ಆ್ಯಪ್ನಗರ

ಐಎಂಎ ಪ್ರಕರಣ, ನ್ಯಾಯಾಲಯದಲ್ಲಿವಿಚಾರಣೆ ಆರಂಭ

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿಸಿಟಿ ಸಿವಿಲ್‌ ಪ್ರಧಾನ ನ್ಯಾಯಾಲಯದಲ್ಲಿಬುಧವಾರದಿಂದ ವಿಚಾರಣೆ ಆರಂಭವಾಯಿತು.

Vijaya Karnataka 26 Sep 2019, 5:00 am
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿಸಿಟಿ ಸಿವಿಲ್‌ ಪ್ರಧಾನ ನ್ಯಾಯಾಲಯದಲ್ಲಿಬುಧವಾರದಿಂದ ವಿಚಾರಣೆ ಆರಂಭವಾಯಿತು.
Vijaya Karnataka Web ima issue court trials start
ಐಎಂಎ ಪ್ರಕರಣ, ನ್ಯಾಯಾಲಯದಲ್ಲಿವಿಚಾರಣೆ ಆರಂಭ


ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಸೇರಿದಂತೆ 12 ಆರೋಪಿಗಳನ್ನು ಪರಪ್ಪನ ಅಗ್ರಹಾರ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆತರಲಾಯಿತು.

ಇದೇ ವೇಳೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ವಿಜಯ್‌ ಶಂಕರ್‌, ಉಪವಿಭಾಗಾಧಿಕಾರಿಯಾಗಿದ್ದ ಎಲ್‌.ಸಿ ನಾಗರಾಜ, ಬಿಡಿಎ ಕಾರ್ಯ ನಿರ್ವಾಹಕ ಎಂಜಿನಿಯರ್‌ ಆಗಿದ್ದ ಪಿ.ಡಿ ಕುಮಾರ್‌, ಗ್ರಾಮಲೆಕ್ಕಿಗ ಮಂಜುನಾಥ ಸೇರಿದಂತೆ ಜಾಮೀನು ಪಡೆದಿರುವ ಆರೋಪಿಗಳು ಹಾಜರಾದರು. ವಿಚಾರಣೆಯನ್ನು ನ್ಯಾಯಾಲಯ ಅ.3ಕ್ಕೆ ಮುಂದೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ