎಂದು ನ್ಯಾಯಮೂರ್ತಿ ನಿರ್ದೇಶಿಸಿದರು. ಆದೇಶ ಪಾಲಿಸದಿದ್ದರೆ ಆಯುಕ್ತರ ವಿರುದ್ಧ ನ್ಯಾಯಾಲಯ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದೂ ಮೌಖಿಕ ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ