ಆ್ಯಪ್ನಗರ

ಅ.21, 22ರಂದು ಬೆಂಗಳೂರಿನಲ್ಲಿ 15ನೇ ಇಂಡಿಯಾ ಇನೋವೇಷನ್‌ ಶೃಂಗಸಭೆ

ಹೊಸ ಹೊಸ ಆವಿಷ್ಕಾರಗಳನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ)ವು ಆ.21ಮತ್ತು 22ರಂದು ಎರಡು ದಿನಗಳ 15ನೇ ಭಾರತ ಆವಿಷ್ಕಾರ ಶೃಂಗಸಭೆಯನ್ನು ಆಯೋಜಿಸಿದೆ.

Vijaya Karnataka 10 Aug 2019, 5:00 am
ಬೆಂಗಳೂರು : ಹೊಸ ಹೊಸ ಆವಿಷ್ಕಾರಗಳನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ)ವು ಆ.21ಮತ್ತು 22ರಂದು ಎರಡು ದಿನಗಳ 15ನೇ ಭಾರತ ಆವಿಷ್ಕಾರ ಶೃಂಗಸಭೆಯನ್ನು ಆಯೋಜಿಸಿದೆ.
Vijaya Karnataka Web india inovation meet on october 2122
ಅ.21, 22ರಂದು ಬೆಂಗಳೂರಿನಲ್ಲಿ 15ನೇ ಇಂಡಿಯಾ ಇನೋವೇಷನ್‌ ಶೃಂಗಸಭೆ


ಸಿಐಐ ಉಪಾಧ್ಯಕ್ಷ ಸಂದೀಪ್‌ ಸಿಂಗ್‌ ಮತ್ತು ಸಿಐಐ ಮಾಜಿ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

''ಆವಿಷ್ಕಾರ ಪ್ರಣಾಳಿಕೆ- ಮುಂದಿನ ದಶಕದಲ್ಲಿ ಹೊಸ ಎತ್ತರಕ್ಕೆ 'ಎನ್ನುವ ಘೋಷವಾಕ್ಯದಡಿ ಈ ಸಭೆ ನಡೆಸಲಾಗುತ್ತಿದೆ. ಇದು ರಾಜ್ಯ ಹಾಗೂ ಹೊರ ರಾಜ್ಯದ ನವೋದ್ಯಮಗಳಿಗೆ, ಯುವ ಉದ್ಯಮಿಗಳಿಗೆ, ಸಣ್ಣ ಹೂಡಿಕೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ,''ಎಂದು ಸಂದೀಪ್‌ ಸಿಂಗ್‌ ಹೇಳಿದರು.

ಮಾಜಿ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌, ''ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಹಾಗಾಗಿ ಎರಡು ದಿನಗಳ ಸಮ್ಮೇಳನದಲ್ಲಿ ಎಂಟು ಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ. ಸುಮಾರು 600ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವ್ಯಕ್ತವಾಗುವ ಅಂಶಗಳನ್ನು ಕ್ರೂಢೀಕರಿಸಿ ಪ್ರಣಾಳಿಕೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು,'' ಎಂದು ಹೇಳಿದರು.

ಶೃಂಗಸಭೆ ಕುರಿತು ವಿವರ ನೀಡಿದ ಸಿಟಿಒ ಸಹ ಸಂಸ್ಥಾಪಕ ಐ.ವಿಜಯಕುಮಾರ್‌, ''ಮೊದಲ ಗೋಷ್ಠಿಯಲ್ಲಿ ಇಂಡಿಯನ್‌ ವೋಕೇಷನ್‌ ಹೆಸರಿನಲ್ಲಿ ವೃತ್ತಿಪರ ತರಬೇತಿ ಬಗ್ಗೆ ತಜ್ಞರು ವಿಚಾರ ಮಂಡಿಸುವರು. ಪರಿಸರ, ಭಾಷೆಗಳು, ನವೋದ್ಯಮ, 5 ಜಿ ತಂತ್ರಜ್ಞಾನ, ವಿದ್ಯುನ್ಮಾನ ವಾಹನಗಳ ಸಂಚಾರ ಮತ್ತಿತರ ವಿಚಾರಗಳ ಬಗ್ಗೆ ಪರಿಣಿತರು ವಿಚಾರಗಳನ್ನು ಮಂಡಿಸಲಿದ್ದಾರೆ,'' ಎಂದರು.

ಸಿಐಐ ಕರ್ನಾಟಕ ಸಮಿತಿಯ ಸದಸ್ಯ ರಮೇಶ್‌ ರಾಮದೊರೈ, ''ಶೃಂಗಸಭೆಯ ಭಾಗವಾಗಿ ವಸ್ತು ಪ್ರದರ್ಶನವೂ ಇರುತ್ತದೆ, ಉತ್ತಮ ಆವಿಷ್ಕಾರಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ