ಆ್ಯಪ್ನಗರ

ಜೈಲಿನಲ್ಲಿ ಕನ್ನಡ ವಿದ್ಯಾರ್ಥಿಯಾಗಿದ್ದಾರೆ ತಮಿಳಿನ ಶಶಿಕಲಾ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಕನ್ನಡ ಕಲಿಯುತ್ತಿದ್ದಾರೆ.

Vijaya Karnataka Web 13 Jan 2018, 2:57 pm
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ನಟರಾಜನ್ ಅವರು ಕನ್ನಡ ಅಭ್ಯಾಸ ಮಾಡುವ ಮೂಲಕ ಕನ್ನಡತಿಯಾಗಲು ಹೊರಟ್ಟಿದ್ದಾರೆ.
Vijaya Karnataka Web in jail v k sasikala becomes a kannada student
ಜೈಲಿನಲ್ಲಿ ಕನ್ನಡ ವಿದ್ಯಾರ್ಥಿಯಾಗಿದ್ದಾರೆ ತಮಿಳಿನ ಶಶಿಕಲಾ


ಪರಪ್ಪಣ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಯಸ್ಕರ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ತರಗತಿಗಳಿಗೆ ಹಾಜರಾಗುತ್ತಿರುವ ಶಶಿಕಲಾ, ಕನ್ನಡ ವರ್ಣಮಾಲೆ ಸೇರಿದಂತೆ ಕನ್ನಡ ಓದಲು ಮತ್ತು ಉಚ್ಚರಿಸಲು ಕಲಿಯುತ್ತಿದ್ದಾರೆ. ಕಂಪ್ಯೂಟರ್ ವಿಜ್ಞಾನ ಕೂಡ ಅಭ್ಯಾಸ ಮಾಡುತ್ತಿದ್ದಾರೆ.

ಇದೇ ಪ್ರಕರಣದಲ್ಲಿ ಶಶಿಕಲಾ ಜೊತೆ ಜೈಲುಪಾಲಾಗಿರುವ ಅವರ ನಾದಿನಿ ಮತ್ತು ಇತರ ಅಪರಾಧಿಗಳು ಕೂಡ ಕನ್ನಡ ತರಗತಿಗೆ ಹಾಜರಾಗುತ್ತಿದ್ದಾರೆ. ಸದ್ಯ, ಶಶಿಕಲಾ ಮೌನ ವೃತದಲ್ಲಿರುವ ಕಾರಣ ತರಗತಿಯಲ್ಲಿ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಆದರೆ, ಕನ್ನಡವನ್ನು ಚೆನ್ನಾಗಿ ಬರೆಯುವತ್ತ ಗಮನ ಹರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಐಎಡಿಎಂಕೆ ನಾಯಕಿ ಪುಸ್ತಕ ಓದುವ ಆಸಕ್ತಿ ಹೊಂದಿದ್ದಾರೆ. ಜೈಲು ಗ್ರಂಥಾಲಯವು ಪುರುಷ ಕೈದಿಗಳ ವಿಭಾಗಲ್ಲಿದೆ. ಆದರೆ, ಈಗ ಶಶಿಕಲಾ ಅವರ ಆಸಕ್ತಿಯಿಂದ ಮಹಿಳಾ ಕೈದಿಗಳ ವಿಭಾಗದಲ್ಲಿಯೂ ಗ್ರಂಥಾಲಯ ತೆರೆಯುವಂತಾಗಿದೆ. ಮಹಿಳಾ ಗ್ರಂಥಾಲಯಕ್ಕೆ 91 ವೃತ್ತ ಪತ್ರಿಕೆಗಳು ಹಾಗೂ ಮಾಸಿಕ/ಸಾಪ್ತಾಹಿಕ ನಿಯತಕಾಲಿಕೆಗಳನ್ನು ಖರೀದಿಸಲು ಗ್ರಂಥಾಲಯ ಇಲಾಖೆ 30 ಸಾವಿರ ರೂಪಾಯಿ ವ್ಯಯಿಸಲು ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ