ಆ್ಯಪ್ನಗರ

ಮಾನವ ಕಳ್ಳ ಸಾಗಾಣೆ : ಜಾಮೀನು ಅರ್ಜಿ ವಜಾ

ಮಾನವ ಕಳ್ಳಸಾಗಣೆ ಜಾಲ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ 6ನೇ ಆರೋಪಿ ಮುಂಬೈ ಮೂಲದ ಅಬ್ದುಲ್‌ ಕರೀಂ ರೆಹಮಾನ್‌ ಖುರೇಷಿ ಜಾಮೀನು ಅರ್ಜಿಯನ್ನು ...

Vijaya Karnataka 11 May 2019, 5:00 am
ಬೆಂಗಳೂರು: ಮಾನವ ಕಳ್ಳಸಾಗಣೆ ಜಾಲ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ 6ನೇ ಆರೋಪಿ ಮುಂಬೈ ಮೂಲದ ಅಬ್ದುಲ್‌ ಕರೀಂ ರೆಹಮಾನ್‌ ಖುರೇಷಿ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.
Vijaya Karnataka Web human trafficking
ಮಾನವ ಕಳ್ಳ ಸಾಗಾಣೆ : ಜಾಮೀನು ಅರ್ಜಿ ವಜಾ


ತೀರ್ಪು ಕಾಯ್ದಿರಿಸಿದ್ದ ನ್ಯಾ.ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯಪೀಠ ಶುಕ್ರವಾರ ಈ ತೀರ್ಪು ಪ್ರಕಟಿಸಿದೆ.

ಕಳೆದ ತಿಂಗಳು ಹೈಕೋರ್ಟ್‌ ಇದೇ ಪ್ರಕರಣದಲ್ಲಿ ಪಂಜಾಬ್‌ನ ಗುರುದಾಸ್‌ಪುರದ ಹರ್‌ಮೀಂದರ್‌ ಸಿಂಗ್‌ ಅಲಿಯಾಸ್‌ ಶೆಲ್ಲಿ, ಹರಾರ‍ಯಣದ ಜಿಂದ್‌ ಜಿಲ್ಲೆಯ ಪರಶ್‌ರಾಮ್‌ ಮತ್ತು ಸುಮಿತ್‌ ಅಲಿಯಾಸ್‌ ಮಿಟ್ಟುಗೆ ಜಾಮೀನು ನೀಡಲು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನ್ಯಾಯಪೀಠ, ಆರೋಪಿ ಅಕ್ರಮ ಮಾನವ ಕಳ್ಳ ಸಾಗಾಣೆ ದಂಧೆಯ ಪಿತೂರಿಯ ಭಾಗವಾಗಿದ್ದಾರೆನ್ನುವುದಕ್ಕೆ ಸಾಕಷ್ಟು ಸಾಕ್ಷ್ಯ ಇದೆ,'' ಎಂದು ಹೇಳಿದೆ.

ಆರೋಪಿ ಪರ ವಕೀಲರು ''ಕೃತ್ಯದಲ್ಲಿ ಆರೋಪಿಯ ಪಾತ್ರವೇನೂ ಇಲ್ಲ,''ಎಂದು ವಾದ ಮಂಡಿಸಿದ್ದರು. ಆದರೆ ಪ್ರಾಸಿಕ್ಯೂಷನ್‌ ಪರ ಸರಕಾರಿ ವಕೀಲರು ''ಅರ್ಜಿದಾರ ಖುರೇಷಿ ಇಂತಹುದೇ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ''ಎಂದು ಮಾಹಿತಿ ನೀಡಿದ್ದರು.

ಪಂಜಾಬ್‌ ಮೂಲದ ಸುರಿಂದರ್‌ಪಾಲ್‌ ಸಿಂಗ್‌ಗೆ ಕೆನಡಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಬೆಂಗಳೂರಿಗೆ ಕರೆತರಲಾಗಿತ್ತು.ನಂತರ ಆತನಿಗೆ ಮನೆಗೆ ದೂರವಾಣಿ ಕರೆ ಮಾಡಿ ಕೆನಡಾ ತಲುಪಿದ್ದೇನೆ, ಹಣ ಕಳುಹಿಸಿ ಎಂದು ಕೇಳುವಂತೆ ಒತ್ತಡ ಹೇರಿದ್ದರು. ಇದಕ್ಕೆ ಸುರಿಂದರ್‌ ಪಾಲ್‌ ವಿರೋಧ ವ್ಯಕ್ತಪಡಿಸಿದಾಗ ಕೊಂದು ಪದರಹಳ್ಳಿ ಗ್ರಾಮದ ಹೊರವಲಯದ ಮೃತದೇಹವನ್ನು ಬಿಸಾಡಿದ್ದರು. ಈ ಬಗ್ಗೆ ರಾಮನಗರ ಗ್ರಾಮಾಂತರ ಠಾಣೆ ಪೋಲಿಸರು ತನಿಖೆ ನಡೆಸಿದಾಗ ಮಾನವ ಕಳ್ಳ ಸಾಗಾಣೆ ಜಾಲ ಪತ್ತೆಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ