ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ವಂದಿತಾ ಶರ್ಮಾ ಅವರನ್ನು ಹಾಲಿ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರ ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೇ 31ಕ್ಕೆ ಪಿ ರವಿಕುಮಾರ್ ಅವರು ನಿವೃತ್ತಿಯಾಗುತ್ತಿದ್ದು, ಅಂದಿನಿಂದ ವಂದಿತಾ ಶರ್ಮಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 1986ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ವಂದಿತಾ ಶರ್ಮಾ ಹಾಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತಾಗಿದ್ದಾರೆ. ಮುಂದಿನ ವರ್ಷ ನವೆಂಬರ್ವರೆಗೆ ವಂದಿತಾ ಶರ್ಮಾ ಅವರ ಅಧಿಕಾರವಧಿ ಇರಲಿದೆ.
4ನೇ ಮಹಿಳಾ ಮುಖ್ಯ ಕಾರ್ಯದರ್ಶಿ!
ವಂದಿತಾ ಶರ್ಮಾ ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗುತ್ತಿರುವ ನಾಲ್ಕನೇ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಮೊದಲ ಮುಖ್ಯ ಕಾರ್ಯದರ್ಶಿಯಾಗಿ ತೆರೇಸಾ ಭಟ್ಟಾಚಾರ್ಯ, ಆ ಬಳಿಕ ಮಾಲತಿ ದಾಸ್, 2017ರಲ್ಲಿ ಕೆ ರತ್ನಪ್ರಭಾ ಅವರು ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಪತಿ ಕೂಡ ಐಎಎಸ್ ಅಧಿಕಾರಿ!
ಇನ್ನು, ವಂದಿತಾ ಶರ್ಮಾ ಅವರರ ಪತಿ ಐಎಸ್ಎನ್ ಪ್ರಸಾದ್ ಕೂಡ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ಪ್ರಸಾದ್ ಅವರು ಪತ್ನಿ ವಂದಿತಾ ಶರ್ಮಾ ಕೆಳಗೆ ಕೆಲಸ ಮಾಡುವುದು ವಿಶೇಷವಾಗಿದೆ.
9 ಅಧಿಕಾರಿಗಳನ್ನು ಶಾರ್ಟ್ಲಿಸ್ಟ್ ಮಾಡಿದ್ದ ಸರ್ಕಾರ!ಪಿ ರವಿಕುಮಾರ್ ಅವರ ನಿವೃತ್ತಿಯಿಂದ ತೆರವಾಗುವ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸರ್ಕಾರ 9 ಹಿರಿಯ ಐಎಎಸ್ ಅಧಿಕಾರಿಗಳ ಹೆಸರನ್ನು ಸರ್ಕಾರ ಪರಿಗಣಿಸಿತ್ತು. ಅದರಲ್ಲಿ ವಂದಿತಾ ಶರ್ಮಾ, ಅವರ ಪತಿ ಐಎಸ್ಎನ್ ಪ್ರಸಾದ್, ರಜನೀಶ್ ಗೋಯಲ್, ಅಜಯ್ ಸೇಠ್, ಇವಿ ರಮಣ ರೆಡ್ಡಿ, ರಾಕೇಶ್ ಸಿಂಗ್, ಶಾಲಿನಿ ರಜನೀಶ್, ಜಿ ಕುಮಾರ್ ನಾಯ್ಕ್ ಹಾಗೂ ಗೌರವ್ ಗುಪ್ತಾ ಹೆಸರು ಇದ್ದವು ಎನ್ನಲಾಗಿದೆ. ಈಗ ವಂದಿತಾ ಶರ್ಮಾ ಅವರನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.
4ನೇ ಮಹಿಳಾ ಮುಖ್ಯ ಕಾರ್ಯದರ್ಶಿ!
ವಂದಿತಾ ಶರ್ಮಾ ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗುತ್ತಿರುವ ನಾಲ್ಕನೇ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಮೊದಲ ಮುಖ್ಯ ಕಾರ್ಯದರ್ಶಿಯಾಗಿ ತೆರೇಸಾ ಭಟ್ಟಾಚಾರ್ಯ, ಆ ಬಳಿಕ ಮಾಲತಿ ದಾಸ್, 2017ರಲ್ಲಿ ಕೆ ರತ್ನಪ್ರಭಾ ಅವರು ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಪತಿ ಕೂಡ ಐಎಎಸ್ ಅಧಿಕಾರಿ!
ಇನ್ನು, ವಂದಿತಾ ಶರ್ಮಾ ಅವರರ ಪತಿ ಐಎಸ್ಎನ್ ಪ್ರಸಾದ್ ಕೂಡ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ಪ್ರಸಾದ್ ಅವರು ಪತ್ನಿ ವಂದಿತಾ ಶರ್ಮಾ ಕೆಳಗೆ ಕೆಲಸ ಮಾಡುವುದು ವಿಶೇಷವಾಗಿದೆ.
9 ಅಧಿಕಾರಿಗಳನ್ನು ಶಾರ್ಟ್ಲಿಸ್ಟ್ ಮಾಡಿದ್ದ ಸರ್ಕಾರ!ಪಿ ರವಿಕುಮಾರ್ ಅವರ ನಿವೃತ್ತಿಯಿಂದ ತೆರವಾಗುವ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸರ್ಕಾರ 9 ಹಿರಿಯ ಐಎಎಸ್ ಅಧಿಕಾರಿಗಳ ಹೆಸರನ್ನು ಸರ್ಕಾರ ಪರಿಗಣಿಸಿತ್ತು. ಅದರಲ್ಲಿ ವಂದಿತಾ ಶರ್ಮಾ, ಅವರ ಪತಿ ಐಎಸ್ಎನ್ ಪ್ರಸಾದ್, ರಜನೀಶ್ ಗೋಯಲ್, ಅಜಯ್ ಸೇಠ್, ಇವಿ ರಮಣ ರೆಡ್ಡಿ, ರಾಕೇಶ್ ಸಿಂಗ್, ಶಾಲಿನಿ ರಜನೀಶ್, ಜಿ ಕುಮಾರ್ ನಾಯ್ಕ್ ಹಾಗೂ ಗೌರವ್ ಗುಪ್ತಾ ಹೆಸರು ಇದ್ದವು ಎನ್ನಲಾಗಿದೆ. ಈಗ ವಂದಿತಾ ಶರ್ಮಾ ಅವರನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.