ಬೆಂಗಳೂರು: ನೂರಕ್ಕೂ ಹೆಚ್ಚು ಬೆಡ್ಗಳು ಇರುವ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಾಗಿದೆ. ಸರ್ಕಾರಕ್ಕೆ ಬೆಡ್ ಕೊಡಲು ಕಣ್ಣಾಮುಚ್ಚಾಲೆ ಬಿಟ್ಟು ಕೂಡಲೇ ಬೆಡ್ ಕೊಡಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ. ಎರಡು ದಿನಗಳಲ್ಲಿ ಬೆಡ್ಗಳನ್ನು ನೀಡದಿದ್ದರೆ ಒಪಿಡಿ ಬಂದ್ ಮಾಡಲು ಸೂಚನೆ ನೀಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಖಾಸಗಿ ಆಸ್ಪತ್ರೆಗಳು ಬೆಡ್ ಪಡೆಯುವ ಕುರಿತು ನೂಡಲ್ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಆಸ್ಪತ್ರೆಗೆ ಭೇಟಿ ಮಾಡಿ ಬೆಡ್ಗಳ ಪರಿಸ್ಥಿತಿ ಪರಿಶೀಲನೆ ಮಾಡಬೇಕು. ಬೆಡ್ಗಳ ಸಂಖ್ಯೆ ಕುರಿತಾಗಿ ಖಾಸಗಿ ಆಸ್ಪತ್ರೆಗಳ ಸುಳ್ಳು ಹೇಳುತ್ತಾರಾ ಎಂದು ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಇನ್ಮುಂದೆ ಬೆಡ್ ಇಲ್ಲ ಎಂದು ಸೋಂಕಿತರನ್ನು ರಸ್ತೆಯಲ್ಲಿ ನಿಲ್ಲಿಸಬಾರದು. ಕೊಠಡಿ ಒದಗಿಸಲು ವ್ಯವಸ್ಥೆ ಮಾಡಲೇಬೇಕು ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಆರೋಪದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಹೆಚ್ಚು ವಸೂಲಿ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ. ಕೋವಿಡ್ ಸೋಂಕಿತರು ಅಡ್ಮಿಟ್ ಆಗಿ ಡಿಸ್ಚಾರ್ಜ್ ಆದರೂ ಅದೇ ಹೆಸರಿನಲ್ಲಿ ಬೆಡ್ ಕಾಯ್ದಿರಿಸಿ ಬೇರೆಯವರಿಗೆ ಬೆಡ್ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಇದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹತ್ತು ದಿನದ ನಂತರ ಸೋಂಕಿತರ ಹೆಸರನ್ನು ಬಿಬಿಎಂಪಿ ವೆಬ್ ಸೈಟ್ ರಿಮೂವ್ ಮಾಡುತ್ತೇವೆ. ಆಸ್ಪತ್ರೆಯಿಂದ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಮುಂದುವರಿಯಬೇಕು ಎಂದು ದಾಖಲೆ ಕೊಟ್ಟರೆ ಚಿಕಿತ್ಸೆ ಮುಂದುವರಿಸಲು ಅವಕಾಶ ನೀಡಲಾಗುವುದು ಎಂದರು.
ಬೆಡ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳ ಬದಲಾವಣೆ ಮಾಡಿದ್ದೇವೆ. ತುಷಾರ್ ಗಿರಿ ಅವರಿಗೆ ಚೀಫ್ ನೂಡಲ್ ಆಫೀಸರ್ ಆಗಿ ನೇಮಕ ಮಾಡಲಾಗುವುದು. ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರನ್ನು ಖಾಸಗಿ ಸರಕಾರಿ ಬೆಡ್ ಮ್ಯಾನೇಜ್ಮೆಂಟ್ ಉಸ್ತುವಾರಿಯಾಗಿ ನೇಮಕ ಮಾಡಲಾಗುವುದು.
ಇನ್ನು ಮುಂದೆ ಪಾರದರ್ಶಕವಾಗಿ ಬೆಡ್ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಇಂದು ನಡೆದ ಸಭೆಗೆ ಬರದ ಆಸ್ಪತ್ರೆ ವಿರುದ್ಧದ ನೋಟಿಸ್ ಜಾರಿ ಮಾಡಲಾಗುತ್ತದೆ. ಕೆಲವು ಆಸ್ಪತ್ರೆಗಳು ಬೆಡ್ ನೀಡುತ್ತಿಲ್ಲ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಆರೋಪದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಹೆಚ್ಚು ವಸೂಲಿ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ. ಕೋವಿಡ್ ಸೋಂಕಿತರು ಅಡ್ಮಿಟ್ ಆಗಿ ಡಿಸ್ಚಾರ್ಜ್ ಆದರೂ ಅದೇ ಹೆಸರಿನಲ್ಲಿ ಬೆಡ್ ಕಾಯ್ದಿರಿಸಿ ಬೇರೆಯವರಿಗೆ ಬೆಡ್ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಇದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹತ್ತು ದಿನದ ನಂತರ ಸೋಂಕಿತರ ಹೆಸರನ್ನು ಬಿಬಿಎಂಪಿ ವೆಬ್ ಸೈಟ್ ರಿಮೂವ್ ಮಾಡುತ್ತೇವೆ. ಆಸ್ಪತ್ರೆಯಿಂದ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಮುಂದುವರಿಯಬೇಕು ಎಂದು ದಾಖಲೆ ಕೊಟ್ಟರೆ ಚಿಕಿತ್ಸೆ ಮುಂದುವರಿಸಲು ಅವಕಾಶ ನೀಡಲಾಗುವುದು ಎಂದರು.
ಬೆಡ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳ ಬದಲಾವಣೆ ಮಾಡಿದ್ದೇವೆ. ತುಷಾರ್ ಗಿರಿ ಅವರಿಗೆ ಚೀಫ್ ನೂಡಲ್ ಆಫೀಸರ್ ಆಗಿ ನೇಮಕ ಮಾಡಲಾಗುವುದು. ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರನ್ನು ಖಾಸಗಿ ಸರಕಾರಿ ಬೆಡ್ ಮ್ಯಾನೇಜ್ಮೆಂಟ್ ಉಸ್ತುವಾರಿಯಾಗಿ ನೇಮಕ ಮಾಡಲಾಗುವುದು.
ಇನ್ನು ಮುಂದೆ ಪಾರದರ್ಶಕವಾಗಿ ಬೆಡ್ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಇಂದು ನಡೆದ ಸಭೆಗೆ ಬರದ ಆಸ್ಪತ್ರೆ ವಿರುದ್ಧದ ನೋಟಿಸ್ ಜಾರಿ ಮಾಡಲಾಗುತ್ತದೆ. ಕೆಲವು ಆಸ್ಪತ್ರೆಗಳು ಬೆಡ್ ನೀಡುತ್ತಿಲ್ಲ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.