ಆ್ಯಪ್ನಗರ

ಓವೈಸಿಗೆ ಮಸೀದಿ ಬೇಕಿದ್ದರೆ ಬಾಬರ್‌ನ ಪರ್ಷಿಯಾ ಸಾಮ್ರಾಜ್ಯಕ್ಕೆ ತೆರಳಲಿ: ಸಿ.ಟಿ. ರವಿ ಟಾಂಗ್‌

ಮಸೀದಿ ಬೇಕಿದ್ದರೆ ಬಾಬರ್‌ ಸಾಮ್ರಾಜ್ಯ ಪರ್ಷಿಯಾಕ್ಕೆ ಹೋಗಿ ಎಂದು ಸಿ.ಟಿ. ರವಿ ಹೇಳಿದ್ದಾರೆ. ಓವೈಸಿ ಅವರು ಟ್ವಿಟ್ಟರ್‌ನಲ್ಲಿ ’ಮೇರಾ ಮಸೀದಿ ಮುಝೆ ದೆದೋ’ ಎಂದು ಬರೆದುಕೊಂಡಿದ್ದಕ್ಕೆ ಹೀಗೆ ಪ್ರತಿಕ್ರಿಯಿಸಿದ್ದಾರೆ.

Vijaya Karnataka Web 16 Nov 2019, 6:11 pm
ಬೀದರ್‌: ಮಸೀದಿ ಬೇಕಿದ್ದರೆ ಬಾಬರ್‌ ಸಾಮ್ರಾಜ್ಯ ಪರ್ಷಿಯಾಕ್ಕೆ ಹೋಗಿ. ಬಾಬರ್ ಓರ್ವ ಆಕ್ರಮಣಕಾರಿ. ಹೀಗಾಗಿ, ಬಾಬರ್ ಎಲ್ಲಿಂದ ಬಂದಿದ್ದ ಅಲ್ಲಿಗೆ ಹೋದರೆ, ನಿನ್ನ ಮಸೀದಿ ಇದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಪ್ರಾಚ್ಯವಸ್ತು ಹಾಗೂ ಸಕ್ಕರೆ ಖಾತೆ ಸಚಿವ ಸಿ.ಟಿ. ರವಿ ಅವರು ಸಾಂಕೇತಿಕ ನುಡಿಗಳನ್ನಾಡಿದರು.
Vijaya Karnataka Web CT Ravi
ಸಚಿವ ಸಿಟಿ ರವಿ


ಬೀದರ್‌ನ ಡಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್‌ನ ಸಂಸದ, ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಅವರಿಗೆ ತಿರುಗೇ ಟು ನೀಡಿದ್ದಾರೆ. ಅಸಾದ್‌ ಉದ್ದೀನ್‌ ಓವೈಸಿ ಅವರು ಟ್ವಿಟ್ಟರ್‌ನಲ್ಲಿ ’ಮೇರಾ ಮಸೀದಿ ಮುಝೆ ದೆದೋ’ ಎಂದು ಬರೆದುಕೊಂಡಿದ್ದಕ್ಕೆ ಈ ರೀತಿಯ ಪ್ರತಿಕ್ರಿಯೆ ನೀಡಿದರು.

ಓವೈಸಿ ಅವರು ಬಾಬರ್ ಜತೆ ಗುರುತಿಸಿಕೊಳ್ಳುವುದಾದರೆ, ಬಾಬರ್ ಬಂದಲ್ಲಿಗೆ ಹೋಗಲಿ. ಬಾಬರ್ ಭಾರತದವನಲ್ಲ. ಅವನು ಪರ್ಷಿಯಾದಿಂದ ಬಂದಿದ್ದ ಅಕ್ರಮಣಕಾರಿ. ಅಲ್ಲಿಯೇ ಅವನ ಮಸೀದಿಯೂ ಇದೆ. ಸಂಸದ ಅಸಾದುದ್ದೀನ್ ಓವೈಸಿ ಅವರು ಪರ್ಷಿಯಾಗೆ ಹೋಗಿ ತಮಗೆ ಬೇಕಿರುವ ಮಸೀದಿಯನ್ನು ಅಲ್ಲಿಯೇ ಹುಡುಕಿಕೊಳ್ಳಬೇಕಾಗುತ್ತದೆ ಎಂದು ಸಚಿವ ರವಿ ಅವರು ಓವೈಸಿ ಅವರ ಟ್ವಿಟ್ಟರ್ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.

ಮಹಾ ಸರಕಾರ ನಾಲ್ಕು ತಿಂಗಳೂ ನಡೆಯಲ್ಲ:
ಮಹಾರಾಷ್ಟ್ರದ ಶಿವಸೇನೆ ಹಾಗೂ ಕಾಂಗ್ರೆಸ್, ಎನ್‌ಸಿಪಿ ಮೈತ್ರಿಯ ಸರಕಾರ ನಾಲ್ಕು ತಿಂಗಳೂ ಸಹ ನಡೆಯುವುದಿಲ್ಲ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಪ್ರಾಚ್ಯವಸ್ತು ಹಾಗೂ ಸಕ್ಕರೆ ಖಾತೆ ಸಚಿವ ಸಿ.ಟಿ. ರವಿ ಭವಿಷ್ಯ ನುಡಿದರು. ಜಾತ್ಯತೀತ ಎಂಬ ಹೆಸರಿನಲ್ಲಿ ಎರಡು ಪಕ್ಷಗಳು ಸೇರಿ ರಚಿಸಿದ ಸರಕಾರವೇ ರಾಜ್ಯದಲ್ಲಿ ಉಳಿದಿಲ್ಲ, ಅಂತಹುದರಲ್ಲಿ ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರಕಾರ ಹೇಗೆ ನಡೆಯುತ್ತದೆ ಎಂದರು.

ರಾಜಕೀಯ ಎನ್ನುವುದು ಮ್ಯಾರಾಥಾನ್ ಇದ್ದಂತೆ. ಒಂದೆಡೆ ನಿಲ್ಲುವುದು ಅಥವಾ ನಡೆಯುವುದಲ್ಲ ಎಂದರು. ಉಪ ಚುನಾವಣೆಯ 15ಕ್ಕೆ 15 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದ ಅವರು, ಈ ಕುರಿತು ಆಂತರಿಕ ಸಮೀಕ್ಷೆಯೊಂದನ್ನು ಮಾಡಿದ್ದೇವೆ. ಆಯಾ ಕ್ಷೇತ್ರಗಳ ಜನರ ನಾಡಿ ಮಿಡಿತವನ್ನು ನಾವು ಅರಿತಿದ್ದೇವೆ ಎಂದರು. ಈ ಹಿಂದೆ ಲೋಕಸಭಾ ಚುನಾವಣೆಯಲ್ಲೂ ಜನರ ನಾಡಿ ಮಿಡಿತ ಅರಿತಿದ್ದ ಕಾರಣದಿಂದಲೇ ನಾವು ಗೆದ್ದಿದ್ದೇವೆ. ಈಗಲೂ ಗೆಲ್ಲುತ್ತೇವೆ ಎಂದು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ