ಆ್ಯಪ್ನಗರ

ನಿಲ್ಲದ ವರ್ಗಾವರ್ಗಿ, ಮತ್ತೆ 6 ಐಎಎಸ್‌ ಅಧಿಕಾರಿಗಳ ವರ್ಗ

34 ಐಎಎಸ್‌ ಅಧಿಕಾರಿಗಳು, 29 ಕೆæಎಎಸ್‌ ಅಧಿಕಾರಿಗಳನ್ನು ಶುಕ್ರವಾರವಷ್ಟೇ ವರ್ಗಾವಣೆ ಮಾಡಿದ್ದ ರಾಜ್ಯ ಸರಕಾರ ಮರುದಿನ ಶನಿವಾರ ಮತ್ತೆ 6 ಐಎಎಸ್‌ ...

Vijaya Karnataka 8 Sep 2019, 5:00 am
ಬೆಂಗಳೂರು: 34 ಐಎಎಸ್‌ ಅಧಿಕಾರಿಗಳು, 29 ಕೆæಎಎಸ್‌ ಅಧಿಕಾರಿಗಳನ್ನು ಶುಕ್ರವಾರವಷ್ಟೇ ವರ್ಗಾವಣೆ ಮಾಡಿದ್ದ ರಾಜ್ಯ ಸರಕಾರ ಮರುದಿನ ಶನಿವಾರ ಮತ್ತೆ 6 ಐಎಎಸ್‌ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದೆ.
Vijaya Karnataka Web ias logo


ಈ ಪೈಕಿ ಮೊಹಮ್ಮದ್‌ ಇಕ್ರಮುಲ್ಲಾ ಷರೀಫ್‌ ಹಾಗೂ ಪಡ್ವೆ ರಾಹುಲ್‌ ತುಕಾರಾಂ ಕೇವಲ 24 ತಾಸುಗಳಲ್ಲಿ 2ನೇ ಬಾರಿಗೆ ವರ್ಗಾವಣೆಯಾಗಿದ್ದಾರೆ. ನೂತನ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳ ವರ್ಗಾವರ್ಗಿ ಮಿತಿಮೀರಿರುವ ಬಗ್ಗೆ ರಾಜಕೀಯ ವಲಯ ಮತ್ತು ನೌಕರಶಾಹಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ, ವರ್ಗಾವಣೆ ಮಾತ್ರ ನಿಂತಿಲ್ಲ.

ಜಮಖಂಡಿ ಉಪವಿಭಾಗಾಧಿಕಾರಿಯಾಗಿದ್ದ ಇಕ್ರಮುಲ್ಲಾ ಷರೀಫ್‌ ಅವರನ್ನು ಶುಕ್ರವಾರ ಕೋಲಾರ ಜಿ.ಪಂ. ಸಿಇಒ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಇದಕ್ಕೆ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಷರೀಫ್‌ ಅವರನ್ನು ಮರುದಿನವೇ ಮತ್ತೊಮ್ಮೆ ವರ್ಗಾವಣೆ ಮಾಡಲಾಗಿದ್ದು, ಬಾಗಲಕೋಟೆ ಜಿ.ಪಂ. ಸಿಇಒ ಹುದ್ದೆಗೆ ನೇಮಕ ಮಾಡಲಾಗಿದೆ. ಶುಕ್ರವಾರವಷ್ಟೇ ದಾವಣಗೆರೆ ಜಿ.ಪಂ. ಸಿಇಒ ಹುದ್ದೆಗೆ ವರ್ಗಾವಣೆಗೊಂಡಿದ್ದ ಮತ್ತೊಬ್ಬ ಐಎಎಸ್‌ ಅಧಿಕಾರಿ ಪಡ್ವೆ ರಾಹುಲ್‌ ತುಕಾರಾಂ ಅವರನ್ನು ಶನಿವಾರ ಕೋಲಾರ ಜಿ.ಪಂ. ಸಿಇಒ ಹುದ್ದೆಗೆ ವರ್ಗಾಹಿಸಲಾಗಿದೆ.

ಶನಿವಾರ ವರ್ಗಾವಣೆಗೊಂಡಿರುವ 6 ಐಎಎಸ್‌ ಅಧಿಕಾರಿಗಳು

ಮೊಹಮ್ಮದ್‌ ಇಕ್ರಮುಲ್ಲಾ ಷರೀಫ್‌ -ಸಿಇಒ, ಬಾಗಲಕೋಟೆ ಜಿಲ್ಲಾ ಪಂಚಾಯತಿ.

ಡಾ.ಕೆ.ಆನಂದ್‌ -ಸಿಇಒ, ಗದಗ ಜಿ.ಪಂ.

ಪೂವಿತಾ -ಸಿಇಒ, ಮೈಸೂರು ಜಿ.ಪಂ.

ಪಡ್ವೆ ರಾಹುಲ್‌ ತುಕಾರಾಂ -ಸಿಇಒ, ಕೋಲಾರ ಜಿ.ಪಂ.

ಜಿ.ಕುಮಾರ್‌ ಗಂಗವರ್‌ -ಸಿಇಒ, ಬೀದರ್‌ ಜಿ.ಪಂ.

ಕೆ.ಜ್ಯೋತಿ -ನಿರ್ದೇಶಕಿ, ಅಬ್ದುಲ್‌ ನಜೀರ್‌ಸಾಬ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ