ಆ್ಯಪ್ನಗರ

ಬಿಜೆಪಿ ಚದುರಂಗದಾಟವ ನಾ ಬಲ್ಲೆ: ಡಿಕೆಶಿ

''ನಾವು ಕಣ್ಣು ಮುಚ್ಚಿ ರಾಜಕಾರಣ ಮಾಡುತ್ತಿಲ್ಲ. ಯಾರು ಯಾವ ಆಟ ನಡೆಸುತ್ತಿದ್ದಾರೆ. ಯಾರು ಚೆಸ್‌ಪಾನ್‌ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದೆ. ಎಲ್ಲದಕ್ಕೂ ಔಷಧ ನಮ್ಮಲ್ಲಿದೆ,'' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Vijaya Karnataka 3 Jul 2019, 5:00 am
ಬೆಂಗಳೂರು : ''ನಾವು ಕಣ್ಣು ಮುಚ್ಚಿ ರಾಜಕಾರಣ ಮಾಡುತ್ತಿಲ್ಲ. ಯಾರು ಯಾವ ಆಟ ನಡೆಸುತ್ತಿದ್ದಾರೆ. ಯಾರು ಚೆಸ್‌ಪಾನ್‌ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದೆ. ಎಲ್ಲದಕ್ಕೂ ಔಷಧ ನಮ್ಮಲ್ಲಿದೆ,'' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
Vijaya Karnataka Web i know bjps chess play says d k shivkumar
ಬಿಜೆಪಿ ಚದುರಂಗದಾಟವ ನಾ ಬಲ್ಲೆ: ಡಿಕೆಶಿ


ಆನಂದ್‌ಸಿಂಗ್‌ ಮತ್ತು ರಮೇಶ್‌ ಜಾರಕಿಹೊಳಿ ರಾಜೀನಾಮೆ ಹಾಗೂ ಆಡಳಿತ ಪಕ್ಷದ ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳ ಕುರಿತು ಮಂಗಳವಾರ ಶಿವಕುಮಾರ್‌ ಈ ಪ್ರತಿಕ್ರಿಯೆ ನೀಡಿದರು. ''ಸಮ್ಮಿಶ್ರ ಸರಕಾರ ಸುಭದ್ರವಾಗಿದ್ದು, ಯಾರನ್ನೂ ಮನವೊಲಿಸುವ ಅವಶ್ಯಕತೆ ಇಲ್ಲ. ಸರಕಾರ ಉಳಿಯಬೇಕು ಎಂಬುದು ಮಿತ್ರಪಕ್ಷಗಳ ಎಲ್ಲ ಶಾಸಕರ ಇಚ್ಛೆ. ಹೀಗಾಗಿ ಸರಕಾರಕ್ಕೆ ಯಾವ ಆತಂಕವೂ ಇಲ್ಲ. ಪೂರ್ಣ ಅವಧಿ ಪೂರೈಸಲಿದೆ'' ಎಂದು ವಿಶ್ವಾಸದಿಂದ ಹೇಳಿದರು.

''ರಾಜ್ಯ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್‌ ಅವರು ಏನು ಮಾಡಬೇಕೋ, ಯಾವ ನಿರ್ದೇಶನ ನೀಡಬೇಕೋ ಆ ಕೆಲಸವನ್ನು ಮಾಡಿದ್ದಾರೆ. ಸದ್ಯಕ್ಕೆ ಅವರು ರಾಜ್ಯಕ್ಕೆ ಬರುವ ಅಗತ್ಯ ಇಲ್ಲ. ಎಲ್ಲವನ್ನೂ ನಾವೇ ನಿಭಾಯಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಖಾಸಗಿ ಕಾರ್ಯಕ್ರಮಕ್ಕೆ ವಿದೇಶಕ್ಕೆ ತೆರಳಿದ್ದಾರೆ. ಅವರಿಗೂ ಖಾಸಗಿ ಬದುಕಿದೆ. ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಾಲ್ಕೈದು ಬಾರಿ ಮಾತನಾಡಿದ್ದೇವೆ''ಎಂದು ಶಿವಕುಮಾರ್‌ ಹೇಳಿದರು.

''ನಾಗೇಂದ್ರ ಅವರು ವಿದ್ಯಾವಂತ, ಬುದ್ಧಿವಂತ ಮತ್ತು ಪ್ರಜ್ಞಾವಂತ ನಾಯಕ. ಮಹೇಶ್‌ ಕುಮಟಳ್ಳಿ ಅವರು ಹುಟ್ಟು ಕಾಂಗ್ರೆಸ್ಸಿಗ. ಯಾರೊಬ್ಬರೂ ಪಕ್ಷ ಬಿಡುವುದಿಲ್ಲ. ಸಿಎಂ ಕೂಡ ಶಾಸಕರೊಟ್ಟಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ನಾನೂ ಮಾತನಾಡಿದ್ದೇನೆ. ಶಾಸಕ ಆನಂದ್‌ ಸಿಂಗ್‌ ಅವರು ಈಗಲೂ ನನಗೆ ಆತ್ಮೀಯರು. ಅವರು ರಾಜೀನಾಮೆ ತೀರ್ಮಾನ ಬದಲಿಸಿ ಪಕ್ಷದಲ್ಲೇ ಉಳಿಯಲಿದ್ದಾರೆ ಎಂಬ ವಿಶ್ವಾಸವಿದೆ'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ