ಆ್ಯಪ್ನಗರ

ರಮೇಶ್ ಕುಮಾರ್ ಅಪರೂಪಕ್ಕೆ ಸತ್ಯ ಹೇಳಿದ್ದಾರೆ, ಅವರನ್ನು ಅಭಿನಂದಿಸುತ್ತೇನೆ ಎಂದ ಆರಗ ಜ್ಞಾನೇಂದ್ರ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸತ್ಯ ಹೇಳಿದ್ದಾರೆ. ಅದಕ್ಕಾಗಿ ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಿಧಾನಸೌಧದದಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಏನು ಮಾಡಿದ್ದಾರೆ ಎಂಬುದಕ್ಕೆ ಇದೊಂದು ನಿದರ್ಶನ ಎಂದರು. ನೆಹರೂ ಕುಟುಂಬದ ಹೆಸರಿನಲ್ಲಿ ಮೂರು ನಾಲ್ಕು ತಲೆಮಾರು ಕುಳಿತು ತಿನ್ನುವ ಸಂಪತ್ತು ಲೂಟಿ ಹೊಡೆದಿದ್ದಾರೆ. ಹೀಗಾಗಿ ದೇಶದ ಜನರ ಕ್ಷಮೆಯನ್ನು ಕೇಳಬೇಕು ಎಂದು ಒತ್ತಾಯಿಸಿದರು. ಮಾನ ಮರ್ಯಾದೆ ಇದ್ದರೆ ಗಳಿಸಿದ್ದನ್ನು ವಾಪಸ್ ಕೊಡಬೇಕು ಎಂದರು.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 22 Jul 2022, 12:01 pm

ಹೈಲೈಟ್ಸ್‌:

  • ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸತ್ಯ ಹೇಳಿದ್ದಾರೆ- ಆರಗ ಜ್ಞಾನೇಂದ್ರ
  • 'ಕಾಂಗ್ರೆಸ್ ಆಡಳಿತದಲ್ಲಿ ಏನು ಮಾಡಿದ್ದಾರೆ ಎಂಬುದಕ್ಕೆ ಇದು ನಿದರ್ಶನ'
  • 'ನಾಲ್ಕು ತಲೆಮಾರು ಕುಳಿತು ತಿನ್ನುವ ಸಂಪತ್ತು ಲೂಟಿ ಹೊಡೆದಿದ್ದಾರೆ'
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಆರಗ ಜ್ಞಾನೇಂದ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸತ್ಯ ಹೇಳಿದ್ದಾರೆ. ಅದಕ್ಕಾಗಿ ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಿಧಾನಸೌಧದದಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಏನು ಮಾಡಿದ್ದಾರೆ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಹೇಳಿದರು.
ನೆಹರೂ ಕುಟುಂಬದ ಹೆಸರಿನಲ್ಲಿ ಮೂರು ನಾಲ್ಕು ತಲೆಮಾರು ಕುಳಿತು ತಿನ್ನುವ ಸಂಪತ್ತು ಲೂಟಿ ಹೊಡೆದಿದ್ದಾರೆ. ಹೀಗಾಗಿ ದೇಶದ ಜನರ ಕ್ಷಮೆಯನ್ನು ಕೇಳಬೇಕು ಎಂದು ಒತ್ತಾಯಿಸಿದರು.

ಗಾಂಧಿ ಕುಟುಂಬ ಋುಣ ತೀರಿಸುವ ಸಮಯ: ಚರ್ಚೆಗೆ ಗ್ರಾಸವಾಯ್ತು ರಮೇಶ್ ಕುಮಾರ್ ಹೇಳಿಕೆ..!
ಮಾನ ಮರ್ಯಾದೆ ಇದ್ದರೆ ಗಳಿಸಿದ್ದನ್ನು ವಾಪಸ್ ಕೊಡಬೇಕು. ಲೂಟಿಯನ್ನು ಬಹಿರಂಗವಾಗಿ ಒಪ್ಪುವುದಾದರೆ ಇದಕ್ಕಿಂತ ನೀಚತನ ಮತ್ತೊಂದು ಇಲ್ಲ. ದೇಶದ ಅಭಿವೃದ್ಧಿ ಬದಲಾಗಿ ಇವರ ಸ್ವಂತ ಅಭಿವೃದ್ಧಿ ಮಾಡಿಕೊಂಡಿದ್ದಾರೆ ಎಂಬುದಕ್ಕೆ ರಮೇಶ್ ಕುಮಾರ್ ಹೇಳಿಕೆ ನಿದರ್ಶನವಾಗಿದೆ ಎಂದು ಟೀಕಿಸಿದರು. ರಮೇಶ್ ಕುಮಾರ್ ಮಾಜಿ ಸ್ಪೀಕರ್ ಆಗಿದ್ದವರು ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಕಂದಾಯ ‌ಸಚಿವ ಆರ್. ಅಶೋಕ್ ಇದೇ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಅರವತ್ತು‌‌ ವರ್ಷದ ಆಡಳಿತದ ನಿಜಬಣ್ಣ ರಮೇಶ್ ಕುಮಾರ್ ಹೇಳಿಕೆಯ ಮೂಲಕವ್ಯಕ್ತವಾಗಿದೆ. ಅವರು ಸತ್ಯಹೇಳುತ್ತಾರೆ. ಇವಾಗ ಸತ್ಯವನ್ನು ಸಮರ್ಥನೆ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ವಿರುದ್ಧದ ಆರೋಪಕ್ಕೆ ಪೂರಕ ದಾಖಲೆಯನ್ನು ರಮೇಶ್ ಕುಮಾರ್ ನೀಡಿದ್ದಾರೆ. ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ಧ ಇ.ಡಿ ವಿಚಾರಣೆ ಏಕೆ ನಡೆಯುತ್ತಿದೆ ಎಂಬುವುದಕ್ಕೆ ಸಮರ್ಥನೆ ನೀಡಿದ್ದಾರೆ ಎಂದು ತಿಳಿಸಿದರು.

ರಮೇಶ್ ಕುಮಾರ್ ಹೇಳಿಕೆ ಮೂಲಕ ನಾಲ್ಕು ತಲೆಮಾರಿಗೆ ಆಗುವಷ್ಟು ಲೂಟಿ ಮಾಡಿದ್ದನ್ನು ಕಾಂಗ್ರೆಸ್ ಒಪ್ಪಿಕೊಂಡಂತಾಗಿದೆ. ಕಾಂಗ್ರೆಸ್ 160% ಲೂಟಿ ಮಾಡಿದೆ. ಇದರ ಮುಂದೆ 40% ಹೊರಟೋಯ್ತು ಎಂದರು.

‘ಇಟಲಿ ಮಾತೆಗಾಗಿ’ ಕಾಂಗ್ರೆಸ್ಸಿಗರು ಭಾರತ ಬಿಟ್ಟು ತೊಲಗಿ ಅಭಿಯಾನ ಮಾಡಿದರೆ ನಮ್ಮ ಅಭ್ಯಂತರವಿಲ್ಲ! ಬಿಜೆಪಿ ವ್ಯಂಗ್ಯ
ರಮೇಶ್ ಕುಮಾರ್ ಹೇಳಿಕೆ ಮೂಲಕ ಕಾಂಗ್ರೆಸ್ ಮಾನ ಮರ್ಯಾದೆ ಬೀದಿಗೆ ಬಂದಿದೆ. ಭ್ರಷ್ಟಾಚಾರದ‌ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ.‌ ಬಿಜೆಪಿ ಪರವಾಗಿರಮೇಶ್ ಕುಮಾರ್ ಮಾತನಾಡಿದ್ದಾರೆ ಎಂದರು.

ಏನು ಹೇಳಿದ್ದರು ರಮೇಶ್ ಕುಮಾರ್?

ನೆಹರೂ, ಇಂದಿರಾ ಸೋನಿಯಾ ಗಾಂಧಿ ಹೆಸರಿನಲ್ಲಿ ನಾವು ಸಾಕಷ್ಟು ಸಂಪಾದನೆ ಮಾಡಿದ್ದೇವೆ. ಮೂರು ನಾಲ್ಕು ತಲೆಮಾರಿಗೆ ಆಗುವಷ್ಟು ಸಂಪಾದನೆ ಮಾಡಿಕೊಂಡಿದ್ದೇವೆ. ಇವಾಗ ಅವರ ಋಣ ತೀರಿಸುವ ಸಮಯ ಬಂದಿದೆ. ಋಣ ತೀರಿಸಿಲ್ಲ ಎಂದರೆ ತಿನ್ನುವ ಅನ್ನಕ್ಕೂ ಹುಳ ಬೀಳುತ್ತೆ ಎಂದಿದ್ದರು. ಗುರುವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಈ ಮಾತನ್ನು ರಮೇಶ್ ಕುಮಾರ್ ಹೇಳಿದ್ದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ