ಆ್ಯಪ್ನಗರ

ಕೈಗಾರಿಕೆಗಳಿಗೆ ಭೂಮಿ : ವಿವರ ಕೇಳಿದ ಪಿಎಸಿ

ಉದ್ಯಮ ಸಂಸ್ಥೆಗಳಿಗೆ ಭೂಮಿ ಹಸ್ತಾಂತರ ಮಾಡಿರುವುದು ಮತ್ತು ಉದ್ಯೋಗ ಸೃಷ್ಟಿಯ ಮಾಹಿತಿಯನ್ನು 15 ದಿನದೊಳಗೆ ಒದಗಿಸುವಂತೆ ಕೈಗಾರಿಕೆ ಇಲಾಖೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ...

Vijaya Karnataka 19 Jun 2019, 5:00 am
ಬೆಂಗಳೂರು: ಉದ್ಯಮ ಸಂಸ್ಥೆಗಳಿಗೆ ಭೂಮಿ ಹಸ್ತಾಂತರ ಮಾಡಿರುವುದು ಮತ್ತು ಉದ್ಯೋಗ ಸೃಷ್ಟಿಯ ಮಾಹಿತಿಯನ್ನು 15 ದಿನದೊಳಗೆ ಒದಗಿಸುವಂತೆ ಕೈಗಾರಿಕೆ ಇಲಾಖೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸೂಚಿಸಿದೆ.
Vijaya Karnataka Web BJP- R ashok


ಮಾಜಿ ಡಿಸಿಎಂ ಆರ್‌.ಅಶೋಕ್‌ ಅಧ್ಯಕ್ಷತೆಯ ಪಿಎಸಿ ಸಭೆ ವಿಧಾನಸೌಧದಲ್ಲಿ ಮಂಗಳವಾರ ನಡೆಯಿತು. ಜಿಂದಾಲ್‌ಗೆ ಭೂಮಿ ನೀಡುವ ಸಂಪುಟದ ನಿರ್ಣಯ ವಿವಾದಕ್ಕೆ ಗುರಿಯಾಗಿದ್ದರಿಂದ ಈ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಜತೆಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಂಬಂಧ ಯಾವೆಲ್ಲ ಕಂಪನಿಗಳಿಗೆ ಸರಕಾರದಿಂದ ಭೂಮಿ ಒದಗಿಸಲಾಗಿದೆ ಎಂಬ ಸಮಗ್ರ ಮಾಹಿತಿ ನೀಡಬೇಕು. ಇಂಥ ಕೈಗಾರಿಕೆಗಳ ಪೈಕಿ ಕನ್ನಡಿಗರೇ ಸ್ಥಾಪಿಸಿದ ಸಂಸ್ಥೆಗಳೆಷ್ಟಿವೆ ಎಂಬ ವಿವರವೂ ಅಗತ್ಯ. ಕನ್ನಡಿಗರಿಗೆ ಉದ್ಯೋಗ ನೀಡಿದ್ದರ ಬಗ್ಗೆಯೂ ತಿಳಿಸಬೇಕು ಎಂಬ ನಿರ್ದೇಶನ ಕೊಡಲಾಗಿದೆ ಎಂದು ತಿಳಿದು ಬಂದಿದೆ.

500 ಕೋಟಿ ರಾಜಧನ ಬಾಕಿ

ಜಲ್ಲಿ ಕ್ರಷರ್‌ ಸಂಸ್ಥೆ ಮಾಲೀಕರು ಕಳೆದ 3 ವರ್ಷದಿಂದ 500 ಕೋಟಿ ರೂ. ರಾಜಧನ ಬಾಕಿ ಇರಿಸಿಕೊಂಡಿರುವುದನ್ನೂ ಪಿಎಸಿ ಗಂಭೀರವಾಗಿ ಪರಿಗಣಿಸಿದೆ. 3 ತಿಂಗಳ ಗಡುವು ವಿಧಿಸಿದ್ದರೂ ಬಾಕಿ ಮೊತ್ತ ಪಾವತಿಯಾಗಿಲ್ಲ. ಈ ಸಂಬಂಧವೂ 15 ದಿನದೊಳಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸಮಿತಿ ಸೂಚಿಸಿದೆ ಎಂದು ಗೊತ್ತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ