ಆ್ಯಪ್ನಗರ

ರಾಜೀನಾಮೆ ಅಂಗೀಕಾರವಾದಲ್ಲಿ ರಾಜಕೀಯ ನಿವೃತ್ತಿ: ಎಂಟಿಬಿ ನಾಗರಾಜ್‌

ಹಲವಾರು ಬಾರಿ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ. ಆದರೂ ಸೂಕ್ತ ಸ್ಪಂದನೆ ನೀಡಿಲ್ಲ. ರಾಜ್ಯದ ಹಲವರು ಶಾಸಕರಿಂದ ಮನವಿಗಳು ಬಂದಿದೆ. ಈ ಬಗ್ಗೆ ನಿಗದಿಯಾಗದ ಆಯವ್ಯಯದ ಬಗ್ಗೆ ಮುಖ್ಯಮಂತ್ರಿ ಉತ್ತರಿಸಬೇಕು ಎಂದು ನಾಗರಾಜ್‌ ಹೇಳಿದರು.

Vijaya Karnataka Web 12 Jul 2019, 5:46 pm
ಹೊಸಕೋಟೆ: ಅಧಿಕಾರ ಇಟ್ಟುಕೊಂಡು ಅಭಿವೃದ್ಧಿ ಮಾಡಲಾಗದೆ ಇರುವಾಗ ಪದವಿ ಏಕೆ ಬೇಕು. 70 ಜನ ಶಾಸಕರಿರುವ ನಮ್ಮ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬೇಕು. ಇದನ್ನು ಅಂದೇ ಸಿದ್ದರಾಮಯ್ಯನವರಿಗೆ ತಿಳಿಸಿದ್ದೆ ಎಂದು ರಾಜೀನಾಮೆ ನೀಡಿರುವ ರಾಜೀನಾಮೆ ನೀಡಿರುವ ಹೊಸಕೋಟೆಯ ಶಾಸಕ, ವಸತಿ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದ್ದಾರೆ.
Vijaya Karnataka Web ಎಂಟಿಬಿ ನಾಗರಾಜ್‌
ಎಂಟಿಬಿ ನಾಗರಾಜ್‌


ನಗರದ ಕುವೆಂಪು ನಗರದ ರಸ್ತೆ ಕಾಮಗಾರಿ ಪರಿಶೀಲನೆ ನಂತರ ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.

ಜೆಡಿಎಸ್ ಪಕ್ಷ ಈಗಾಗಲೇ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ, ಇಂತಹ ಪರಿಸ್ಥಿತಿಯಲ್ಲ ಸರಕಾರದ ಭಾಗವಾಗಿರುವುದು ಸರಿಯಲ್ಲ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿ ನಮ್ಮ ಕ್ಷೇತ್ರಕ್ಕೆ ಕಡಿಮೆ ಅನುದಾನ ನೀಡಲಾಗಿದೆ ಎಂದು ದೂರಿದರು.

ಜನರಿಗೆ ಹೇಗೆ ಉತ್ತರ ನೀಡಲಿ. ವಸತಿ ಇಲಾಖೆಗೆ 400 ಕೋಟಿ ಅನುದಾನ ನೀಡಲು ಮನವಿ ಮಾಡಿದ್ದೆ. ಲಕ್ಷಾಂತರ ಬಡವರು ಸೂರಿಲ್ಲದೆ ಕಷ್ಟದಲ್ಲಿ ಇದ್ದಾರೆ. 15 ಲಕ್ಷ ಮನೆ ನಿರ್ಮಾಣ ಮಾಡುವುದಾಗಿ ಆಯ ವ್ಯಯದಲ್ಲಿ ತಿಳಿಸಿದ ಮುಖ್ಯಮಂತ್ರಿ ಇಂದಿಗೂ ಇಲಾಖೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ನನ್ನ ಶಾಸಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಜು.17ರಂದು ಸಂಜೆ 4 ಗಂಟೆಗೆ ನನಗೆ ಹಾಗೂ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ಗೆ ಸಮಯ ಕೊಟ್ಟಿದ್ದಾರೆ. ಅಂದು ಸ್ಪೀಕರ್‌ಗೆ ನಮ್ಮ ಉತ್ತರ ಸಮರ್ಪಕವಾಗಿ ನೀಡುತ್ತೇವೆ. ಸ್ಪೀಕರ್ ಯಾವ ನಿರ್ಣಯ ತೆಗೆದುಕೊಳ್ಳುತ್ತಾರೋ ಕಾದು ನೋಡುತ್ತೇವೆ. ರಾಜಕೀಯವಾಗಿ ನಿವೃತ್ತಿ ಪಡೆಯುವ ಉದ್ದೇಶವಿದೆ ಎಂದು ನಾಗರಾಜ್‌ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ