ಆ್ಯಪ್ನಗರ

ಬೆಂಗಳೂರು ಉಸ್ತುವಾರಿ ಉಳಿಸಿಕೊಂಡ ಸಿಎಂ

ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಕಗ್ಗಂಟಾಗಿ ಪರಿಣಮಿಸಿದ್ದ ಜಿಲ್ಲಾಉಸ್ತುವಾರಿ ಹಂಚಿಕೆ ಸಮಸ್ಯೆಗೆ ಸಿಎಂ ಯಡಿಯೂರಪ್ಪ ಕೊನೆಗೂ ಪರಿಹಾರ ...

Vijaya Karnataka 17 Sep 2019, 5:00 am
ಬೆಂಗಳೂರು: ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಕಗ್ಗಂಟಾಗಿ ಪರಿಣಮಿಸಿದ್ದ ಜಿಲ್ಲಾಉಸ್ತುವಾರಿ ಹಂಚಿಕೆ ಸಮಸ್ಯೆಗೆ ಸಿಎಂ ಯಡಿಯೂರಪ್ಪ ಕೊನೆಗೂ ಪರಿಹಾರ ರೂಪಿಸಿದ್ದಾರೆ. ಆದರೆ, ಹೆಚ್ಚಿನ ಸಚಿವರನ್ನು ಸ್ವಂತ ಜಿಲ್ಲೆಯ ಉಸ್ತುವಾರಿಯಿಂದ ಹೊರಗಿಟ್ಟಿದ್ದು, ಬೆಂಗಳೂರು ನಗರ ಮೇಲ್ವಿಚಾರಣೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವ ಮೂಲಕ ಬಣ ರಾಜಕಾರಣಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆಸಿದ್ದಾರೆ.
Vijaya Karnataka Web vidanasoudha


ಡಿಸಿಎಂ ಅಶ್ವತ್ಥನಾರಾಯಣ ಹಾಗೂ ಕಂದಾಯ ಸಚಿವ ಆರ್‌.ಅಶೋಕ್‌ ಮಧ್ಯೆ ಬೆಂಗಳೂರು ನಗರ ಉಸ್ತುವಾರಿ ವಿಚಾರದಲ್ಲಿಸೃಷ್ಟಿಯಾಗಿದ್ದ ಅಸಮಾಧಾನ ಸರಿದೂಗಿಸುವ ಉದ್ದೇಶದಿಂದ ಅವರಿಬ್ಬರನ್ನು ನಗರದ ಜವಾಬ್ದಾರಿಯಿಂದ ಹೊರಗಿಟ್ಟಿದ್ದಾರೆ. ಅಶ್ವತ್ಥನಾರಾಯಣ ಅವರಿಗೆ ರಾಮನಗರದ ಜತೆಗೆ ಚಿಕ್ಕಬಳ್ಳಾಪುರದ ಉಸ್ತುವಾರಿ ನೀಡಿಲಾಗಿದೆ. ಅಶೋಕ್‌ ಅವರಿಗೆ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯದ ಜವಾಬ್ದಾರಿ ನೀಡಲಾಗಿದೆ. ಅದೇ ರೀತಿ ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಸ್ಥಾನ ನೀಡಿದ್ದರಿಂದ ಪ್ರಕ್ಷುಬ್ಧವಾಗಿದ್ದ ಬೆಳಗಾವಿ ಜಿಲ್ಲಾರಾಜಕೀಯವನ್ನು ತಣ್ಣಗಾಗಿಸುವ ಪ್ರಯತ್ನವನ್ನೂ ನಡೆಸಲಾಗಿದೆ. ಸವದಿ ಅವರಿಗೆ ಬಳ್ಳಾರಿ ಹಾಗೂ ಕೊಪ್ಪಳ ಜವಾಬ್ದಾರಿ ನೀಡಲಾಗಿದ್ದು, ಜಗದೀಶ್‌ ಶೆಟ್ಟರ್‌ ಅವರಿಗೆ ಬೆಳಗಾವಿ ಹೊಣೆಗಾರಿಕೆ ನೀಡಲಾಗಿದೆ.

ಬಳ್ಳಾರಿ ಉಸ್ತುವಾರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದ ಬಿ.ಶ್ರೀರಾಮುಲು ಅವರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಅವರಿಗೆ ರಾಯಚೂರು, ಚಿತ್ರದುರ್ಗ ಜಿಲ್ಲೆವಹಿಸಲಾಗಿದೆ. ಮಾಜಿ ಸಚಿವ ಆನಂದ್‌ಸಿಂಗ್‌ ಅವರಿಗೆ ಬಳ್ಳಾರಿ ಉಸ್ತುವಾರಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿರಾಮುಲು ಅವರನ್ನು ಜಿಲ್ಲಾರಾಜಕಾರಣದಿಂದ ಹೊರಗಿಡಲಾಗಿದೆ ಎಂದು ತಿಳಿದು ಬಂದಿದೆ. ಇದರ ಮುನ್ಸೂಚನೆ ಅರಿತ ಶ್ರೀರಾಮುಲು ಸೋಮವಾರ ನಡೆದ ಸಮಾಜ ಕಲ್ಯಾಣ ಇಲಾಖೆ ಪರಿಷತ್‌ ಸಭೆಯಿಂದ ದೂರ ಉಳಿಯುವ ಮೂಲಕ ತಮ್ಮ ಅಸಮಾಧಾನ ಹೊರಗೆಡವಿದ್ದಾರೆ. ಅದೇ ರೀತಿ ಬಸವರಾಜ ಬೊಮ್ಮಾಯಿ ಅವರಿಗೆ ಉಡುಪಿ ಜಿಲ್ಲೆಉಸ್ತುವಾರಿ ನೀಡಲಾಗಿದೆ. ಹಾವೇರಿ ಜಿಲ್ಲೆಉಸ್ತುವಾರಿ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದ್ದು, ಅನರ್ಹ ಶಾಸಕರ ವಿಚಾರಣೆ ಬಳಿಕ ಬಿ.ಸಿ.ಪಾಟೀಲ್‌ ಸಂಪುಟ ಸೇರಿದರೆ ಅವರಿಗೆ ಹಾವೇರಿ ಜಿಲ್ಲೆಹೊಣೆಗಾರಿಕೆ ಲಭ್ಯವಾಗಲಿದೆ.

ಲಕ್ಷ್ಮಣ ಸವದಿ ಅವರಿಗೆ ನೀಡಿರುವ ಬಳ್ಳಾರಿ ಉಸ್ತುವಾರಿ ಬದಲಾಗುವ ಸಾಧ್ಯತೆ ಇದ್ದು, ನಂತರ ಆನಂದ್‌ಸಿಂಗ್‌ ಅವರಿಗೆ ಲಭಿಸಲಿದೆ. ಕೊಪ್ಪಳ ಜಿಲ್ಲೆಯಲ್ಲಿಗಾಣಿಗ ಸಮುದಾಯಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರಿಗೆ ಕೊಪ್ಪಳ ಉಸ್ತುವಾರಿ ಸವದಿ ಅವರಿಗೆ ಕಾಯಂ ಆಗಲಿದೆ. ಅದೇ ರೀತಿ ರಮೇಶ್‌ ಜಾರಕಿಹೊಳಿ ಸಂಪುಟ ಸೇರಿದರೆ ಜಗದೀಶ್‌ ಶೆಟ್ಟರ್‌ ಹುಬ್ಬಳ್ಳಿ-ಧಾರವಾಡ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಸ್ವಂತ ಜಿಲ್ಲೆವಂಚಿತರು

ಡಾ.ಅಶ್ವತ್ಥನಾರಾಯಣ, ಆರ್‌.ಅಶೋಕ್‌, ಬಿ.ಶ್ರೀರಾಮುಲು, ಸುರೇಶ್‌ ಕುಮಾರ್‌, ಶಶಿಕಲಾ ಜೊಲ್ಲೆ, ವಿ.ಸೋಮಣ್ಣ, ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯ ಉಸ್ತುವಾರಿ ತಪ್ಪಿಸಿಕೊಳ್ಳಲಿದ್ದಾರೆ. ತಮ್ಮ ತವರು ಜಿಲ್ಲೆಶಿವಮೊಗ್ಗ ಹೊಣೆಗಾರಿಕೆಯನ್ನು ಸಚಿವ ಈಶ್ವರಪ್ಪ ಅವರಿಗೆ ಸಿಎಂ ಬಿಟ್ಟುಕೊಟ್ಟಿದ್ದಾರೆ. ಸಂಪುಟ ರಚನೆಯಾಗಿ ಹೆಚ್ಚುಕಡಿಮೆ ತಿಂಗಳು ಕಳೆದ ಬಳಿಕ ಜಿಲ್ಲಾಉಸ್ತುವಾರಿ ಹಂಚಿಕೆ ಮಾಡಲಾಗಿದೆ.
ಉಸ್ತುವಾರಿ ಪಟ್ಟಿ

ಬಿ.ಎಸ್‌.ಯಡಿಯೂರಪ್ಪ: ಬೆಂಗಳೂರು ನಗರ

ಗೋವಿಂದ ಕಾರಜೋಳ: ಬಾಗಲಕೋಟೆ, ಕಲಬುರಗಿ(ಹೆಚ್ಚುವರಿ)

ಡಾ.ಅಶ್ವತ್ಥನಾರಾಯಣ: ರಾಮನಗರ, ಚಿಕ್ಕಬಳ್ಳಾಪುರ(ಹೆಚ್ಚುವರಿ)

ಲಕ್ಷ್ಮಣ ಸವದಿ: ಬಳ್ಳಾರಿ, ಕೊಪ್ಪಳ(ಹೆಚ್ಚುವರಿ)

ಕೆ.ಎಸ್‌.ಈಶ್ವರಪ್ಪ: ಶಿವಮೊಗ್ಗ, ದಾವಣಗೆರೆ(ಹೆಚ್ಚುವರಿ)

ಆರ್‌.ಅಶೋಕ: ಬೆಂಗಳೂರು ಗ್ರಾಮಾಂತರ, ಮಂಡ್ಯ(ಹೆಚ್ಚುವರಿ)

ಜಗದೀಶ್‌ ಶೆಟ್ಟರ್‌: ಬೆಳಗಾವಿ, ಹುಬ್ಬಳ್ಳಿ-ಧಾರವಾಡ(ಹೆಚ್ಚುವರಿ)

ಬಿ.ಶ್ರೀರಾಮುಲು: ರಾಯಚೂರು, ಚಿತ್ರದುರ್ಗ(ಹೆಚ್ಚುವರಿ)

ಎಸ್‌.ಸುರೇಶ್‌ ಕುಮಾರ್‌: ಚಾಮರಾಜನಗರ

ವಿ.ಸೋಮಣ್ಣ: ಮೈಸೂರು, ಮಡಿಕೇರಿ(ಹೆಚ್ಚುವರಿ)

ಸಿ.ಟಿ.ರವಿ: ಚಿಕ್ಕಮಗಳೂರು

ಬಸವರಾಜ ಬೊಮ್ಮಾಯಿ: ಉಡುಪಿ, ಹಾವೇರಿ(ಹೆಚ್ಚುವರಿ)

ಕೋಟ ಶ್ರೀನಿವಾಸ ಪೂಜಾರಿ: ಮಂಗಳೂರು

ಜೆ.ಸಿ.ಮಾಧುಸ್ವಾಮಿ: ತುಮಕೂರು, ಹಾಸನ(ಹೆಚ್ಚುವರಿ)

ಸಿ.ಸಿ.ಪಾಟೀಲ್‌: ಗದಗ

ಎಚ್‌.ನಾಗೇಶ್‌: ಕೋಲಾರ

ಪ್ರಭು ಚೌಹಾಣ್‌: ಬೀದರ್‌, ಯಾದಗಿರಿ(ಹೆಚ್ಚುವರಿ)

ಶಶಿಕಲಾ ಜೊಲ್ಲೆ: ಉತ್ತರ ಕನ್ನಡ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ