ವಿಕ ಸುದ್ದಿಲೋಕ ಬೆಂಗಳೂರು
ಜಿಂದಾಲ್ ಸಂಸ್ಥೆಗೆ 3667 ಎಕರೆ ಭೂಮಿಯನ್ನು ಅಲ್ಪಮೊತ್ತಕ್ಕೆ ಮಾರಾಟ ಮಾಡಲು ಹೊರಟಿದ್ದ ರಾಜ್ಯ ಸರಕಾರದ ವಿರುದ್ಧ 'ಪತ್ರ ಸಮರ' ಸಾರಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್ ತಮ್ಮ ಹೋರಾಟ ಮತ್ತೆ ಮುಂದುವರಿಸಿದ್ದಾರೆ. ಭೂ ಹಸ್ತಾಂತರದ ಬಗ್ಗೆ ಪರಿಶೀಲನೆ ನಡೆಸಲು ರಚಿಸಿರುವ ಸಂಪುಟ ಉಪಸಮಿತಿ ಅಧ್ಯಕ್ಷ ಗೃಹ ಸಚಿವ ಎಂ.ಬಿ.ಪಾಟೀಲ್ಗೆ ಈ ಬಾರಿ ಪತ್ರ ಬರೆದಿರುವ ಅವರು ಜಿಂದಾಲ್ಗೆ ನೀಡುವ ಭೂಮಿಯ ಗರ್ಭದಲ್ಲಿನ ಖನಿಜ ಸಂಪತ್ತಿನ ಒಡೆತನ ಯಾರಿಗೆ ಸೇರಿದ್ದೆಂಬ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು, ತೋರಣಗಲ್, ಕರೆಕುಪ್ಪ, ಮೂಸೆನಾಯಕನಹಳ್ಳಿ, ಯರಬನಹಳ್ಳಿ ಗ್ರಾಮದ 3667 ಎಕರೆ ಭೂಮಿಯನ್ನು ಅಲ್ಪ ಮೊತ್ತಕ್ಕೆ (ಪ್ರತಿ ಎಕರೆಗೆ 1.22 ಲಕ್ಷ ರೂ. ) ಮಾರಾಟ ಮಾಡಲು ರಾಜ್ಯ ಸಚಿವ ಸಂಪುಟ ಈ ಹಿಂದೆ ನಿರ್ಣಯ ತೆಗೆದುಕೊಂಡಿತ್ತು. ಇದನ್ನು ಖಂಡಿಸಿ ಎಚ್.ಕೆ.ಪಾಟೀಲ್ ಸರಕಾರಕ್ಕೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದರಿಂದ ಸರಕಾರ ಮುಜುಗರಕ್ಕೆ ಒಳಗಾಗಿತ್ತು. ಜತೆಗೆ ಪ್ರತಿಪಕ್ಷ ಬಿಜೆಪಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ನಿರ್ಣಯ ಸ್ಥಗಿತಗೊಳಿಸಿದ್ದ ರಾಜ್ಯ ಸರಕಾರ ಪುನರ್ ಪರಿಶೀಲನೆಗೆ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿತ್ತು.
ಆದರೆ, ಸಮಿತಿ ತನ್ನ ಮೊದಲ ಸಭೆ ನಡೆಸುವುದಕ್ಕೆ ಮುನ್ನವೇ ಗೃಹ ಸಚಿವ ಎಂ.ಬಿ.ಪಾಟೀಲ್ಗೆ ಪತ್ರ ಬರೆದಿರುವ ಎಚ್.ಕೆ.ಪಾಟೀಲ್ ಕೆಲ ತಾರ್ಕಿಕ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಮಾರಾಟ ಮಾಡಿದ ಭೂಮಿಯೊಳಗಿನ ಖನಿಜ ಸಂಪತ್ತು ಹಾಗೂ ನಿಕ್ಷೇಪಗಳ ಒಡೆತನ ಯಾರಿಗೆ ಸೇರುತ್ತದೆ ಎಂಬ ಬಗ್ಗೆ ಸರಕಾರ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪಾಟೀಲ್ ಪತ್ರದ ಮುಖ್ಯಾಂಶಗಳು
- ಭೂ ಮಾರಾಟದ ಬಳಿಕ ಆ ಸ್ಥಳದ ಮೂರು ಅಡಿ ಆಳದಿಂದ ಭೂಗರ್ಭದ ಒಳಗಿರುವ ಖನಿಜ, ನಿಕ್ಷೇಪ, ಇನ್ನಿತರ ಸಂಪತ್ತುಗಳು ಮಾಲೀಕನಿಗೆ ಸೇರುತ್ತದೆ ಎಂದು 2014ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಗಣಿ ಹಾಗೂ ಖನಿಜ ಸಂಪತ್ತು ನಿಯಂತ್ರಣ ಹಾಗೂ ಅಭಿವೃದ್ಧಿ ಕಾಯಿದೆಯ ಅಧಿಸೂಚನೆಯಲ್ಲಿ ವ್ಯಾಖ್ಯಾನಿಸಿದೆ. ಹೀಗಾಗಿ ಹಾಲಿ ಪ್ರಕರಣದಲ್ಲಿ ಅದು ಜಿಂದಾಲ್ಗೆ ಸೇರುತ್ತದೆ. ಸರಕಾರ ಅದರ ಮೇಲಿನ ಹಕ್ಕನ್ನು ಸಂಪೂರ್ಣ ಕಳೆದುಕೊಳ್ಳುತ್ತದೆ. ಇದನ್ನು ಸಂಪುಟ ಉಪ ಸಮಿತಿ ಸಭೆಯಲ್ಲಿ ಆದ್ಯತೆ ಮೇರೆಗೆ ಪರಿಶೀಲಿಸಬೇಕು.
- ಭಾರಿ ಮೊತ್ತದ ಅದಿರು ಮೌಲ್ಯ ಬಾಕಿ ಉಳಿಸಿಕೊಂಡಿರುವ ಜಿಂದಾಲ್ನ ಮನವಿಯನ್ನು ಏಕ ಪಕ್ಷೀಯವಾಗಿ ಸರಕಾರ ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ?
- ಮೈಸೂರು ಮಿನರಲ್ಸ್ ಜತೆ ಮಾಡಿಕೊಂಡ ಒಡಂಬಡಿಕೆ ಉಲ್ಲಂಘಿಸಿದ್ದ ಜಿಂದಾಲ್ ಸಂಸ್ಥೆಗೆ ಅದಿರು ಮೌಲ್ಯ ಪಾವತಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನಿಡಿದೆ. ಇದರ ಪಾಲನೆಯಾಗಿದೆಯೇ?
- ಜಿಂದಾಲ್ನಂಥ ಬೃಹತ್ ಖಾಸಗಿ ಸಂಸ್ಥೆಗೆ ಪ್ರತಿ ಎಕರೆಗೆ 1.22 ಲಕ್ಷ ರೂ. ದರದಲ್ಲಿ ಶುದ್ಧ ಕ್ರಯ ಪತ್ರ ಪತ್ರದ ಮೂಲಕ ಭೂಮಿ ಪರಭಾರೆ ಮಾಡುವುದು ಸಮಂಜಸವೇ? ಇದರಿಂದ ಸರಕಾರಕ್ಕೆ ಆಗುವ ಹಾನಿ ಅಂದಾಜಿಸಬೇಕು.
- ಶುದ್ಧ ಕ್ರಯಪತ್ರದಲ್ಲಿ ಉಲ್ಲೇಖಿಸಿದ ಕರಾರುಗಳು ಪಾಲನೆಯಾಗಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು.
ಜಿಂದಾಲ್ ಸಂಸ್ಥೆಗೆ 3667 ಎಕರೆ ಭೂಮಿಯನ್ನು ಅಲ್ಪಮೊತ್ತಕ್ಕೆ ಮಾರಾಟ ಮಾಡಲು ಹೊರಟಿದ್ದ ರಾಜ್ಯ ಸರಕಾರದ ವಿರುದ್ಧ 'ಪತ್ರ ಸಮರ' ಸಾರಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್ ತಮ್ಮ ಹೋರಾಟ ಮತ್ತೆ ಮುಂದುವರಿಸಿದ್ದಾರೆ. ಭೂ ಹಸ್ತಾಂತರದ ಬಗ್ಗೆ ಪರಿಶೀಲನೆ ನಡೆಸಲು ರಚಿಸಿರುವ ಸಂಪುಟ ಉಪಸಮಿತಿ ಅಧ್ಯಕ್ಷ ಗೃಹ ಸಚಿವ ಎಂ.ಬಿ.ಪಾಟೀಲ್ಗೆ ಈ ಬಾರಿ ಪತ್ರ ಬರೆದಿರುವ ಅವರು ಜಿಂದಾಲ್ಗೆ ನೀಡುವ ಭೂಮಿಯ ಗರ್ಭದಲ್ಲಿನ ಖನಿಜ ಸಂಪತ್ತಿನ ಒಡೆತನ ಯಾರಿಗೆ ಸೇರಿದ್ದೆಂಬ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು, ತೋರಣಗಲ್, ಕರೆಕುಪ್ಪ, ಮೂಸೆನಾಯಕನಹಳ್ಳಿ, ಯರಬನಹಳ್ಳಿ ಗ್ರಾಮದ 3667 ಎಕರೆ ಭೂಮಿಯನ್ನು ಅಲ್ಪ ಮೊತ್ತಕ್ಕೆ (ಪ್ರತಿ ಎಕರೆಗೆ 1.22 ಲಕ್ಷ ರೂ. ) ಮಾರಾಟ ಮಾಡಲು ರಾಜ್ಯ ಸಚಿವ ಸಂಪುಟ ಈ ಹಿಂದೆ ನಿರ್ಣಯ ತೆಗೆದುಕೊಂಡಿತ್ತು. ಇದನ್ನು ಖಂಡಿಸಿ ಎಚ್.ಕೆ.ಪಾಟೀಲ್ ಸರಕಾರಕ್ಕೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದರಿಂದ ಸರಕಾರ ಮುಜುಗರಕ್ಕೆ ಒಳಗಾಗಿತ್ತು. ಜತೆಗೆ ಪ್ರತಿಪಕ್ಷ ಬಿಜೆಪಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ನಿರ್ಣಯ ಸ್ಥಗಿತಗೊಳಿಸಿದ್ದ ರಾಜ್ಯ ಸರಕಾರ ಪುನರ್ ಪರಿಶೀಲನೆಗೆ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿತ್ತು.
ಆದರೆ, ಸಮಿತಿ ತನ್ನ ಮೊದಲ ಸಭೆ ನಡೆಸುವುದಕ್ಕೆ ಮುನ್ನವೇ ಗೃಹ ಸಚಿವ ಎಂ.ಬಿ.ಪಾಟೀಲ್ಗೆ ಪತ್ರ ಬರೆದಿರುವ ಎಚ್.ಕೆ.ಪಾಟೀಲ್ ಕೆಲ ತಾರ್ಕಿಕ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಮಾರಾಟ ಮಾಡಿದ ಭೂಮಿಯೊಳಗಿನ ಖನಿಜ ಸಂಪತ್ತು ಹಾಗೂ ನಿಕ್ಷೇಪಗಳ ಒಡೆತನ ಯಾರಿಗೆ ಸೇರುತ್ತದೆ ಎಂಬ ಬಗ್ಗೆ ಸರಕಾರ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪಾಟೀಲ್ ಪತ್ರದ ಮುಖ್ಯಾಂಶಗಳು
- ಭೂ ಮಾರಾಟದ ಬಳಿಕ ಆ ಸ್ಥಳದ ಮೂರು ಅಡಿ ಆಳದಿಂದ ಭೂಗರ್ಭದ ಒಳಗಿರುವ ಖನಿಜ, ನಿಕ್ಷೇಪ, ಇನ್ನಿತರ ಸಂಪತ್ತುಗಳು ಮಾಲೀಕನಿಗೆ ಸೇರುತ್ತದೆ ಎಂದು 2014ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಗಣಿ ಹಾಗೂ ಖನಿಜ ಸಂಪತ್ತು ನಿಯಂತ್ರಣ ಹಾಗೂ ಅಭಿವೃದ್ಧಿ ಕಾಯಿದೆಯ ಅಧಿಸೂಚನೆಯಲ್ಲಿ ವ್ಯಾಖ್ಯಾನಿಸಿದೆ. ಹೀಗಾಗಿ ಹಾಲಿ ಪ್ರಕರಣದಲ್ಲಿ ಅದು ಜಿಂದಾಲ್ಗೆ ಸೇರುತ್ತದೆ. ಸರಕಾರ ಅದರ ಮೇಲಿನ ಹಕ್ಕನ್ನು ಸಂಪೂರ್ಣ ಕಳೆದುಕೊಳ್ಳುತ್ತದೆ. ಇದನ್ನು ಸಂಪುಟ ಉಪ ಸಮಿತಿ ಸಭೆಯಲ್ಲಿ ಆದ್ಯತೆ ಮೇರೆಗೆ ಪರಿಶೀಲಿಸಬೇಕು.
- ಭಾರಿ ಮೊತ್ತದ ಅದಿರು ಮೌಲ್ಯ ಬಾಕಿ ಉಳಿಸಿಕೊಂಡಿರುವ ಜಿಂದಾಲ್ನ ಮನವಿಯನ್ನು ಏಕ ಪಕ್ಷೀಯವಾಗಿ ಸರಕಾರ ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ?
- ಮೈಸೂರು ಮಿನರಲ್ಸ್ ಜತೆ ಮಾಡಿಕೊಂಡ ಒಡಂಬಡಿಕೆ ಉಲ್ಲಂಘಿಸಿದ್ದ ಜಿಂದಾಲ್ ಸಂಸ್ಥೆಗೆ ಅದಿರು ಮೌಲ್ಯ ಪಾವತಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನಿಡಿದೆ. ಇದರ ಪಾಲನೆಯಾಗಿದೆಯೇ?
- ಜಿಂದಾಲ್ನಂಥ ಬೃಹತ್ ಖಾಸಗಿ ಸಂಸ್ಥೆಗೆ ಪ್ರತಿ ಎಕರೆಗೆ 1.22 ಲಕ್ಷ ರೂ. ದರದಲ್ಲಿ ಶುದ್ಧ ಕ್ರಯ ಪತ್ರ ಪತ್ರದ ಮೂಲಕ ಭೂಮಿ ಪರಭಾರೆ ಮಾಡುವುದು ಸಮಂಜಸವೇ? ಇದರಿಂದ ಸರಕಾರಕ್ಕೆ ಆಗುವ ಹಾನಿ ಅಂದಾಜಿಸಬೇಕು.
- ಶುದ್ಧ ಕ್ರಯಪತ್ರದಲ್ಲಿ ಉಲ್ಲೇಖಿಸಿದ ಕರಾರುಗಳು ಪಾಲನೆಯಾಗಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು.