ಆ್ಯಪ್ನಗರ

ದಿನಕ್ಕೆ 40 ಸಿಗರೇಟ್‌ ಸೇದುತ್ತಿದ್ದೆ ,ಈಗ ವಾಸನೆ ಕಂಡರಾಗದು

ವಿದ್ಯಾರ್ಥಿ ಜೀವನದಲ್ಲಿ ಹಾಗೂ ವಕೀಲನಾಗಿದ್ದಾಗ ದಿನಕ್ಕೆ 40 ಸಿಗರೇಟ್‌ ಸೇದುತ್ತಿದ್ದೆ. ಅದರಿಂದಾಗುವ ಭಯಾನಕ ಪರಿಣಾಮ ಅರಿತು ದೃಢ ಮನಸ್ಸಿನಿಂದ ಸಿಗರೇಟ್‌ ಸೇದುವುದನ್ನು ಬಿಟ್ಟೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Vijaya Karnataka 1 Oct 2018, 8:33 am
ಮೈಸೂರು: ವಿದ್ಯಾರ್ಥಿ ಜೀವನದಲ್ಲಿ ಹಾಗೂ ವಕೀಲನಾಗಿದ್ದಾಗ ದಿನಕ್ಕೆ 40 ಸಿಗರೇಟ್‌ ಸೇದುತ್ತಿದ್ದೆ. ಅದರಿಂದಾಗುವ ಭಯಾನಕ ಪರಿಣಾಮ ಅರಿತು ದೃಢ ಮನಸ್ಸಿನಿಂದ ಸಿಗರೇಟ್‌ ಸೇದುವುದನ್ನು ಬಿಟ್ಟೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
Vijaya Karnataka Web Siddramaiah


ಎಚ್‌ಎನ್‌ಆರ್‌ ಫೌಂಡೇಷನ್‌ ಆಯೋಜಿಸಿದ್ದ ಗರ್ಭಕೋಶ ಕ್ಯಾನ್ಸರ್‌ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

''ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ನಮ್ಮ ಅಸಹಜ ಜೀವನ ಶೈಲಿ, ದುಶ್ಚಟಗಳೇ ಕಾರಣವಾಗಿವೆ. ಆದರೆ, ಯಾವುದೇ ವ್ಯಕ್ತಿ ಕೆಟ್ಟ ಚಟಗಳನ್ನು ಸುಲಭವಾಗಿ ಬಿಡಲು ಸಾಧ್ಯವಿಲ್ಲ. ದೃಢ ಸಂಕಲ್ಪದಿಂದ ಮಾತ್ರ ಅವುಗಳಿಂದ ದೂರ ಉಳಿಯಲು ಸಾಧ್ಯ,'' ಎಂದರು.

''ಒಮ್ಮೆ ಸ್ನೇಹಿತರು ವಿದೇಶಗಳಿಂದ ಹಿಂದಿರುಗುವಾಗ ದೊಡ್ಡ ಬಾಕ್ಸ್‌ ನಲ್ಲಿ ವಿಭಿನ್ನವಾದ ವಿದೇಶಿ ಸಿಗರೇಟ್‌ ತಂದುಕೊಟ್ಟಿದ್ದರು. ಕೆಲವೆ ದಿನಗಳಲ್ಲಿ ಅವುಗಳನ್ನು ಸೇದು ಮುಗಿಸಿದೆ. ನಂತರ, ಹೀಗೆ ಸಿಗರೇಟ್‌ ಸೇದುವುದರಿಂದ ನನ್ನ ಪ್ರಾಣಕ್ಕೆ ಅಪಾಯವಾಗುತ್ತದೆ ಎಂಬುದನ್ನು ಯೋಚಿಸಿದೆ. 1987ರ ಆ. 17 ರಂದು ಸಿಗರೇಟ್‌ ಸೇದುವುದನ್ನು ನಿಲ್ಲಿಸಿದೆ. ಅಂದಿನಿಂದ ಸಿಗರೇಟ್‌ ವಾಸನೆ ಕಂಡರೂ ನನಗೆ ಆಗುವುದಿಲ್ಲ,'' ಎಂದು ವಿವರಿಸಿದರು.

''ಹಳ್ಳಿಗಳಲ್ಲಿ ನಾನು ಸಾಯುವವರೆಗೆ ಆಸ್ಪತ್ರೆ ಮೆಟ್ಟಿಲು ತುಳಿಯುವುದಿಲ್ಲ ಎಂಬ ಹುಚ್ಚು ಹಟ ಪ್ರದರ್ಶಿಸುತ್ತಾರೆ. ಆದರೆ, ದೇಹದೊಳಗೆ ಕಾಯಿಲೆಗಳು ಶುರುವಾಗಿರುತ್ತದೆ. ಅಂತಿಮ ಹಂತ ತಲುಪಿದಾಗ ಆಸ್ಪತ್ರೆಗೆ ಹೋಗುತ್ತಾರೆ. ಈ ಕೆಟ್ಟ ನಿರ್ಧಾರದಿಂದಾಗಿ ತಮ್ಮ ಪ್ರಾಣವನ್ನೆ ಕಳೆದುಕೊಳ್ಳುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ವರ್ಷಕ್ಕೆ ಒಮ್ಮೆಯಾದರೂ ದೇಹದ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು,'' ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಎಚ್‌ಎನ್‌ಆರ್‌ ಫೌಂಡೇಷನ್‌ ಅಧ್ಯಕ್ಷ ರವೀಂದ್ರ ,ಡಾ.ಬಿ.ಸಿ. ಭಗವಾನ್‌, ಕಾವೇರಿ ಆಸ್ಪತ್ರೆ ಅಧ್ಯಕ್ಷ ಡಾ.ಚಂದ್ರಶೇಖರ್‌, ಗೋಪಾಲಗೌಡ ಆಸ್ಪತ್ರೆಯ ಸುಕೃತ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ