ಆ್ಯಪ್ನಗರ

ಮಳೆ ಅವಾಂತರ: ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದ ಬೆಳೆ ನಾಶ? ಇಲ್ಲಿದೆ ಸಂಪೂರ್ಣ ಮಾಹಿತಿ

ಮಳೆ ಅವಾಂತರದಿಂದಾಗಿ ರಾಜ್ಯದಲ್ಲಿ ಭಾರೀ ಪ್ರಮಾಣದ ಬೆಳೆ ಹಾನಿಯಾಗಿದೆ. ನವೆಂಬರ್ ತಿಂಗಳಲ್ಲಿ ಒಟ್ಟು 5 ಲಕ್ಷದ 562 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ನಾಶವಾಗಿದ್ದು, ರಾಗಿ ಬೆಳೆಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಬೆಳೆ ಹಾನಿಯ ಸಂಪೂರ್ಣ ವಿವರ ಇಲ್ಲಿದೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 25 Nov 2021, 5:46 pm
ಬೆಂಗಳೂರು: ರಾಜ್ಯಾದ್ಯಂತ ಮಳೆ ಅವಾಂತರದಿಂದಾಗಿ ಭಾರೀ ಪ್ರಮಾಣದ ಬೆಳೆ ಹಾನಿಯಾಗಿದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ನವೆಂಬರ್ ತಿಂಗಳಲ್ಲಿ ಒಟ್ಟು 5 ಲಕ್ಷದ 562 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ನಾಶವಾಗಿದೆ. ಅದರಲ್ಲೂ ರಾಗಿ ಬೆಳೆಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.
Vijaya Karnataka Web crop loss
ಸಾಂದರ್ಭಿಕ ಚಿತ್ರ


ಯಾವ ಯಾವ ಬೆಳೆ‌ಗೆ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ಪಟ್ಟಿ ಇಲ್ಲಿದೆ.

ಭತ್ತ - 39,061 ಹೆಕ್ಟೇರ್

ಮೆಕ್ಕೆಜೋಳ - 67,000 ಹೆಕ್ಟೇರ್

ರಾಗಿ - 2,76,324 ಹೆಕ್ಟೇರ್

ಅರಶಿಣ - 14,111 ಹೆಕ್ಟೇರ್

ಕಡಲೆಕಾಯಿ - 68,760 ಹೆಕ್ಟೇರ್

ಸಿರಿಧಾನ್ಯ - 532 ಹೆಕ್ಟೇರ್

ಕಡಲೆ ಬೇಳೆ - 12,979 ಹೆಕ್ಟೇರ್

ಮಳೆ ಹಾನಿ ವಿಚಾರವಾಗಿ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ; ಬಿ. ಸಿ. ಪಾಟೀಲ್
ಹತ್ತಿ- 12,040 ಹೆಕ್ಟೇರ್

ಅಲಸಂಡೆ - 2936 ಹೆಕ್ಟೇರ್

ಗೋದಿ - 344 ಹೆಕ್ಟೇರ್

ಜೋಳ - 708 ಹೆಕ್ಟೇರ್

ಹೆಸರು ಕಾಳು - 411 ಹೆಕ್ಟೇರ್

ಕಬ್ಬು - 220 ಹೆಕ್ಟೇರ್

ಸೂರ್ಯಕಾಂತಿ- 264 ಹೆಕ್ಟೇರ್

ರಾಜ್ಯದಲ್ಲಿ ಇನ್ನೂ ಎರಡು ದಿನ ಸುರಿಯಲಿದೆ ಸಾಧಾರಣ ಮಳೆ : ಎಲ್ಲಿ ಹೇಗಿರಲಿದೆ?
ಜಿಲ್ಲಾವಾರು ಮಾಹಿತಿ

ಬಾಗಲಕೋಟೆ - 24,405 ಹೆಕ್ಟೇರ್

ಬಳ್ಳಾರಿ - 9781 ಹೆಕ್ಟೇರ್

ಬೆಳಗಾವಿ - 1,17,811 ಹೆಕ್ಟೇರ್

ಬೆಂಗಳೂರು ಗ್ರಾಮಾಂತರ - 14,995 ಹೆಕ್ಟೇರ್

ಬೆಂಗಳೂರು ನಗರ- 4,390 ಹೆಕ್ಟೇರ್

ಬೀದರ್ - 1,84,649 ಹೆಕ್ಟೇರ್

ಚಾಮರಾಜನಗರ - 1,620 ಹೆಕ್ಟೇರ್

ಚಿಕ್ಕಬಳ್ಳಾಪುರ - 58,207 ಹೆಕ್ಟೇರ್

ಚಿಕ್ಕಮಗಳೂರು- 6,498 ಹೆಕ್ಟೇರ್

ಚಿತ್ರದುರ್ಗ - 92,502 ಹೆಕ್ಟೇರ್

ದಕ್ಷಿಣ ಕನ್ನಡ - 347 ಹೆಕ್ಟೇರ್

ದಾವಣಗೆರೆ - 4,289 ಹೆಕ್ಟೇರ್

ಧಾರವಾಡ - 30,629 ಹೆಕ್ಟೇರ್

ಗದಗ - 18,805 ಹೆಕ್ಟೇರ್

ಶಿವಮೊಗ್ಗ - 1,03,031 ಹೆಕ್ಟೇರ್

ಸಂಪುಟ ಸಭೆಯಲ್ಲೂ ಚರ್ಚೆ

ಮಳೆ ಹಾನಿ ವಿಚಾರವಾಗಿ ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲೂ ಚರ್ಚೆ ನಡೆದಿದೆ. ಕೃಷಿ ಸಚಿವ ಬಿ.ಸಿ ಪಾಟೀಲ್, ಕಂದಾಯ‌ ಸಚಿವ ಆರ್.‌ಅಶೋಕ್ ಮಳೆ ಹಾನಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೆ ಮಾಹಿತಿ ನೀಡಿದ್ದಾರೆ. ಮಳೆಹಾನಿ ಹಿನ್ನೆಲೆಯಲ್ಲಿ ಪರಿಹಾರದ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ