ಆ್ಯಪ್ನಗರ

ಸಿದ್ದರಾಮಯ್ಯ ಮನೆಗೆ ಹೋದ ಮೇಲೆಯೇ ಅಚ್ಛೇ ದಿನ್‌ ಬರೋದು: ಬಿಎಸ್‌ವೈ

ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಗುಡುಗಿದ ಯಡಿಯೂರಪ್ಪ

Vijaya Karnataka Web 12 Dec 2017, 10:44 pm
ರಾಯಚೂರು: ನಾರಾಯಣಪುರ ಜಲಾಶಯದಿಂದ ನೀರು ಹರಿಸದೆ ರೈತರಿಗೆ ಅನ್ಯಾಯ ಮಾಡಲಾಗಿದೆ. ಕನಿಷ್ಠ 15 ದಿನ ನೀರನ್ನ ಕೊಟ್ಟು ರೈತರ ಬೆಳೆ ಉಳಿಸಬೇಕು. ಹೈದ್ರಾಬಾದ್ ಕರ್ನಾಟಕ ಕ್ಕೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.
Vijaya Karnataka Web if siddaramaiah goes then we will have ache din bsy
ಸಿದ್ದರಾಮಯ್ಯ ಮನೆಗೆ ಹೋದ ಮೇಲೆಯೇ ಅಚ್ಛೇ ದಿನ್‌ ಬರೋದು: ಬಿಎಸ್‌ವೈ


ದೇವದುರ್ಗದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ ಭಾಷಣ ಮಾಡಿದರು.

ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಿ ಸಿದ್ದರಾಮಯ್ಯರನ್ನ ಮನೆಗೆ ಕಳುಹಿಸಿದ ಮೇಲೆ ಅಚ್ಚೆ ದಿನ್ ಬರುತ್ತೆ. ಗುಜರಾತಿನ ಫಲಿತಾಂಶದಲ್ಲಿ ಗೊಂದಲ ಬೇಡ. ಕರ್ನಾಟಕದಲ್ಲೂ ನಾವೇ ಗೆಲ್ಲುತ್ತೇವೆ. ನನ್ನ ಸಂಕಲ್ಪ ರಾಜ್ಯವನ್ನು ಅಭಿವೃದ್ದಿ ಪಥದಲ್ಲಿ ತೆಗೆದುಕೊಂಡು ಹೋಗುವುದು ಎಂದು ಅವರು ಹೇಳಿದರು.

ಕೇಂದ್ರದಿಂದ ಒಂದು ಲಕ್ಷ ಕೋಟಿ ಹಣ ತಂದು ಕೃಷ್ಣ ಕೊಳ್ಳದ ಯೋಜನೆ ಮುಗಿಸುತ್ತೇವೆ. ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಆರಂಭಿಸಿದಲ್ಲ, ಕೇಂದ್ರ ಸರ್ಕಾರದ ಕಾಪಿ ಅದು. ದವಸ ಧಾನ್ಯ ಕೊಳೆತು ಹೋಗುತ್ತಿದೆ. ಇಂಥ ಅನ್ನಭಾಗ್ಯ ನೀಡಲಾಗುತ್ತಿದೆ ಎಂದು ಯಡಿಯೂರಪ್ಪ ಕಿಡಿಕಾರಿದರು.

ರಾಜ್ಯದಲ್ಲಿ ಸರ್ಕಾರ ಬದುಕಿದೆಯೇ. ಪರೇಶ್‌ ಹತ್ಯೆ ಸೇರಿ, ಇದುವರೆಗೆ 20 ಹಿಂದೂ ಯುವಕರ ಕೊಲೆಯಾಗಿದೆ. ಸಿಎಂ ಹೇಳಬೇಕು ಕೊಲೆ ಸುಲಿಗೆ ನಿರಂತರವಾಗಿ ಯಾಕೆ ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಬಿಎಸ್‌ವೈ ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ