ಬೆಂಗಳೂರು: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರಕಾರದಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದಕ್ಕೆ ಕುಮಾರಸ್ವಾಮಿಗೆ ಕಷ್ಟವಾಗುತ್ತದೆ, ಹೀಗಾಗಿ ನಾನೇ ಹೋರಾಟಕ್ಕೆ ಇಳಿಯುತ್ತೇನೆ. ಮೈತ್ರಿ ಸರಕಾರಕ್ಕೆ ಅಪಾಯ ಬಾರದ ರೀತಿ ಹೋರಾಡುವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
''ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್ನ್ನು ಕಡೆಗಣಿಸುವಂತಿಲ್ಲ, ಜತೆಗೆ 104 ಸ್ಥಾನ ಹೊಂದಿರುವ ಪ್ರತಿಪಕ್ಷವನ್ನೂ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಕುಮಾರಸ್ವಾಮಿಯೊಬ್ಬರೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ . ಕುಮಾರಸ್ವಾಮಿ ದಿನಕ್ಕೆ ಹದಿನೆಂಟು ಗಂಟೆ ಕಾಲ ಬೆಳಗಿನಿಂದ ಸಂಜೆಯವರೆಗೆ ಕೆಲಸ ಮಾಡಿದರೂ ಸಾಕಾಗುತ್ತಿಲ್ಲ. ಅವರ ಆರೋಗ್ಯದ ಕಡೆಗೂ ಗಮನ ನೀಡಬೇಕಿದೆ. ಇದರ ನಡುವೆ ಗ್ರಾಮ ವಾಸ್ತವ್ಯಕ್ಕೆ ಸಮಯ ಎಲ್ಲಿದೆ ? ಹೀಗಾಗಿ ನಾನೇ ಹೋರಾಟಕ್ಕೆ ಇಳಿಯುತ್ತೇನೆ. ಮೈತ್ರಿ ಸರಕಾರಕ್ಕೆ ಅಪಾಯ ಬಾರದಂತೆ ನೋಡಿಕೊಳ್ಳಬೇಕಿದೆ,'' ಎಂದರು.
''ಜನ ಕೈ ಹಿಡಿಯದಿದ್ದರೂ ಪರವಾಗಿಲ್ಲ ಎಂದು ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದರು. ಆದರೂ ಇದು ಅಣ್ಣ-ತಮ್ಮನ ಬಜೆಟ್, ಅಪ್ಪ-ಮಕ್ಕಳ ಬಜೆಟ್ ಎಂದು ಟೀಕಿಸಿದರು. ಇದೆಲ್ಲದರ ಬಗ್ಗೆ ಕಾರ್ಯಕರ್ತರು ಮಾತನಾಡಬೇಕು. ಕುಮಾರಸ್ವಾಮಿ ಕೊಟ್ಟ ಮಾತು ಪಾಲಿಸಿದ್ದಾರೆ. ಮಾಧ್ಯಮಗಳೂ ಅಸಹಕಾರ ತೋರುತ್ತಿವೆ. ಆದರೆ ಮಾಧ್ಯಮಗಳ ಬಗ್ಗೆ ಕುಮಾರಸ್ವಾಮಿ ಧೋರಣೆ ಸರಿಯಲ್ಲ,'' ಎಂದು ದೇವೇಗೌಡರು ಹೇಳಿದರು.
''ಎಲ್ಲ ಕಾರ್ಯಕರ್ತರು, ಮುಖಂಡರಿಗೂ ನಿಗಮ-ಮಂಡಳಿಯಲ್ಲಿ ಸ್ಥಾನ ನೀಡುವುದಕ್ಕೆ ಆಗುವುದಿಲ್ಲ. ನಮ್ಮ ಪಾಲಿಗೆ ಬರುವುದು 20 ರಿಂದ 30 ಸ್ಥಾನಗಳು ಮಾತ್ರ. ಶಾಸಕರಿಗೆ ಮೊದಲು ಆದ್ಯತೆ ನೀಡಬೇಕಾಗಿದೆ. ಇದು ನಿಮ್ಮ ಪಕ್ಷ, ಮುಂದೆ ನಿಮಗೂ ಅವಕಾಶ ಒದಗಿ ಬರುತ್ತದೆ,'' ಎಂದು ಅತೃಪ್ತರಿಗೆ ಸಾಂತ್ವನ ಹೇಳಿದರು.
''ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್ನ್ನು ಕಡೆಗಣಿಸುವಂತಿಲ್ಲ, ಜತೆಗೆ 104 ಸ್ಥಾನ ಹೊಂದಿರುವ ಪ್ರತಿಪಕ್ಷವನ್ನೂ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಕುಮಾರಸ್ವಾಮಿಯೊಬ್ಬರೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ . ಕುಮಾರಸ್ವಾಮಿ ದಿನಕ್ಕೆ ಹದಿನೆಂಟು ಗಂಟೆ ಕಾಲ ಬೆಳಗಿನಿಂದ ಸಂಜೆಯವರೆಗೆ ಕೆಲಸ ಮಾಡಿದರೂ ಸಾಕಾಗುತ್ತಿಲ್ಲ. ಅವರ ಆರೋಗ್ಯದ ಕಡೆಗೂ ಗಮನ ನೀಡಬೇಕಿದೆ. ಇದರ ನಡುವೆ ಗ್ರಾಮ ವಾಸ್ತವ್ಯಕ್ಕೆ ಸಮಯ ಎಲ್ಲಿದೆ ? ಹೀಗಾಗಿ ನಾನೇ ಹೋರಾಟಕ್ಕೆ ಇಳಿಯುತ್ತೇನೆ. ಮೈತ್ರಿ ಸರಕಾರಕ್ಕೆ ಅಪಾಯ ಬಾರದಂತೆ ನೋಡಿಕೊಳ್ಳಬೇಕಿದೆ,'' ಎಂದರು.
''ಜನ ಕೈ ಹಿಡಿಯದಿದ್ದರೂ ಪರವಾಗಿಲ್ಲ ಎಂದು ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದರು. ಆದರೂ ಇದು ಅಣ್ಣ-ತಮ್ಮನ ಬಜೆಟ್, ಅಪ್ಪ-ಮಕ್ಕಳ ಬಜೆಟ್ ಎಂದು ಟೀಕಿಸಿದರು. ಇದೆಲ್ಲದರ ಬಗ್ಗೆ ಕಾರ್ಯಕರ್ತರು ಮಾತನಾಡಬೇಕು. ಕುಮಾರಸ್ವಾಮಿ ಕೊಟ್ಟ ಮಾತು ಪಾಲಿಸಿದ್ದಾರೆ. ಮಾಧ್ಯಮಗಳೂ ಅಸಹಕಾರ ತೋರುತ್ತಿವೆ. ಆದರೆ ಮಾಧ್ಯಮಗಳ ಬಗ್ಗೆ ಕುಮಾರಸ್ವಾಮಿ ಧೋರಣೆ ಸರಿಯಲ್ಲ,'' ಎಂದು ದೇವೇಗೌಡರು ಹೇಳಿದರು.
''ಎಲ್ಲ ಕಾರ್ಯಕರ್ತರು, ಮುಖಂಡರಿಗೂ ನಿಗಮ-ಮಂಡಳಿಯಲ್ಲಿ ಸ್ಥಾನ ನೀಡುವುದಕ್ಕೆ ಆಗುವುದಿಲ್ಲ. ನಮ್ಮ ಪಾಲಿಗೆ ಬರುವುದು 20 ರಿಂದ 30 ಸ್ಥಾನಗಳು ಮಾತ್ರ. ಶಾಸಕರಿಗೆ ಮೊದಲು ಆದ್ಯತೆ ನೀಡಬೇಕಾಗಿದೆ. ಇದು ನಿಮ್ಮ ಪಕ್ಷ, ಮುಂದೆ ನಿಮಗೂ ಅವಕಾಶ ಒದಗಿ ಬರುತ್ತದೆ,'' ಎಂದು ಅತೃಪ್ತರಿಗೆ ಸಾಂತ್ವನ ಹೇಳಿದರು.