Please enable javascript.Karnataka High Court,ಕಂದಾಯ ಅಧಿಕಾರಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟರೆ ದೇಶಕ್ಕೆ ಸೈನ್ಯದ ಅವಶ್ಯಕತೆಯೇ ಇರುವುದಿಲ್ಲ - ಹೈಕೋರ್ಟ್‌ ತರಾಟೆ - if the revenue officers are sent to pakistan, the country will not need the army - karnataka high court judge - Vijay Karnataka

ಕಂದಾಯ ಅಧಿಕಾರಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟರೆ ದೇಶಕ್ಕೆ ಸೈನ್ಯದ ಅವಶ್ಯಕತೆಯೇ ಇರುವುದಿಲ್ಲ - ಹೈಕೋರ್ಟ್‌ ತರಾಟೆ

Vijaya Karnataka 3 Mar 2020, 9:46 pm
Subscribe

"ನಮ್ಮ ಕಂದಾಯ ಅಧಿಕಾರಿಗಳು ದಾಖಲೆಗಳನ್ನು ಹೇಗೆ ಬೇಕಾದರೂ ಹಾಗೆ ಮಗ್ಗಲು ಬದಲಿಸುವಂತೆ ಮಾಡಬಲ್ಲ ನಿಪುಣರು. ಹಾಗಾಗಿ ಅವರನ್ನು ಪಾಕಿಸ್ತಾನಕ್ಕೆ ಕಳಿಸಿದರೆ ಏನು ಬೇಕಾದರೂ ಮಾಡಿಕೊಂಡು ಬರುತ್ತಾರೆ," ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

High Court
ಬೆಂಗಳೂರು: ''ನಮ್ಮ ಕಂದಾಯ ಅಧಿಕಾರಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟರೆ ಸಾಕು, ದೇಶವನ್ನು ರಕ್ಷಿಸಲು ಸೈನ್ಯದ ಅವಶ್ಯಕತೆಯೇ ಇರುವುದಿಲ್ಲ," ಎಂದು ಹೈಕೋರ್ಟ್‌ ಕಂದಾಯ ಅಧಿಕಾರಿಗಳನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ಕಂದಾಯ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಂದಾಯ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿತು. ''ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ ನಮ್ಮ ಆಡಳಿತ ವ್ಯವಸ್ಥೆ ಇನ್ನೂ ಸರಿ ಹೋಗಿಲ್ಲ," ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಹೇಳಿದರು.

"ನಮ್ಮ ಕಂದಾಯ ಅಧಿಕಾರಿಗಳು ದಾಖಲೆಗಳನ್ನು ಹೇಗೆ ಬೇಕಾದರೂ ಹಾಗೆ ಮಗ್ಗಲು ಬದಲಿಸುವಂತೆ ಮಾಡಬಲ್ಲ ನಿಪುಣರು. ಹಾಗಾಗಿ ಅವರನ್ನು ಪಾಕಿಸ್ತಾನಕ್ಕೆ ಕಳಿಸಿದರೆ ಏನು ಬೇಕಾದರೂ ಮಾಡಿಕೊಂಡು ಬರುತ್ತಾರೆ," ಎಂದರು.

''ಹದಗೆಟ್ಟಿರುವ ಈ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲು ವಕೀಲರು, ಮಂತ್ರಿಗಳು ಮತ್ತು ನ್ಯಾಯಾಂಗ ಅಧಿಕಾರಿಗಳೂ ಸೇರಿದಂತೆ ಎಲ್ಲರೂ ಪಣ ತೊಟ್ಟು ಕೆಲಸ ಮಾಡಬೇಕು," ಎಂದು ನ್ಯಾಯಮೂರ್ತಿಗಳು ಹೇಳಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ