ಆ್ಯಪ್ನಗರ

ಹೋಮ್‌ ಮಿನಿಸ್ಟರ್‌’ಗೆ ಮಣಿದ ಸಚಿವ..!

ಪುತ್ತೂರು ಹಾರಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದಿವಿತ್‌ ರೈ ಒತ್ತಾಯದಂತೆ ಶಾಲೆಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ರದ್ದುಪಡಿಸಲಾಗಿದೆ ಎಂದು ಸಚಿವ ಸೇಠ್‌ ಹೇಳಿದ್ದಾರೆ.

ವಿಕ ಸುದ್ದಿಲೋಕ 22 Jul 2016, 4:21 am
ಬೆಂಗಳೂರು: ಪುತ್ತೂರು ಹಾರಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದಿವಿತ್‌ ರೈ ಒತ್ತಾಯದಂತೆ ಶಾಲೆಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ರದ್ದುಪಡಿಸಲಾಗಿದೆ ಎಂದು ಸಚಿವ ಸೇಠ್‌ ಹೇಳಿದ್ದಾರೆ.
Vijaya Karnataka Web home minister divit rai transfer additional teachers
ಹೋಮ್‌ ಮಿನಿಸ್ಟರ್‌’ಗೆ ಮಣಿದ ಸಚಿವ..!


ಶಾಲೆಯ ಕ್ಯಾಬಿನೆಟ್‌ನಲ್ಲಿ ಹೋಮ್‌ ಮಿನಿಸ್ಟರ್‌ ಆಗಿದ್ದ ದಿವಿತ್‌ ರೈ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮೊಬೈಲ್‌ಗೆ ಎಸ್‌ಎಂಎಸ್‌ ಸಂದೇಶ ಕಳಿಸಿ ಈ ಸಂಬಂಧ ದೂರು ನೀಡಿದ್ದ. ಆತನಿಗೆ ವಾಪಸ್‌ ಕರೆ ಮಾಡಿ ಮನವಿ ಆಲಿಸಿದ್ದ ಪರಮೇಶ್ವರ್‌, ಸಮಸ್ಯೆಯನ್ನು ತಮ್ಮ ಗಮನಕ್ಕೆ ತಂದಿದ್ದರು. ‘‘ಅದೇರೀತಿ ಹೆಚ್ಚುವರಿ ಮೂವರು ಶಿಕ್ಷಕರ ವರ್ಗಾವಣೆ ರದ್ದುಗೊಳಿಸಿ, ಅದೇ ಶಾಲೆಯಲ್ಲಿ ಮುಂದುವರಿಸಲಾಗಿದೆ,’’ಎಂದು ಇಲ್ಲಿನ ವರದಿಗಾರರಿಗೆ ಗುರುವಾರ ತಿಳಿಸಿದ್ದಾರೆ. ವಿದ್ಯಾರ್ಥಿಯ ಈ ಜಾಣ್ಮೆ ಹಾಗೂ ಧೈರ್ಯವನ್ನೂ ಅವರು ಶ್ಲಾಘಿಸಿದ್ದಾರೆ.

ಕಾರ್ಯ ನಿರ್ವಹಣೆ: ವಿದ್ಯಾರ್ಥಿಯೊಬ್ಬ ಗೃಹ ಸಚಿವರಿಗೆ ಫೋನ್‌ ಮಾಡಿ ರಾಜ್ಯದ ಗಮನಸೆಳೆಯಲು ಕಾರಣವಾದ ಪುತ್ತೂರಿನ ಹಾರಾಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯು, ಒಂದು ದಿನದ ಬಂದ್‌ ಬಳಿಕ ಕಾರ್ಯ ನಿರ್ವಹಿಸತೊಡಗಿದೆ.

ಹೆಚ್ಚುವರಿ ಎಂದು ನಾಲ್ವರು ಶಿಕ್ಷ ಕನ್ನು ವರ್ಗಾವಣೆ ಮಾಡಲು ಇಲಾಖೆ ಯತ್ನಿಸಿದ್ದನ್ನು ವಿರೋಧಿಸಿ ಬುಧವಾರ ಒಂದು ದಿನ ಬಂದ್‌ ಆಚರಿಸಲಾಗಿತ್ತು.

ಆಂಗ್ಲ ಮಾಧ್ಯಮ ಹೊಂದಿರುವ ಈ ಶಾಲೆಯಲ್ಲಿ 13 ತರಗತಿಗಳಿದ್ದು, 15 ಶಿಕ್ಷ ಕರಿದ್ದಾರೆ. ಇವರಿಂದ ಯಶೋದಾ, ವಿಜಯಾ, ಶುಭಲತಾ ಮತ್ತು ಲಿಲ್ಲಿ ಡಿಸೋಜ ಎಂಬುವವರನ್ನು ಹೆಚ್ಚುವರಿ ಶಿಕ್ಷ ಕರು ಎಂದು ಗುರುತಿಸಿದ್ದು, ಮಂಗಳವಾರ ಸಂಜೆ ಅವರಿಗೆ ವರ್ಗಾವಣೆ ಕೌನ್ಸೆಲಿಂಗ್‌ ನಡೆಸಲಾಗಿದೆ. ಇದಕ್ಕೂ ಮುನ್ನ ಮಂಗಳವಾರ ಅರ್ಧ ದಿನ ಹಾರಾಡಿ ಶಾಲೆಯ ಮಕ್ಕಳು, ಪೋಷಕರು ಪುತ್ತೂರ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಇದೂ ಫಲ ಕೊಡದೇ ಇದ್ದಾಗ ವಿದ್ಯಾರ್ಥಿ ದಿವಿತ್‌ ರೈ, ನೇರ ಗೃಹ ಸಚಿವರಿಗೆ ಕರೆ ಮಾಡಿ, ಎಸ್ಸೆಮ್ಮೆಸ್‌ ಕಳುಹಿಸಿರುವುದಕ್ಕೆ ಸ್ಪಂದನೆ ಸಿಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ