ಆ್ಯಪ್ನಗರ

ಉಪೇಂದ್ರಗೆ ನಾನು ಸಪೋರ್ಟ್‌ ಮಾಡುತ್ತೀನಿ: ಶಿವರಾಜ್‌ ಕುಮಾರ್‌

ದಾವಣಗೆರೆಯಲ್ಲಿ ಗುಟುರು ಹಾಕಿದ ಟಗರು ಹೀರೋ

Vijaya Karnataka Web 26 Mar 2018, 8:29 pm
ದಾವಣಗೆರೆ: ನಾನು ರಾಜಕೀಯಕ್ಕೆ ಎಂಟ್ರಿ ಕೊಡೋಲ್ಲ. ನನ್ನ ಪತ್ನಿ ಗೀತಾ ಮಾತ್ರ ರಾಜಕೀಯಕ್ಕೆ ಹೋಗುತ್ತಾರೆ. ನಟ ಉಪೇಂದ್ರ ರವರ ರಾಜಕೀಯ ಎಂಟ್ರಿಯನ್ನು ಸ್ವಾಗತ ಮಾಡುತ್ತೇನೆ ಎಂದು ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಹೇಳಿದರು.
Vijaya Karnataka Web i support upendra political journey shivarajkumar
ಉಪೇಂದ್ರಗೆ ನಾನು ಸಪೋರ್ಟ್‌ ಮಾಡುತ್ತೀನಿ: ಶಿವರಾಜ್‌ ಕುಮಾರ್‌


ನಗರದ ಅಶೋಕ್‌ ಟಾಕೀಸ್‌ನಲ್ಲಿ ಟಗರು ಸಿನಿಮಾ 25 ದಿವಸ ಪೂರೈಸಿದ ಹಿನ್ನೆಲೆಯಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್‌ ಹಾಗೂ ನಟ ಧನಂಜಯ್ ಸೋಮವಾರ ರೋಡ್‌ ಶೋನಲ್ಲಿ ಭಾಗವಹಿಸಿ ಮಾತನಾಡಿದರು.

ಉಪೇಂದ್ರಗೆ ನಾನು ಯಾವಾಗ್ಲೂ ಸಪೋರ್ಟ್‌ ಮಾಡುತ್ತೇನೆ. ರಾಜಕೀಯದಲ್ಲಿ ಉಪೇಂದ್ರ ಏನೋ ಒಂದು ಬದಲಾವಣೆ ಮಾಡೋದಕ್ಕೆ ಹೊರಟ್ಟಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಇತ್ತೀಚೆಗೆ ಚಂದನವನದಲ್ಲೂ ನಟಿಯರನ್ನು ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಅವರನ್ನು ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಮಂಡ್ಯ ರಮೇಶ್‌ ಹೇಳಿದ ಮಾತಿಗೆ ಶಿವಣ್ಣ ಪ್ರತಿಕ್ರಿಯಿಸಿದರು.

ಮಂಡ್ಯ ರಮೇಶ್‌ ಅದ್ಯಾಕೆ ಈ ರೀತಿ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ ಚಿತ್ರರಂಗದಲ್ಲಿ ಇದುವರೆಗೂ ಯಾವುದೇ ಆ ರೀತಿಯ ಘಟನೆಗಳು ನಡೆದಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ