ಆ್ಯಪ್ನಗರ

‘ನಾನು ಕಾನೂನಿನ ಪ್ರಕಾರವೇ ಜಮೀನು ಹಂಚಿಕೆ ಮಾಡಿದ್ದೆ’; ಮುರುಗೇಶ್ ನಿರಾಣಿ

ಆಲಂ ಪಾಷ ಬ್ಲ್ಯಾಕ್‌ ಮೇಲ್‌ ಮಾಡುವುದರಲ್ಲಿಎತ್ತಿದ ಕೈ ಎಂದು ಆರೋಪಿಸಿದ ಸಚಿವ ಮುರುಗೇಶ ನಿರಾಣಿ, ನಾನು ಕಾನೂನಿನ ಪ್ರಕಾರವೇ ಜಮೀನು ಹಂಚಿಕೆ ಮಾಡಿದ್ದೆ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆ ಪ್ರಶ್ನೆ ಬರುವುದೇ ಇಲ್ಲ. ಇಲ್ಲಿಯ ತನಕ ಏಕೆ ಸುಮ್ಮನಿರಬೇಕಿತ್ತು? ಎಂದು ಪ್ರಶ್ನಿಸಿದ್ದಾರೆ.

Vijaya Karnataka Web 16 Jan 2021, 6:59 am
Vijaya Karnataka Web Murugesh Nirani
ಬೆಂಗಳೂರು: ನಾನು ಯಾವುದೇ ಸರಕಾರಿ ಜಮೀನು ಹೊಡೆದಿಲ್ಲ. ಯಾವ ಸಂಬಂಧಿಕರಿಗೂ ಪ್ರಭಾವ ಬೀರಿ ಭೂಮಿ ಕೊಡಿಸಿಲ್ಲ. ಸರಕಾರದ ಬಳಿಯೇ ಜಮೀನು ಇರುವಾಗ ಇದರಲ್ಲಿ ಭ್ರಷ್ಟಾಚಾರ ನಡೆಯಲು ಹೇಗೆ ಸಾಧ್ಯ ಎಂದು ನೂತನ ಸಚಿವ ಮುರುಗೇಶ ನಿರಾಣಿ ಪ್ರಶ್ನಿಸಿದರು.

ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಸಾಮಾಜಿಕ ಹೋರಾಟಗಾರ ಆಲಂ ಪಾಷ ಆರೋಪ ಹುರುಳಿಲ್ಲದ್ದು. ನಾನು ಕೈಗಾರಿಕೆ ಸಚಿವನಾಗಿದ್ದಾಗ ಆಲಂ ಪಾಷ ಅವರಿಗೆ ಜಮೀನು ಹಂಚಿಕೆ ಮಾಡಲಾಗಿದೆ. ಅವರಿಗೆ ಹಣ ಕಟ್ಟಲು ಸಮಯ ನೀಡಲಾಗಿತ್ತು. ನಿಗದಿತ ಸಮಯದಲ್ಲಿ ಹಣ ಕಟ್ಟಲು ಸಾಧ್ಯವಾಗಲಿಲ್ಲ. ಸಮಯ ವ್ಯರ್ಥ ಮಾಡಿ ಜಮೀನು ಹೊಡೆಯಲು ಯತ್ನಿಸಿದರು ಎಂದು ಆರೋಪಿಸಿದರು.

‘ಯಾರ ಹತ್ರ ಇರದಿದ್ರೂ ನಮ್ಮ ಸ್ನೇಹಿತ ವಿಶ್ವನಾಥ್ ಹತ್ರ ಸಿ.ಡಿ ಇದ್ದೇ ಇರುತ್ತೆ’; ಟಿಬಿ ಜಯಚಂದ್ರ
ಅಲ್ಲದೇ ಈಗಲೂ ಆ ಜಮೀನು ಕೆಐಎಡಿಬಿ ಅಧೀನದಲ್ಲಿದೆ. ಕಾನೂನು ಪ್ರಕಾರ ಹಣ ಕಟ್ಟಿದ್ದರೆ ಜಮೀನು ಕೊಡುತ್ತಿದ್ದೆವು. ನಿಗದಿತ ಸಮಯದಲ್ಲಿ ಹಣ ಕಟ್ಟಲಿಲ್ಲಎಂಬ ಕಾರಣಕ್ಕೆ ಜಮೀನು ಸಿಕ್ಕಿಲ್ಲ ಎಂದರು. ಇನ್ನು ಆಲಂ ಪಾಷ ಬ್ಲ್ಯಾಕ್‌ ಮೇಲ್‌ ಮಾಡುವುದರಲ್ಲಿಎತ್ತಿದ ಕೈ. ನಾನು ಕಾನೂನಿನ ಪ್ರಕಾರವೇ ಜಮೀನು ಹಂಚಿಕೆ ಮಾಡಿದ್ದೆ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆ ಪ್ರಶ್ನೆ ಬರುವುದೇ ಇಲ್ಲ. ಇಲ್ಲಿಯ ತನಕ ಏಕೆ ಸುಮ್ಮನಿರಬೇಕಿತ್ತು? ಈಗ ನಾನು ಸಚಿವನಾಗುತ್ತಿದ್ದಂತೆ ಈ ಪ್ರಕರಣವನ್ನು ಪಾಷ ಕೆದಕುತ್ತಿದ್ದಾರೆ. ಬ್ಲಾಕ್‌ ಮೇಲ್‌ ಮಾಡುವವರಿಗೆ ಬಗ್ಗುವುದಿಲ್ಲ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ