ಆ್ಯಪ್ನಗರ

21 ದಿನ ಭಾರತವೇ ಲಾಕ್‌ಡೌನ್‌: ಏನಿರುತ್ತೆ, ಏನಿರಲ್ಲ?

ದೇಶದಲ್ಲಿ ಮಾರ್ಚ್ 24ರ ಮಧ್ಯರಾತ್ರಿಯಿಂದ ಏಪ್ರಿಲ್‌ 14ರವರೆಗೆ 21 ದಿನಗಳ ಲಾಕ್‌ಡೌನ್‌ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಯಾವ ಸೇವೆಗಳು ಇರಲಿದೆ ಮತ್ತು ಯಾವ ಸೇವೆಗಳು ಇರುವುದಿಲ್ಲ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Vijaya Karnataka Web 25 Mar 2020, 8:09 am
ಹೊಸದಿಲ್ಲಿ: ಕೊರೊನಾ ವೈರಸ್ ಹಬ್ಬುವುದನ್ನು ತಡೆಯಲು ದೇಶದಲ್ಲಿ ಮಾರ್ಚ್ 24ರ ಮಧ್ಯರಾತ್ರಿಯಿಂದ ಏಪ್ರಿಲ್‌ 14ರವರೆಗೆ 21 ದಿನಗಳ ಲಾಕ್‌ಡೌನ್‌ ಘೋಷಣೆಯಾಗಿದೆ. ಈ ದಿನಗಳಲ್ಲಿಯಾವ ಸೇವೆಗಳು ಸಿಗುತ್ತವೆ, ಯಾವುದು ಸಿಗಲ್ಲಎಂಬ ಬಗ್ಗೆ ಕೇಂದ್ರ ಸರಕಾರ ಹೊರಡಿಸಿದ ಮಾರ್ಗದರ್ಶಿ ಸೂತ್ರದಲ್ಲಿ ವಿವರಿಸಲಾಗಿದೆ.
Vijaya Karnataka Web New Delhi


-ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರಲಿದೆಯೇ?

ಯಾವುದೇ ಸರಕಾರಿ-ಖಾಸಗಿ ಬಸ್‌, ರೈಲು, ವಿಮಾನ, ಟ್ಯಾಕ್ಸಿ, ಆಟೊ ರಿಕ್ಷಾ, ಇ-ರಿಕ್ಷಾ ಸಂಚಾರವಿಲ್ಲ.

- ಓಲಾ ಅಥವಾ ಉಬರ್‌ ಬುಕ್‌ ಮಾಡಬಹುದೇ?

ಇಲ್ಲ. ಬಹುತೇಕ ರಾಜ್ಯಗಳು ಸಂಚಾರ ನಿಲ್ಲಿಸಿವೆ. ಕೆಲ ರಾಜ್ಯಗಳಲ್ಲಿಆಸ್ಪತ್ರೆಗಳಿಗೆ ಹೋಗಲಷ್ಟೇ ಅನುಮತಿ.

-ಖಾಸಗಿ ಕಾರು ಮತ್ತು ದ್ವಿಚಕ್ರವಾಹನಗಳಿಗೆ ಅನುಮತಿ ಇದೆಯೇ?

ಸಂಚರಿಸಬಹುದು. ಆದರೆ ತೀರ ಅಗತ್ಯ ಉದ್ದೇಶಗಳಿಗೆ ಮಾತ್ರ

-ಅಂತ್ಯಕ್ರಿಯೆ ಕಾರ್ಯಕ್ರಮ ಇದ್ದರೆ?

20 ಜನರಿಗಿಂತ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಲು ಅನುಮತಿ ಇದೆ.

- ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದರೆ?

ಹೋಟೆಲ್‌, ಹೋಮ್‌ಸ್ಟೇ, ಲಾಡ್ಜ್‌ಗಳಲ್ಲಿ ಲಾಕ್‌ ಡೌನ್‌ ಪರಿಣಾಮ ಪ್ರವಾಸಿಗರು, ವೈದ್ಯಕೀಯ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಅತಂತ್ರರಾಗಿ ಉಳಿದಿದ್ದರೆ, ಅವರಿಗೆಲ್ಲ ವಸತಿ, ಆಹಾರ ವ್ಯವಸ್ಥೆ ಮುಂದುವರಿಸಬಹುದು.

-ಪೆಟ್ರೋಲ್‌ ಖರೀದಿಸಬಹುದೇ?


ಹೌದು. ಪೆಟ್ರೋಲ್‌ ಬಂಕ್‌, ಎಲ್ಪಿಜಿ ಸೇವೆ ಇರುತ್ತದೆ.

-ಧಾರ್ಮಿಕ ಆರಾಧನಾ ಕೇಂದ್ರಗಳು ತೆರೆದಿರುತ್ತವೆಯೇ?

-ಇಲ್ಲ.

- ನಾನು ಆಸ್ಪತ್ರೆಗೆ ಹೋಗಬಹುದೇ?

ಆಸ್ಪತ್ರೆಗಳು ಮತ್ತು ಮೆಡಿಕಲ್‌ ಸ್ಟೋರ್‌ಗಳ ಸೇವೆಗೆ ತೆಗೆದೇ ಇರುತ್ತವೆ.

- ಒಂದು ವೇಳೆ ಔಷಧಗಳು ಬೇಕಿದ್ದರೆ?

ಫಾರ್ಮಸಿಗಳು ತೆರೆದಿರುತ್ತವೆ.

- ಹೋಮ್‌ ಡೆಲಿವರಿಗೆ ನಾನು ಆರ್ಡರ್‌ ಮಾಡಬಹುದೇ?

ಮಾಡಬಹುದು. ಇ-ಕಾಮರ್ಸ್‌ ಸೇವೆ ಇರುತ್ತದೆ. ಅಗತ್ಯವಿರುವ ಎಲ್ಲ ವಸ್ತುಗಳು ಅಂದರೆ ಆಹಾರ, ಔಷಧಗಳು, ವೈದ್ಯಕೀಯ ಉಪಕರಣಗಳು, ಆಹಾರ ಉತ್ಪನ್ನಗಳು, ತರಕಾರಿ, ದಿನಸಿ ಅಂಗಡಿಗಳು ತೆರೆದಿರುತ್ತವೆ. ರೆಸ್ಟೊರೆಂಟ್‌ಗಳು ತೆಗೆದಿದ್ದು ಹೋಮ್‌ ಡೆಲಿವರಿ ಇಲ್ಲವೇ ಪಾರ್ಸಲ್‌ ತೆಗೆದುಕೊಂಡು ಹೋಗಬಹುದು.

- ಪತ್ರಕರ್ತರು ಹೊರಗೆ ಹೋಗಬಹುದೇ?

ಹೌದು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಪತ್ರಕರ್ತರು ಹೋಗಬಹುದು.

- ನಾನು ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದೇ

ಹೌದು. ಎಟಿಎಂ ಸೇರಿದಂತೆ ಬ್ಯಾಂಕುಗಳ ಕ್ಯಾಶಿಯರ್‌/ ಟೆಲ್ಲರ್‌ ಕಾರ್ಯಾಚರಣೆ ಅಬಾಧಿತವಾಗಿರುತ್ತದೆ.

- ಇಂಟರ್ನೆಟ್‌ ಮತ್ತು ಕೊರಿಯರ್‌ ಸೇವೆಗಳು ರದ್ದಾಗುತ್ತವೆಯೇ?

ಇಲ್ಲ. ಟೆಲಿಕಾಂ, ಇಂಟರ್ನೆಟ್‌ ಮತ್ತು ಅಂಚೆ ಸೇವೆಗಳು ಎಂದಿನಂತೆ ಇರಲಿವೆ.

- ಗುಂಪಿನಲ್ಲಿ ನಾನು ಹೊರಗೆ ಹೋಗಬಹುದೇ?

ಹೋಗುವಂತಿಲ್ಲ. ಐದು ಜನರಗಿಂತ ಹೆಚ್ಚಿನವರು ಸಭೆ ಸೇರುವುದನ್ನು ನಿಷೇಧಿಸಲಾಗಿದೆ. ನಿಯಮ ಮೀರಿದರೆ ಕಾನೂನು ಪ್ರಕಾರ ಶಿಕ್ಷಿಸಲಾಗುವುದು.

- ಈ ಆದೇಶದಿಂದ ಯಾವೆಲ್ಲ ಸೇವೆಗಳು ಮತ್ತು ಕಚೇರಿಗಳನ್ನು ಹೊರಗಿಡಲಾಗಿದೆ?

ಕಾನೂನು ಮತ್ತು ಸುವ್ಯವಸ್ಥೆ, ಮ್ಯಾಜಿಸ್ಟೀರಿಯಲ್‌ ಕರ್ತವ್ಯಗಳು, ಪೊಲೀಸ್‌, ಆರೋಗ್ಯ, ಅಗ್ನಿಶಾಮಕ, ಜೈಲು, ನ್ಯಾಯ ಬೆಲೆ ಅಂಗಡಿಗಳು, ವಿದ್ಯುತ್‌, ನೀರು, ಮುನ್ಸಿಪಲ್‌ ಸೇವೆಗಳ ಜವಾಬ್ದಾರಿ ಹೊಂದಿರುವ ಕಚೇರಿಗಳಿಗೆ ಆದೇಶ ಅನ್ವಯವಾಗಲ್ಲ. ಜೊತೆಗೆ, ಶಾಸಕಾಂಗ ಸಭೆ ಸಂಬಂಧಿ ಕಾರ್ಯಕ ಕಲಾಪಗಳು, ಪಾವತಿ ಮತ್ತು ಲೆಕ್ಕಪರಿಶೋಧಕ ಕಚೇರಿಗಳೂ ಅನ್ವಯವಾಗಲ್ಲ.

-ನಾನು ಸಾಕು ಪ್ರಾಣಿಗಳನ್ನು ಹೊಂದಿದ್ದರೆ

ಸಾಕು ಪ್ರಾಣಿಗಳ ಆಹಾರ, ಉತ್ಪಾದನೆ, ಸಂಸ್ಕರಣೆ, ಪೂರೈಕೆ, ಹಂಚಿಕೆ, ದಾಸ್ತಾನು, ವ್ಯಾಪಾರ/ವಾಣಿಜ್ಯ ಮತ್ತು ಲಾಜಿಸ್ಟಿಕ್ಸ್‌ಗಳಿಗೆ ಸಂಬಂಧಿಸಿದ ಸೇವೆಗಳು, ಕಚೇರಿಗಳು ಮತ್ತು ಇವುಗಳನ್ನು ಡೆಲಿವರಿ ಮಾಡಲು ಬೇಕಾಗುವ ಎಲ್ಲ ಸೇವೆಗಳು ಎಂದಿನಂತೆ ಮುಂದುವರಿಯಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ