ಬಜೆಟ್ ಅನುಮೋದನೆಗೆ ಅಧಿವೇಶನ ಪಕ್ಷಗಳು ಬಯಸಿದರೆ ಸಹಕಾರಕ್ಕೆ ಸಿದ್ಧ : ಸ್ಪೀಕರ್
ಮೈತ್ರಿ ಸರಕಾರ ನಿರ್ಗಮನದಿಂದಾಗಿ ಬಜೆಟ್ ಅನುಮೋದನೆ ಬಾಕಿ ಉಳಿದು ಆಡಳಿತಾತ್ಮಕ ಬಿಕ್ಕಟ್ಟು ಸೃಷ್ಟಿಯಾಗುತ್ತಿದ್ದು, ರಾಜಕೀಯ ಪಕ್ಷಗಳು ಪ್ರಸಕ್ತ ಸಾಲಿನ ಬಜೆಟ್ ಅನುಮೋದನೆಗೆ ಮುಂದಾದರೆ ಅಧಿವೇಶನ ಕರೆದು ಸಹಕರಿಸಲು ಸಿದ್ಧವಿರುವುದಾಗಿ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಹೇಳಿದ್ದಾರೆ.
Vijaya Karnataka 26 Jul 2019, 5:00 am
ಬೆಂಗಳೂರು : ಮೈತ್ರಿ ಸರಕಾರ ನಿರ್ಗಮನದಿಂದಾಗಿ ಬಜೆಟ್ ಅನುಮೋದನೆ ಬಾಕಿ ಉಳಿದು ಆಡಳಿತಾತ್ಮಕ ಬಿಕ್ಕಟ್ಟು ಸೃಷ್ಟಿಯಾಗುತ್ತಿದ್ದು, ರಾಜಕೀಯ ಪಕ್ಷಗಳು ಪ್ರಸಕ್ತ ಸಾಲಿನ ಬಜೆಟ್ ಅನುಮೋದನೆಗೆ ಮುಂದಾದರೆ ಅಧಿವೇಶನ ಕರೆದು ಸಹಕರಿಸಲು ಸಿದ್ಧವಿರುವುದಾಗಿ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಹೇಳಿದ್ದಾರೆ.
''ಪ್ರಸಕ್ತ ಆರ್ಥಿಕ ಸಾಲಿನ ಬಜೆಟ್ ಆಧರಿಸಿ ಪಡೆಯಲಾಗಿದ್ದ 4 ತಿಂಗಳ ಲೇಖಾನುದಾನ ಅವಧಿ ಈ ತಿಂಗಳ 31ಕ್ಕೆ ಕೊನೆಗೊಳ್ಳುತ್ತಿದ್ದು, ನಂತರದ ದಿನಗಳಿಗೆ ಬಜೆಟ್ ಅನುಮೋದನೆ ಆಗದಿದ್ದರೆ ಆಡಳಿತ ಸ್ಥಗಿತಗೊಳ್ಳಲಿದೆ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಬಾರದು. ಅದಕ್ಕಾಗಿ ರಾಜಕಾರಣ ಬದಿಗಿರಿಸಿ ಆಡಳಿತಾತ್ಮಕ ವಿಚಾರಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಆಸಕ್ತಿ ವಹಿಸಿ ಮುಂದೆ ಬಂದರೆ ಅಧಿವೇಶನ ಕರೆದು ಬಜೆಟ್ ಅಥವಾ ಪೂರಕ ಅಂದಾಜಿಗೆ ಒಪ್ಪಿಗೆ ಕೊಡಿಸಲು ನಾನು ಸಹಕರಿಸುತ್ತೇನೆ'' ಎಂದು ತಿಳಿಸಿದರು.
''ಇನ್ನು ಒಂದು ವಾರವಷ್ಟೇ ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಮುಂದಾಗದಿದ್ದರೆ, ಪ್ರಸಕ್ತ ಸಾಲಿನ ರಾಜ್ಯ ಮುಂಗಡಪತ್ರಕ್ಕೆ ಸಂಸತ್ತಿನ ಅನುಮೋದನೆ ಪಡೆಯುವುದು ಅನಿವಾರ್ಯವಾಗಲಿದೆ'' ಎಂದರು.
''ಪ್ರಸಕ್ತ ಆರ್ಥಿಕ ಸಾಲಿನ ಬಜೆಟ್ ಆಧರಿಸಿ ಪಡೆಯಲಾಗಿದ್ದ 4 ತಿಂಗಳ ಲೇಖಾನುದಾನ ಅವಧಿ ಈ ತಿಂಗಳ 31ಕ್ಕೆ ಕೊನೆಗೊಳ್ಳುತ್ತಿದ್ದು, ನಂತರದ ದಿನಗಳಿಗೆ ಬಜೆಟ್ ಅನುಮೋದನೆ ಆಗದಿದ್ದರೆ ಆಡಳಿತ ಸ್ಥಗಿತಗೊಳ್ಳಲಿದೆ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಬಾರದು. ಅದಕ್ಕಾಗಿ ರಾಜಕಾರಣ ಬದಿಗಿರಿಸಿ ಆಡಳಿತಾತ್ಮಕ ವಿಚಾರಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಆಸಕ್ತಿ ವಹಿಸಿ ಮುಂದೆ ಬಂದರೆ ಅಧಿವೇಶನ ಕರೆದು ಬಜೆಟ್ ಅಥವಾ ಪೂರಕ ಅಂದಾಜಿಗೆ ಒಪ್ಪಿಗೆ ಕೊಡಿಸಲು ನಾನು ಸಹಕರಿಸುತ್ತೇನೆ'' ಎಂದು ತಿಳಿಸಿದರು.
''ಇನ್ನು ಒಂದು ವಾರವಷ್ಟೇ ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಮುಂದಾಗದಿದ್ದರೆ, ಪ್ರಸಕ್ತ ಸಾಲಿನ ರಾಜ್ಯ ಮುಂಗಡಪತ್ರಕ್ಕೆ ಸಂಸತ್ತಿನ ಅನುಮೋದನೆ ಪಡೆಯುವುದು ಅನಿವಾರ್ಯವಾಗಲಿದೆ'' ಎಂದರು.