ಆ್ಯಪ್ನಗರ

ಮಂಗಳೂರು ಗೋಲಿಬಾರ್ ಬೆನ್ನಲ್ಲೇ ನನಗೆ ಬೆದರಿಕೆ ಕರೆ ಬಂದಿತ್ತು! ಸದನಕ್ಕೆ ಬೊಮ್ಮಾಯಿ ಸ್ಫೋಟಕ ಮಾಹಿತಿ

ಮಂಗಳೂರು ಗಲಭೆ ಪ್ರಕರಣ ಪೂರ್ವನಿಯೋಜಿತ ಎಂದು ಗೃಹ ಸಚಿವ ಬಸವರಾಜು ಬೊಮ್ಮಾಯಿ ಸದನಕ್ಕೆ ಉತ್ತರಿಸಿದರು. ಮಂಗಳೂರು ಪೊಲೀಸರ ಕ್ರಮವನ್ನು ಸಮರ್ಥನೆ ಮಾಡಿದ ಅವರು ಜನರ ರಕ್ಷಣೆ ಮಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು ಎಂದರು.

Vijaya Karnataka Web 19 Feb 2020, 7:02 pm
ಬೆಂಗಳೂರು: ಮಂಗಳೂರು ಗೋಲಿಬಾರ್ ಪ್ರಕರಣದ ಬೆನ್ನಲ್ಲಿ ಸೌದಿ ಅರೇಬಿಯಾ ಹಾಗೂ ದುಬೈ ಯಿಂದ ನನಗೆ ಬೆದರಿಕೆ ಕರೆಗಳು ಬಂದಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಸದನದಲ್ಲಿ ಮಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಆರೋಪಕ್ಕೆ ಉತ್ತರಿಸಿದ ಅವರು, ನನಗೆ ವಿದೇಶದಿಂದ ಬೆದರಿಕೆ ಕರೆಗಳು ಬಂದಿವೆ. ಆದರೆ ನಾನು ಯಾರಿಗೂ ಹೇಳಲಿಲ್ಲ. ಮುಖ್ಯಮಂತ್ರಿಗಳಿಗೂ ಬೆದರಿಕೆ ಕರೆಗಳು ನನ್ನ ಫೋನ್‌ಗೆ ಬಂದಿವೆ ಎಂದ ಮಾಹಿತಿಯನ್ನು ಬಿಟ್ಟಿಟ್ಟರು.
Vijaya Karnataka Web home minister reaction at session on mangaluru police firing case
ಮಂಗಳೂರು ಗೋಲಿಬಾರ್ ಬೆನ್ನಲ್ಲೇ ನನಗೆ ಬೆದರಿಕೆ ಕರೆ ಬಂದಿತ್ತು! ಸದನಕ್ಕೆ ಬೊಮ್ಮಾಯಿ ಸ್ಫೋಟಕ ಮಾಹಿತಿ


ಮಂಗಳೂರು ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆಯನ್ನು ಮಂಡಿಸಿದ್ದರು. ನಿಯಮ 69ರ ಅಡಿಯಲ್ಲಿ ಸದನದಲ್ಲಿ ನಡೆದ ಚರ್ಚೆಯಲ್ಲಿ ಮಂಗಳೂರು ಗಲಭೆಗೆ ರಾಜ್ಯ ಸರ್ಕಾರ ಹಾಗೂ ಪೊಲೀಸರು ನೇರ ಹೊಣೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಬಸವರಾಜು ಬೊಮ್ಮಾಯಿ, ಜನರ ರಕ್ಷಣೆಯ ನಿಟ್ಟಿನಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು. ನಿಷೇಧಾಜ್ಞೆಯ ಕುರಿತಾಗಿ ಸಾರ್ವಜನಿಕರಿಗೆ ಪೊಲೀಸರು ಮೈಕ್‌ನಲ್ಲಿ ಘೋಷಣೆ ಮಾಡುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಮಾಹಿತಿ ನೀಡಿದ್ದರು.

‘ಪಾಕಿಸ್ತಾನದಲ್ಲಿ ಪ್ರಧಾನಿ ಮೋದಿ ಬಿರಿಯಾನಿ ತಿಂದಿದ್ದಾರೆ’ ಖಾದರ್ ಮಾತಿಗೆ ಸದನದಲ್ಲಿ ಕೋಲಾಹಲ

ಹೀಗಿದ್ದರೂ ಪ್ರತಿಭಟನೆ ಮಾಡಿದವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಹರಿಯಬಿಟ್ಟಿದ್ದರು. ಪ್ರತಿಭಟನೆ ನಡೆದಾಗ ಸ್ಥಳದಲ್ಲಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು. ಆದರೆ ಪೂರ್ವನಿಯೋಜಿತವಾಗಿ ಸಜ್ಜಾಗಿ ಬಂದಿದ್ದ ಕಿಡಿಗೇಡಿಗಳ ತಂಡ ಸಂಘಟಿತವಾಗಿ ಕಲ್ಲು ತೂರಾಟ ಹಾಗೂ ರಸ್ತೆ ಬ್ಲಾಕ್ ಮಾಡಿದರು. ಮಂಗಳೂರು ಉತ್ತರ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಲು ಮುಂದಾದರು.

ಪ್ರಕರಣದ ತನಿಖೆಯ ಸಂದರ್ಭದಲ್ಲಿ ಸಂಪೂರ್ಣ ಸಾಕ್ಷಾಧಾರಗಳನ್ನು ನ್ಯಾಯಾಲಯ ಮುಂದೆ ಹಾಜರು ಪಡಿಸುತ್ತೇವೆ ಎಂದು ಸದನಕ್ಕೆ ಬಸವರಾಜ ಬೊಮ್ಮಾಯಿ ಉತ್ತರಿಸಿದರು. ಘಟನೆಯಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿತ್ತು.

ಗಲಭೆ ನಿಯಂತ್ರಣಕ್ಕೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದೇವೆ. ಪೆಟ್ರೋಲ್ ಬಾಂಬ್ ಎಸೆದು ಪೊಲೀಸ್ ಠಾಣೆಗೆ ದಾಳಿ ಮಾಡಲು ಮುಂದಾದ ಕಾರಣಕ್ಕಾಗಿ ಗೋಲಿಬಾರ್ ಮಾಡಬೇಕಾಯಿತು. ಇದಕ್ಕೆ ದುಖಃವಿದೆ. ಯಾವುದೇ ಸರ್ಕಾರ ಇದನ್ನು ಬಯಸುವುದಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ