ಆ್ಯಪ್ನಗರ

ಕಲಬುರಗಿಗೆ ಎತ್ತಂಗಡಿ: ಟ್ವೀಟರ್‌ನಲ್ಲಿ ಖುಷಿ ತೋರಿದ ಅಧಿಕಾರಿ

ಕಲಬುರಗಿ ವಿಭಾಗೀಯ ಆಯುಕ್ತರನ್ನಾಗಿ ನೇಮಕಗೊಳಿಸಿದ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಹಿರಿಯ ಐಎಎಸ್‌ ಅಧಿಕಾರಿ ಸುಬೋಧ್‌ ಯಾದವ್‌, ''ಕರ್ನಾಟಕದ ಅತಿ ಹಿಂದುಳಿದ ಪ್ರದೇಶಗಳಲ್ಲಿ ಒಂದಾದ ಕಲಬರುಗಿ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದೆ ಎಂದಿದ್ದಾರೆ.

Vijaya Karnataka Web 19 Jul 2018, 8:21 am
ಬೆಂಗಳೂರು: ಕಲಬುರಗಿ ವಿಭಾಗೀಯ ಆಯುಕ್ತರನ್ನಾಗಿ ನೇಮಕಗೊಳಿಸಿದ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಹಿರಿಯ ಐಎಎಸ್‌ ಅಧಿಕಾರಿ ಸುಬೋಧ್‌ ಯಾದವ್‌, ''ಕರ್ನಾಟಕದ ಅತಿ ಹಿಂದುಳಿದ ಪ್ರದೇಶಗಳಲ್ಲಿ ಒಂದಾದ ಕಲಬರುಗಿ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದ್ದು, ಅಪಾರ ಸೇವೆ ಮಾಡುವುದಕ್ಕೆ ಉತ್ಸುಕನಾಗಿದ್ದೇನೆ,'' ಎಂದು ಹೇಳಿದ್ದಾರೆ.
Vijaya Karnataka Web ias subhod


ಸೇವೆಗೆ ನಿಯೋಜನೆಗೊಂಡ ಕಡೆಯಲ್ಲೆಲ್ಲ ವ್ಯವಸ್ಥೆಯ ಹುಳುಕು ಪತ್ತೆ ಹಚ್ಚುವಲ್ಲಿ ನಿಸ್ಸೀಮರಾಗಿರುವ ಯಾದವ್‌ ಆ ಕಾರಣಕ್ಕಾಗಿಯೇ ಅತಿ ಹೆಚ್ಚು ಬಾರಿ ವರ್ಗಾವಣೆಗೊಂಡಿದ್ದಾರೆ. ಟ್ವೀಟ್‌ನಲ್ಲಿ ''ಜೀವನದಲ್ಲಿ ಅಚ್ಚರಿಗಳೇ ತುಂಬಿರುತ್ತದೆ ಎಂಬುದನ್ನು ಕೇಳಿದ್ದೇನೆ. ಆದರೆ ಎಲ್ಲರ ಜೀವನದಲ್ಲೂ ಇದು ಸಾಧ್ಯವಾಗುವುದಿಲ್ಲ. ಅಂಥ ಸನ್ನಿವೇಶಗಳಿಗೆ ತಮ್ಮನ್ನು ಒಡ್ಡಿಕೊಂಡವರೇ ಅದೃಷ್ಟಶಾಲಿಗಳು. ಸ್ನೇಹಿತರೇ ಅತಿ ಹಿಂದುಳಿದ ಪ್ರದೇಶÜದಲ್ಲಿ ಕೆಲಸ ಮಾಡುವ ಅವಕಾಶ ದೊರಕಿದೆ. ಆ ಭಾಗದಲ್ಲಿ ಅಪಾರ ಸೇವೆ ಮಾಡುವ ಉತ್ಸಾಹ ಹೊಂದಿದ್ದೇನೆ,'' ಎಂದು ಟ್ವೀಟ್‌ ಮಾಡಿದ್ದಾರೆ.

ಹೈದರಾಬಾದ್‌ ಕರ್ನಾಟಕ ಭಾಗದ ಜನರೂ ಯಾದವ್‌ ಅವರನ್ನು ಟ್ವೀಟರ್‌ನಲ್ಲೇ ಸ್ವಾಗತಿಸಿದ್ದು, ''ನಮ್ಮ ಭಾಗದಲ್ಲಿ ನಿಮಂಥ ಅಧಿಕಾರಿಗಳ ಅಗತ್ಯವಿದೆ,'' ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ