ಆ್ಯಪ್ನಗರ

ಕೆ ಆರ್‌ ಪುರಂ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಕ್ಷಮೆ ಕೇಳಿದ ಸಿದ್ದರಾಮಯ್ಯ

ಎಂಎಲ್‌ಸಿ ನಾರಾಯಣ್ ಸ್ವಾಮಿಗೆ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿ ಅಸಮಾಧಾನಗೊಂಡಿರುವ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಅವರು ಡಿ ಕೆ ಮೋಹನ್‌ ಬಾಬುಗೆ ಸೂಕ್ತ ಸ್ಥಾನಮಾನ ಕೊಡುವ ಭರವಸೆಯನ್ನು ವ್ಯಕ್ತ ಪಡಿಸಿದರು.

Vijaya Karnataka Web 2 Nov 2019, 4:43 pm
ಬೆಂಗಳೂರು: ಅನರ್ಹ ಶಾಸಕ ಭೈರತಿ ಭಸವರಾಜ್‌ ಅವರಿಗೆ ಅಂದು ಟಿಕೆಟ್‌ ನೀಡಿ ತಪ್ಪು ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್‌ ಕಾರ್ಯಕರ್ತರ ಜತೆ ಕ್ಷಮೆ ಕೇಳಿದ ಪ್ರಸಂಗ ಕೆಆರ್‌ ಪುರಂ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ನಡೆಯಿತು. ಒಂದು ಹಂತಕ್ಕೆ ಸಭೆಯಿಂದ ಎದ್ದು ಹೊರ ನಡೆಯಲು ಸಿದ್ದರಾಗಿದ್ದ ಕಾರ್ಯಕರ್ತರನ್ನು ಕೊನೆಗೆ ಸಿದ್ದರಾಮಯ್ಯ ಅವರೇ ಸಮಾಧಾನ ಪಡಿಸಿ, ನನ್ನಿಂದ ತಪ್ಪಾಯ್ತು, ಭರತಿ ಭಸವರಾಜ್‌ಗೆ ಟಿಕೆಟ್‌ ನೀಡಿ ತಪ್ಪು ಮಾಡಿದೆ ಎಂದು ಕ್ಷಮೆ ಕೇಳಿದ್ದಾರೆ.
Vijaya Karnataka Web Siddaramaiah Congress


ಕೆಆರ್ ಪುರಂ ಕ್ಷೇತ್ರದಲ್ಲಿ ಡಿ ಕೆ ಮೋಹನ್ ಬಾಬುಗೆ ಟಿಕೆಟ್ ನೀಡದೇ ಇರುವುದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಮತ್ತು ದಿನೇಶ್‌ ಗುಂಡೂರಾವ್‌ ವಿರುದ್ಧ ಕಾರ್ಯಕರ್ತರು ಘೇರವ್‌ ಹಾಕಿದರು. ಹಾಲಿ ಎಂಎಲ್‌ಸಿ ನಾರಾಯಣ್‌ ಸ್ವಾಮಿಗೆ ಟಿಕೆಟ್‌ ನೀಡಿದ್ದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಅನರ್ಹ ಶಾಸಕರನ್ನು ಮುಂಬಯಿಯಲ್ಲಿ ಇರಿಸಿದ್ದ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆ ನೀಡಲಿ: ಸಿದ್ದರಾಮಯ್ಯ

ಯಾದವ ನಾಯಕತ್ವವನ್ನ ಮುಗಿಸ್ತಾ ಇದ್ದೀರಾ? 2013ರಲ್ಲಿ ಕೃಷ್ಞಪ್ಪರನ್ನ ಬದಿಗೆ ತಳ್ಳಿ ಭೈರತಿ ಬಸವರಾಜ್ ಗೆ ಟಿಕೆಟ್ ನೀಡಿದ್ರಿ. ಈಗ ಭೈರತಿ ಬಸವರಾಜ್ ಕಾಂಗ್ರೆಸ್ಗೆ ದ್ರೋಹ ಮಾಡಿ ಹೋಗಿದ್ದಾರೆ. ಈಗ ಬೈ ಎಲೆಕ್ಷನಲ್ಲಿ ಯಾರನ್ನೂ ಕೇಳದೆ ಎಂಎಲ್ಸಿ ನಾರಾಯಣ್ ಸ್ವಾಮಿಗೆ ಟಿಕೆಟ್ ನೀಡಿದ್ದಿರಿ. ಎಐಸಿಸಿ, ಕೆಪಿಸಿಸಿ ಅಂತಾ ನೀವೇ ಡಿಸೈಡ್ ಮಾಡ್ತಿರಿ. ನಮ್ಮ ಅಭಿಪ್ರಾಯ ಪರಿಗಣನೆ ಮಾಡಿಲ್ಲ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತ ಪಡಿಸಿದರು.

ಕಾರ್ಯಕರ್ತರ ಮಾತುಗಳಿಗೆ ಗರಂ ಆದ ಸಿದ್ದರಾಮಯ್ಯ, ನೀವೆಲ್ಲಾ ಡಿ ಕೆ ಮೋಹನ್ ಬಾಬು ಅವರ ಬೆಂಬಲಿಗರ? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರ ಪ್ರಶ್ನೆಗೆ ಸಿಟ್ಟಾದ ಕಾರ್ಯಕರ್ತರು, ಸ್ವಾಮಿ ನಾವು 40 ವರ್ಷದಿಂದ ಕಾಂಗ್ರೆಸ್ಗೆ ಕೆಲಸ ಮಾಡಿದ್ದೀವಿ. ಹೀಗೆಲ್ಲಾ ಮಾತಾಡಿದ್ರೆ ಎದ್ದು ಹೋಗ್ತಿವಿ ಎಂದು ಸಭೆಯಿಂದ ಹೊರನಡೆಯಲು ಮುಂದಾದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ದಿನೇಶ್‌ ಗುಂಡೂರಾವ್‌ ಕಾರ್ಯಕರ್ತರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು.

ಮತ್ತೆ ಬರಲಿದೆ ಮೈತ್ರಿ ಸರಕಾರ: ಎಚ್‌ಡಿಕೆ ಭವಿಷ್ಯ, ಜೆಡಿಎಸ್‌ ಬೆಂಬಲ ಯಾರಿಗೆ?

ಬಳಿಕ ಸಿದ್ದರಾಮಯ್ಯ ಕಾರ್ಯಕರ್ತರನ್ನು ತಮ್ಮ ಎಂದಿನ ಆತ್ಮೀಯ ಶೈಲಿಯಲ್ಲಿ ಕೂತ್ಕಳ್ರಯ್ಯಾ, ಕೂತ್ಕಳಿ... ಎಂದು ಕರೆದರಲ್ಲದೆ ಭಾರತಿ ಭಸವರಾಜ್‌ಗೆ ಟಿಕೆಟ್‌ ನೀಡಿ ತಪ್ಪು ಮಾಡಿದೆ ಎಂದು ಕ್ಷಮೆ ಕೇಳಿದರು. 'ತಪ್ಪಾಯ್ತಪ್ಪ ನನ್ನಿಂದ ತಪ್ಪಾಯ್ತು.. ಭೈರತಿ ಬಸವರಾಜ್ ಗೆ ಟಿಕೆಟ್ ನೀಡಿ ತಪ್ಪು ಮಾಡಿದೆ. ಅವನು ನನಗೆ ದ್ರೋಹ ಮಾಡಿದ. ಈಗ ಸೋಲಿಸೋ ಸಮಯ ಬಂದಿದೆ.. ಸೋಲಿಸಿ.. ಡಿ ಕೆ ಮೋಹನ್ ಬಾಬುಗೆ ಪಕ್ಷದಿಂದ ಸೂಕ್ತ ಸ್ಥಾನ ಮಾನ ನೀಡ್ತಿವಿ' ಎಂದು ಸಿದ್ದರಾಮಯ್ಯ ಕಾರ್ಯಕರ್ತರಿಗೆ ಭರವಸೆ ನೀಡಿದರು.

ಕುಮಾರಸ್ವಾಮಿ ಬಿಜೆಪಿ ಬಗ್ಗೆ ಸಾಫ್ಟ್‌ ಕಾರ್ನರ್‌ ತೋರುತ್ತಿರುವುದೇಕೆ? ಎಚ್‌ಡಿಕೆ ಕೊಟ್ಟ ಉತ್ತರವಿದು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ