ಆ್ಯಪ್ನಗರ

ಜೀತಕ್ಕೆ ಸಾಗಿಸುತ್ತಿದ್ದ 15 ಬಾಲಕರ ರಕ್ಷಣೆ

ಮೂರು ವರ್ಷಗಳಿಂದ ರಾಮನಗರಕ್ಕೆ ಪೂರೈಕೆಯಾಗುತ್ತಿದ್ದ ಮಾನವ ಕಳ್ಳಸಾಗಣೆ ಜಾಲವೊಂದು ಬೆಳಕಿಗೆ ಬಂದಿದೆ.

Vijaya Karnataka 2 Sep 2018, 8:12 am
ರಾಮನಗರ: ಮೂರು ವರ್ಷಗಳಿಂದ ರಾಮನಗರಕ್ಕೆ ಪೂರೈಕೆಯಾಗುತ್ತಿದ್ದ ಮಾನವ ಕಳ್ಳಸಾಗಣೆ ಜಾಲವೊಂದು ಬೆಳಕಿಗೆ ಬಂದಿದೆ.
Vijaya Karnataka Web human


ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ 15 ಬಾಲಕರನ್ನು ರಕ್ಷಿಸಲಾಗಿದೆ. ಬಿಹಾರದಿಂದ ಉದ್ಯೋಗದ ಆಸೆ ತೋರಿಸಿ ರಾಮನಗರಕ್ಕೆ ಕರೆತಂದು ಜೀತಕ್ಕೆ ತಳ್ಳಲಾಗಿತ್ತು ಎನ್ನಲಾಗಿದೆ.

ನಡೆದದ್ದೇನು?


ಬಿಹಾರದ ಮಧುಭಾನಿ ಜಿಲ್ಲೆಯ ಇರ್ಷಾದ್‌ ಎಂಬುವನು ಈ ದಂಧೆಯ ರೂವಾರಿ. 10 ಸಾವಿರ ಸಂಬಳದ ಆಸೆ ಹುಟ್ಟಿಸಿ ಬಾಲಕರನ್ನು ಕರೆತಂದು ರಾಮನಗರದ ಗುಜರಿ ಅಂಗಡಿ, ಚಿಂದಿ ಆಯುವ ಕೆಲಸಕ್ಕೆ ಹಚ್ಚಿದ್ದರು. ಆಗ ಸಂತೋಷ್‌ ತಪ್ಪಿಸಿಕೊಂಡು ತನ್ನೂರಿನ ಪ್ರಧಾನರಿಗೆ ಕಷ್ಟದ ಬಗ್ಗೆ ತಿಳಿಸಿದ್ದಾನೆ. ನಾಪತ್ತೆಯಾಗಿದ್ದ ಮಕ್ಕಳ ಆಧಾರ್‌ ಕಾರ್ಡ್‌ ಸಮೇತ ಬಿಹಾರದ ಮಕ್ಕಳ ರಕ್ಷ ಣಾ ಘಟಕದ ಸಹಾಯ ಕೋರಿದ ಪ್ರಧಾನರು ಕರ್ನಾಟಕಕ್ಕೆ ಮಾಹಿತಿ ನೀಡಿದ್ದರು. ಸಂತೋಷ್‌ ತೋರಿಸಿದ ಮಾರ್ಗದಲ್ಲಿ ಬಿಹಾರದಿಂದ ಬಂದ ಪೊಲೀಸರು ರಾಮನಗರದಲ್ಲಿ ಬಿಹಾರದ ಬಾಲಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಒಂದೇ ಕಡೆ ಅಡುಗೆ ನಿದ್ದೆ: ಬಿಹಾರದಿಂದ ಕರೆತಂದ ಬಾಲಕರು ಉಳಿದುಕೊಳ್ಳಲು ಒಂದೇ ಕಡೆ ವ್ಯವಸ್ಥೆ ಮಾಡಲಾಗಿದೆ. ಬಿಹಾರದಿಂದಲೇ ಬಂದಿದ್ದ ರೌದಿ ಎಂಬುವನು ಇವರಿಗೆಲ್ಲ ಅಡುಗೆ ಮಾಡಿ ಹಾಕುತ್ತಿದ್ದ. ಸ್ನಾನ, ಶೌಚ, ಅತ್ಯಂತ ಕೊಳಕಿನ ವಾತಾವರಣದಲ್ಲಿ ನಡೆಯುತ್ತಿದ್ದು ಸ್ನಾನವೂ ಕೂಡ ತಿಂಗಳುಗಳ ನಂತರವೇ ಸಿಗುತ್ತಿತ್ತು ಎಂದು ಬಾಲಕರು ತಿಳಿಸಿದ್ದಾರೆ.

ಶನಿವಾರ ನಡೆಸಿದ 15 ಬಾಲಕರ ವಯೋ ಪರೀಕ್ಷೆಯಲ್ಲಿ 5 ಬಾಲಕರು ಅಪ್ರಾಪ್ತರೆಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ