ಆ್ಯಪ್ನಗರ

ಇನ್ನೆಷ್ಟು ಜೀವ ಪಡೆಯಬೇಕು: ಮೃತ ಪೈಲಟ್‌ ಪತ್ನಿ ಭಾವುಕ ಪ್ರಶ್ನೆ

ಫೆಬ್ರವರಿ 1ರಂದು ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಮಿರಾಜ್‌ 2000 ತರಬೇತಿ ವಿಮಾನ ಪತನಗೊಂಡು ಸ್ಕಾಡ್ರನ್‌ ಲೀಡರ್‌ಗಳಾದ ಸಮೀರ್‌ ಅಬ್ರೋಲ್‌, ಸಿದ್ಧಾರ್ಥ್‌ ನೇಗಿ ಮೃತಪಟ್ಟಿದ್ದರು.

Vijaya Karnataka 12 Feb 2019, 8:14 am
ಬೆಂಗಳೂರು: ವ್ಯವಸ್ಥೆಯಲ್ಲಿನ ಲೋಪದೋಷ ಸರಿಪಡಿಸಲು ಇನ್ನೆಷ್ಟು ಪೈಲಟ್‌ಗಳು ಜೀವ ಕಳೆದುಕೊಳ್ಳಬೇಕು ಎಂದು ಇತ್ತೀಚಿನ ಮಿರಾಜ್‌ 2000 ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್‌ ಸಮೀರ್‌ ಅಬ್ರೋಲ್‌ ಅವರ ಪತ್ನಿ ಗರೀಮಾ ಅಬ್ರೋಲ್‌ ಪ್ರಶ್ನಿಸಿದ್ದಾರೆ.
Vijaya Karnataka Web Pilot


ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಲೇಖನ ಬರೆದಿರುವ ಅವರು, ''ನನ್ನ ಕಣ್ಣೀರು ಇಂದಿಗೂ ನಿಂತಿಲ್ಲ, ಪತಿಯ ಅಗಲಿಕೆ ನೋವು ಸದಾ ಕಾಡುತ್ತದೆ. ಅವರು ಇನ್ನೂ ನನ್ನ ಮುಂದೆ ಮಾತನಾಡುತ್ತಿದ್ದಾರೆ, ಟೀ ಕುಡಿಯುತ್ತಿದ್ದಾರೆ ಎಂದೇ ಭಾಸವಾಗುತ್ತಿದೆ. ನನ್ನ ಪತಿ ದೇಶ ಸೇವೆಯ ತುಡಿತವಿದ್ದ ಹೆಮ್ಮೆಯ ಭಾರತೀಯ. ಇನ್ನೂ ಇಂತಹ ಅದೆಷ್ಟು ಪೈಲಟ್‌ಗಳು ಮಿರಾಜ್‌ 2000 ವಿಮಾನ ದುರಂತಗಳಿಗೆ ಬಲಿಯಾಗಬೇಕು. ವ್ಯವಸ್ಥೆಯಲ್ಲಿ ದೋಷ ಸರಿಪಡಿಸುವವರು ಯಾರು?,'' ಎಂದು ವಾಯುಪಡೆ ಹಾಗೂ ಎಚ್‌ಎಎಲ್‌ಅನ್ನು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.

ಫೆಬ್ರವರಿ 1ರಂದು ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಮಿರಾಜ್‌ 2000 ತರಬೇತಿ ವಿಮಾನ ಪತನಗೊಂಡು ಸ್ಕಾಡ್ರನ್‌ ಲೀಡರ್‌ಗಳಾದ ಸಮೀರ್‌ ಅಬ್ರೋಲ್‌, ಸಿದ್ಧಾರ್ಥ್‌ ನೇಗಿ ಮೃತಪಟ್ಟಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ