ಆ್ಯಪ್ನಗರ

ಐಐಎಂಬಿಯಲ್ಲಿ ಚಿನ್ನದ ಪದಕ ಪಡೆದ ಬೆಂಗಳೂರಿನ ಉದ್ಯಮಿ

ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ...

Vijaya Karnataka 23 Mar 2019, 5:00 am
ಬೆಂಗಳೂರು: ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೆಂಗಳೂರು (ಐಐಎಂಬಿ) ಸಂಸ್ಥೆಯ ಈ ಬಾರಿಯ ಘಟಿಕೋತ್ಸವದಲ್ಲಿ ವಿದ್ಯಾರ್ಥಿಯಾಗಿ ಕೋರ್ಸ್‌ ಕೈಗೆತ್ತಿಕೊಂಡಿದ್ದ ಉದ್ಯಮಿ, ಅಧಿಕಾರಿಗಳಿಬ್ಬರು ಚಿನ್ನದ ಪದಕ ಪಡೆದುಕೊಂಡಿದ್ದು, ಬೆಂಗಳೂರಿನ ಉದ್ಯಮಿ ಹರಿರಾಮ್‌ ಟಿ.ರಮೇಶ್‌ ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಧನೆ ತೋರಿ ಎಲ್ಲ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Vijaya Karnataka Web 2203-2-2-00KK (1)


ಐಐಎಂಬಿಯಲ್ಲಿ ಶುಕ್ರವಾರ ನಡೆದ 44 ನೇ ಘಟಿಕೋತ್ಸವದಲ್ಲಿ ನಿವೃತ್ತ ಬ್ಯಾಂಕ್‌ ಅಧಿಕಾರಿ ಅರುಂಧತಿ ಭಟ್ಟಾಚಾರ್ಯ ಒಟ್ಟು 625 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಸಂಸ್ಥೆಯ ಮಂಡಳಿ ಮುಖ್ಯಸ್ಥ ಡಾ.ದೇವಿಪ್ರಸಾದ್‌ ಶೆಟ್ಟಿ, ನಿರ್ದೇಶಕ ರಘುರಾಮ್‌ ಹಾಜರಿದ್ದರು.

ಪಿಜಿಪಿ ಕೋರ್ಸ್‌ನಲ್ಲಿ ಆಯುಷ್‌ ಗುಪ್ತ ಪ್ರಥಮ ರಾರ‍ಯಂಕ್‌, ಅರ್ಜುನ್‌ ಸಿಂಗ್‌ ಎರಡನೇ ರಾರ‍ಯಂಕ್‌, ಇಪಿಜಿಪಿ ಕೋರ್ಸ್‌ನಲ್ಲಿ ಇಂದ್ರನೀಲ್‌ ಪಾಲ್‌ ಪ್ರಥಮ ರಾರ‍ಯಂಕ್‌, ಪಿಜಿಪಿ ಕೋರ್ಸ್‌ನಲ್ಲಿ ವೈಭವ್‌ ಸಿಂಗ್‌ 'ಬೆಸ್ಟ್‌ ಆಲ್‌ ರೌಂಡ್‌ ಪರ್ಫಾಮೆನ್ಸ್‌', ಪಿಜಿಪಿಇಎಂ ಕೋರ್ಸ್‌ನಲ್ಲಿ ಪಿ.ಸುಕನ್ಯ ಪ್ರಥಮ ರಾರ‍ಯಂಕ್‌ ಗಳಿಸುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ.

ಉದ್ಯಮಿ ವಿದ್ಯಾರ್ಥಿಗೆ ಚಿನ್ನ

ಬೆಂಗಳೂರಿನ ಉದ್ಯಮಿ ಹರಿರಾಮ್‌ ಟಿ.ರಮೇಶ್‌ ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಧನೆ ತೋರಿದ್ದಕ್ಕಾಗಿ ಚಿನ್ನದ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.

ಜೆ.ಪಿ.ನಗರದಲ್ಲಿ ಉದ್ಯಮ ಹೊಂದಿರುವ ಅವರು 2 ವರ್ಷದ ಎಂಟರ್‌ಪ್ರೈಸ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಪೂರ್ಣಗೊಳಿಸಿದ್ದಾರೆ. ಕೋರ್ಸ್‌ನ ಜತೆಗೆ ಕ್ರೀಡೆಯಲ್ಲೂ ಸಾಧನೆ ತೋರಿದ್ದಕ್ಕಾಗಿ ಅವರಿಗೆ 'ಬೆಸ್ಟ್‌ ಆಲ್‌ ರೌಂಡ್‌ ಪರ್ಫಾಮೆನ್ಸ್‌' ಚಿನ್ನದ ಪದಕ ಪಡೆದಿದ್ದಾರೆ.

ತಮಿಳುನಾಡು ಮೂಲದ 33 ವರ್ಷದ ಹರಿರಾಮ್‌ ಎಂಜಿನಿಯರಿಂಗ್‌ ಪೂರ್ಣಗೊಳಿಸಿ ಟಿಸಿಎಸ್‌ ಸಂಸ್ಥೆ ಸೇರಿದ್ದರು. ಆ ಕೆಲಸ ಬಿಟ್ಟು ಹಾರ್ಡ್‌ವೇರ್‌ ಹಾಗೂ ಸಾಫ್ಟ್‌ವೇರ್‌ ಉದ್ಯಮ ಆರಂಭಿಸಿದ್ದರು. ಜತೆಗೆ ಐಐಎಂಬಿಯಲ್ಲಿ ವ್ಯಾಸಂಗವನ್ನೂ ಆರಂಭಿಸಿದರು. ''ಉದ್ಯಮವನ್ನು ಮುಂದುವರಿಸುವುದರ ಜತೆಗೆ ಅಗ್ರಿಟೆಕ್‌ ಕ್ಷೇತ್ರದಲ್ಲೂ ಉದ್ಯಮ ಆರಂಭಿಸುವ ಗುರಿ ಇದೆ,'' ಎಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಯಾದ ರೈಲ್ವೆ ಅಧಿಕಾರಿ

ರೈಲ್ವೆ ಸಚಿವಾಲಯದಲ್ಲಿ ಅಧಿಕಾರಿಯಾಗಿರುವ ಉತ್ತರಾಖಂಡ್‌ನ ಕುಶಾಗ್ರ ಮಿತ್ತಲ್‌ ಪಬ್ಲಿಕ್‌ ಪಾಲಿಸಿ ಮತ್ತು ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮುಗಿಸಿದ್ದು, 'ಬೆಸ್ಟ್‌ ಆಲ್‌ ರೌಂಡ್‌ ಪರ್ಫಾಮೆನ್ಸ್‌' ಚಿನ್ನದ ಪದಕ ಪಡೆದಿದ್ದಾರೆ.

ಸಚಿವಾಲಯದಲ್ಲಿ 8 ವರ್ಷ ಸೇವೆ ಸಲ್ಲಿಸಿದ ಬಳಿಕ ಅವರು ಮತ್ತೆ ವ್ಯಾಸಂಗ ಮಾಡುವ ಅವಕಾಶ ಪಡೆದು ವಿದ್ಯಾರ್ಥಿಯಾಗಿದ್ದರು.

''ಮೂಲಸೌಕರ್ಯ ಉತ್ತಮವಾಗಿದ್ದರೂ ಯೋಜನೆ ರೂಪಿಸುವುದರಲ್ಲಿ ನಾವು ಎಡವುತ್ತಿದ್ದೇವೆ. ಯಾವುದೇ ಕ್ರಮ ಕೈಗೊಳ್ಳುವಾಗ ಅದರ ಪರಿಣಾಮದ ಕುರಿತು ಚಿಂತಿಸಬೇಕು. ಕೋರ್ಸ್‌ನಿಂದಾಗಿ ನೀತಿ ರೂಪಿಸುವ ಕುರಿತು ಹೆಚ್ಚು ಪರಿಣತಿ ಸಿಕ್ಕಿದೆ. ಮುಂದೆ ರೈಲ್ವೆ ಸಚಿವಾಲಯದಲ್ಲಿ ನೀತಿ ರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ,'' ಎಂದು ಅವರು ತಿಳಿಸಿದ್ದಾರೆ.

ಐಆರ್‌ಎಸ್‌ಗೆ ರಾಜೀನಾಮೆ

ಮುಂಬೈಯ ಕ್ಸೆಲೆನ್‌ ಆಗ್ವೈರ್‌ ಕೆಲ ವರ್ಷಗಳ ಹಿಂದೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಆರ್‌ಎಸ್‌ ಆಗಿ ಆಯ್ಕೆಯಾಗಿದ್ದರು. ನಂತರ ಹುದ್ದೆ ತೊರೆದು ಐಐಎಂಬಿಯಲ್ಲಿ ಮ್ಯಾನೇಜ್‌ಮೆಂಟ್‌ನ ಗ್ರಾಜ್ಯುಯೇಟ್‌ ಕೋರ್ಸ್‌ ಪೂರ್ಣಗೊಳಿಸಿದ್ದಾರೆ. 'ಬೆಸ್ಟ್‌ ಆಲ್‌ ರೌಂಡ್‌ ಪರ್ಫಾಮೆನ್ಸ್‌' ಚಿನ್ನದ ಪದಕ ಪಡೆದಿದ್ದಾರೆ.

''ತಂದೆ ಗೋಡಂಬಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಭಾರತೀಯ ಮಾರುಕಟ್ಟೆಯಲ್ಲಿ ಉತ್ಪಾದಕರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ಬದಲಾವಣೆಯನ್ನು ತರುವ ಉದ್ದೇಶ ಹೊಂದಿದ್ದೇನೆ. ಜತೆಗೆ ಕೃಷಿಗೆ ಸಂಬಂಧಿಸಿದ ಉದ್ಯಮವನ್ನೂ ಆರಂಭಿಸುತ್ತೇನೆ,'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ