ಬೆಂಗಳೂರು: ರಾಜಧಾನಿಯ ಡಿಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರ ಏಕಾಏಕಿ ನಡೆದಿರುವುದು ಅಲ್ಲ ಎನ್ನುವ ಊಹಾಪೋಹಗಳು ಕೇಳಿಬರುತ್ತಿದೆ.
ಒಂದೂವರೆ ತಿಂಗಳ ಹಿಂದೆ ವಾಜಿದ್ ಎಂಬಾತ, ''ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಣೆಯಾಗಿದ್ದಾರೆ'' ಎಂದು ಪೋಸ್ಟರ್ ಹಾಕಿದ್ದ.
ಈ ಬಗ್ಗೆ ಶಾಸಕರು ದೂರು ನೀಡಿ, ಬುದ್ಧಿ ಮಾತು ಹೇಳಿ, ಕೇಳದಿದ್ದರೆ ಎಫ್ಐಆರ್ ಹಾಕಿ ಎಂದು ಸೂಚಿಸಿದ್ದರು. ಪೊಲೀಸರು ಬುದ್ಧಿ ಹೇಳಿ ಕಳಹಿಸಿದ್ದರು.
ವಾಜಿದ್ಗೆ ಆಗಿನಿಂದಲೂ ಶಾಸಕರ ಮೇಲೆ ಸಿಟ್ಟಿತ್ತು. ಇದಕ್ಕೆ ಸರಿಯಾಗಿ ವೇದಿಕೆ ಕಲ್ಪಿಸಿದವನು ಶಾಸಕರ ಅಳಿಯ ನವೀನ. ಈತ ಮುಸ್ಲಿಂ ಧರ್ಮದ ಬಗ್ಗೆ ಫೇಸ್ಬುಕ್ ನಲ್ಲಿಹಾಕಿದ್ದ ಅವಹೇಳನಕಾರಿ ಪೋಸ್ವ್ ವೈರಲ್ ಆಗಿತ್ತು.
ಅದನ್ನು ಮುಂದಿಟ್ಟು ಮಂಗಳವಾರ ಸಂಜೆ 15-20 ಸಹಚರರ ಜತೆ ಡಿಜೆ ಹಳ್ಳಿ ಠಾಣೆಗೆ ಬಂದ ವಾಜಿದ್ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ. ದೂರು ಕೊಡುವಂತೆ ಕೇಳಿದಾಗ ತಕ್ಷಣ ಬರೆದುಕೊಟ್ಟ ವಾಜಿದ್, ''ತಕ್ಷಣ ಬಂಧಿಸಿ ಕರೆತನ್ನಿ. ನನ್ನ ಎದುರು ನಿಲ್ಲಿಸಿ'' ಅಂತೆಲ್ಲಾ ರಚ್ಚೆ ಹಿಡಿದಿದ್ದ. ಈ ವೇಳೆ ಪೊಲೀಸರಿಗೂ ಈತನಿಗೂ ವಾಗ್ವಾದ ಆಗಿತ್ತು. ಪೊಲೀಸರು ಆತನನ್ನು ಹೊರಗೆ ಕಳುಹಿಸಿದ್ದರು. ಆಗ ಆತ, ಎಸ್ಡಿಪಿಐನ ಮುಜಾಮಿಲ್ ಸೇರಿದಂತೆ ಹಲವರನ್ನು ಸ್ಥಳಕ್ಕೆ ಕರೆಸಿಕೊಂಡ. ಹಲವರಿಗೆ ಕರೆ ಮಾಡಿದ. ನೂರಾರು ಮಂದಿ ಜಮಾಯಿಸಿದಾಗ ''ಪೊಲೀಸರು ಮುಸ್ಲಿಮರಿಗೆ ಬೈದಿದ್ದಾರೆ. ಇಸ್ಲಾಂಗೆ ಬೈದಿದ್ದಾರೆ'' ಅಂತೆಲ್ಲಾಕತೆ ಕಟ್ಟಿ ಪ್ರಚೋದನೆ ಕೊಡಲು ಶುರು ಮಾಡಿದರು.
ಇದು ಎಲ್ಲೆಡೆ ವಾಟ್ಸಾಪ್ ಮೂಲಕ ಹರಿದಾಡಿದವು. ಹೀಗಾಗಿ ಒಮ್ಮೆಗೇ ಸಾವಿರಾರು ಮಂದಿ ಸೇರಲು ಕಾರಣವಾಯಿತು. ಜತೆಗೆ ಆ ಭಾಗದ ಕೆಲವು ಗಾಂಜಾ ವ್ಯಸನಿಗಳು ಸೇರಿಕೊಂಡರು ಎನ್ನಲಾಗಿದೆ. ಬಳಿಕ ಶುರುವಾದ ದೊಂಬಿ 4 ಗಂಟೆಗಳ ಕಾಲ ಡಿಜೆ ಹಳ್ಳಿ ಠಾಣೆ ವ್ಯಾಪ್ತಿಯ 800 ಮೀಟರ್ ಸುತ್ತಳತೆಯಲ್ಲಿ ನಡೆಯಿತು.
ಒಂದೂವರೆ ತಿಂಗಳ ಹಿಂದೆ ವಾಜಿದ್ ಎಂಬಾತ, ''ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಣೆಯಾಗಿದ್ದಾರೆ'' ಎಂದು ಪೋಸ್ಟರ್ ಹಾಕಿದ್ದ.
ಈ ಬಗ್ಗೆ ಶಾಸಕರು ದೂರು ನೀಡಿ, ಬುದ್ಧಿ ಮಾತು ಹೇಳಿ, ಕೇಳದಿದ್ದರೆ ಎಫ್ಐಆರ್ ಹಾಕಿ ಎಂದು ಸೂಚಿಸಿದ್ದರು. ಪೊಲೀಸರು ಬುದ್ಧಿ ಹೇಳಿ ಕಳಹಿಸಿದ್ದರು.
ವಾಜಿದ್ಗೆ ಆಗಿನಿಂದಲೂ ಶಾಸಕರ ಮೇಲೆ ಸಿಟ್ಟಿತ್ತು. ಇದಕ್ಕೆ ಸರಿಯಾಗಿ ವೇದಿಕೆ ಕಲ್ಪಿಸಿದವನು ಶಾಸಕರ ಅಳಿಯ ನವೀನ. ಈತ ಮುಸ್ಲಿಂ ಧರ್ಮದ ಬಗ್ಗೆ ಫೇಸ್ಬುಕ್ ನಲ್ಲಿಹಾಕಿದ್ದ ಅವಹೇಳನಕಾರಿ ಪೋಸ್ವ್ ವೈರಲ್ ಆಗಿತ್ತು.
ಅದನ್ನು ಮುಂದಿಟ್ಟು ಮಂಗಳವಾರ ಸಂಜೆ 15-20 ಸಹಚರರ ಜತೆ ಡಿಜೆ ಹಳ್ಳಿ ಠಾಣೆಗೆ ಬಂದ ವಾಜಿದ್ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ. ದೂರು ಕೊಡುವಂತೆ ಕೇಳಿದಾಗ ತಕ್ಷಣ ಬರೆದುಕೊಟ್ಟ ವಾಜಿದ್, ''ತಕ್ಷಣ ಬಂಧಿಸಿ ಕರೆತನ್ನಿ. ನನ್ನ ಎದುರು ನಿಲ್ಲಿಸಿ'' ಅಂತೆಲ್ಲಾ ರಚ್ಚೆ ಹಿಡಿದಿದ್ದ. ಈ ವೇಳೆ ಪೊಲೀಸರಿಗೂ ಈತನಿಗೂ ವಾಗ್ವಾದ ಆಗಿತ್ತು. ಪೊಲೀಸರು ಆತನನ್ನು ಹೊರಗೆ ಕಳುಹಿಸಿದ್ದರು. ಆಗ ಆತ, ಎಸ್ಡಿಪಿಐನ ಮುಜಾಮಿಲ್ ಸೇರಿದಂತೆ ಹಲವರನ್ನು ಸ್ಥಳಕ್ಕೆ ಕರೆಸಿಕೊಂಡ. ಹಲವರಿಗೆ ಕರೆ ಮಾಡಿದ. ನೂರಾರು ಮಂದಿ ಜಮಾಯಿಸಿದಾಗ ''ಪೊಲೀಸರು ಮುಸ್ಲಿಮರಿಗೆ ಬೈದಿದ್ದಾರೆ. ಇಸ್ಲಾಂಗೆ ಬೈದಿದ್ದಾರೆ'' ಅಂತೆಲ್ಲಾಕತೆ ಕಟ್ಟಿ ಪ್ರಚೋದನೆ ಕೊಡಲು ಶುರು ಮಾಡಿದರು.
ಇದು ಎಲ್ಲೆಡೆ ವಾಟ್ಸಾಪ್ ಮೂಲಕ ಹರಿದಾಡಿದವು. ಹೀಗಾಗಿ ಒಮ್ಮೆಗೇ ಸಾವಿರಾರು ಮಂದಿ ಸೇರಲು ಕಾರಣವಾಯಿತು. ಜತೆಗೆ ಆ ಭಾಗದ ಕೆಲವು ಗಾಂಜಾ ವ್ಯಸನಿಗಳು ಸೇರಿಕೊಂಡರು ಎನ್ನಲಾಗಿದೆ. ಬಳಿಕ ಶುರುವಾದ ದೊಂಬಿ 4 ಗಂಟೆಗಳ ಕಾಲ ಡಿಜೆ ಹಳ್ಳಿ ಠಾಣೆ ವ್ಯಾಪ್ತಿಯ 800 ಮೀಟರ್ ಸುತ್ತಳತೆಯಲ್ಲಿ ನಡೆಯಿತು.