ಆ್ಯಪ್ನಗರ

ಕೊಪ್ಪಳದಲ್ಲಿ ಉಲ್ಟಾ, ರಾಯಚೂರಿನಲ್ಲಿ ಹಾರದ ರಾಷ್ಟ್ರ ಧ್ವಜ

69ನೇ ಗಣರಾಜೋತ್ಸವವನ್ನು ಇಡಿ ದೇಶವೇ ಸಂಭ್ರಮಿಸುತ್ತಿದೆ. ಆದರೆ, ನಗರದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರ ಧ್ವಜ ಉಲ್ಟಾ ಹಾರಿದ ಘಟನೆ ನಡೆದಿದೆ.

Vijaya Karnataka Web 26 Jan 2018, 12:05 pm
ಕೊಪ್ಪಳ/ರಾಯಚೂರು/ ಹಾವೇರಿ? ಮಧುಗಿರಿ: 69ನೇ ಗಣರಾಜೋತ್ಸವವನ್ನು ಇಡಿ ದೇಶವೇ ಸಂಭ್ರಮಿಸುತ್ತಿದೆ. ಆದರೆ, ನಗರದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರ ಧ್ವಜ ಉಲ್ಟಾ ಹಾರಿದ ಘಟನೆ ನಡೆದಿದೆ.
Vijaya Karnataka Web indian flag upside down at koppala
ಕೊಪ್ಪಳದಲ್ಲಿ ಉಲ್ಟಾ, ರಾಯಚೂರಿನಲ್ಲಿ ಹಾರದ ರಾಷ್ಟ್ರ ಧ್ವಜ


ಧ್ವಜಾರೋಹಣದ ಬಳಿಕ ಹಸಿರು ಬಣ್ಣ ಮೇಲೆ ಕೇಸರಿ ಬಣ್ಣ ಕೆಳಗೆ ಬಂದ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ತಬ್ಬಿಬ್ಬುಗೊಂಡರು. ತಕ್ಷಣವೇ ಧ್ವಜ ಕೆಳಗಿಳಿಸಿ ಸರಿಪಡಿಸಲಾಯಿತು.

ಇನ್ನೂ ರಾಯಚೂರಿನ ಲಿಂಗಸೂಗೂರು ತಾಲೂಕಿನ ಮುದಗಲ್‌ನಲ್ಲಿ ಧ್ವಜವೇ ಹಾರದ ಘಟನೆ ನಡೆದಿದೆ. ಇಲ್ಲಿನ ಸರಕಾರಿ ಆಸ್ಪತ್ರೆಯ ಧ್ವಜಾರೋಹಣದ ವೇಳೆ ರಾಷ್ಟ್ರ ಧ್ವಜ ಸ್ತಂಭದಲ್ಲಿಯೇ ಗಂಟು ಹಾಕಿಕೊಂಡಿದ್ದು, ಕುರ್ಚಿ ಸಹಾಯದಿಂದ ಗಂಟು ಬಿಚ್ಚಿ ಧ್ವಜಾರೋಹಣ ಮಾಡಿದರು.


ರಾಷ್ಟ್ರಧ್ವಜಕ್ಕಿಂತ ಕೇಸರಿ ಧ್ವಜ ಮೇಲೆ

ಮಧುಗಿರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಅಚಾರಣಾ ಸಮಿತಿ ವತಿಯಿಂದ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರಕ್ಕೆ ಕೇಸರಿ ಧ್ವಜ ಹಾರಾಡಿತು. ಉಪವಿಭಾಗದಿಕಾರಿ ಡಾ.ವೆಂಕಟೇಶಯ್ಯ ಧ್ವಜಾರೋಹಣ ನೆರವೇರಿಸಿದ ಬಳಿಕ ಯುವಕರ ತಂಡ ಮಧುಗಿರಿ ಪಿಎಸ್ ಐ ಫಾಲಕ್ಷ ಪ್ರಭುಗೆ ತಿಳಿಸಿದರು. ತಕ್ಷಣ ಕಾರ್ಯಪ್ರವೃತರಾದ ತಹಶೀಲ್ದಾರರು,ಬಿಇಒ ಬಾವುಟವನ್ನು ಕೆಳಗಿಳಿಸಿದರು.


ಬಿಸಿಲಿನ ತಾಪಕ್ಕೆ ಆರ್‌ಎಸ್‌ಐ ಅಸ್ವಸ್ಥ

ಹಾವೇರಿಯಲ್ಲಿ ನಡೆದ ಗಣರಾಜೋತ್ಸವ ಸಮಾರಂಭದಲ್ಲಿ ಬಿಸಿಲಿನ ತಾಪಕ್ಕೆ ಆರ್‌ಎಸ್‌ಐ ದೀಪಕ್ ಹೆಗ್ಗಡೆ ಅಸ್ವಸ್ಥರಾದ ಘಟನೆ ವರದಿಯಾಗಿದೆ. ಸಕಾಲಕ್ಕೆ ಆ್ಯಂಬ್ಯುಲೆನ್ಸ್ ಲಭ್ಯವಾಗದ ಕಾರಣ ದೀಪಕ್ ಅವರನ್ನು ತಹಶೀಲ್ದಾರ ವಾಹನದಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿ.ಪಂ ಅಧ್ಯಕ್ಷೆಯ ಕಾರಿಗೆ ಡಿಕ್ಕಿ

ಬಾಗಲಕೋಟದ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಪ್ರಯಾಣಿಸುತ್ತಿದ್ದ ಕಾರ್ ಹುನಗುಂದ ಬಳಿ ಬಸ್‌ಗೆ ಡಿಕ್ಕಿಯಾಗಿದೆ. ಗಣರಾಜ್ಯೋತ್ಸವ ಸಮಾರಂವಾಕರಸಾ ಸಂಸ್ಥೆ ಯ ಬಸ್ ಗೆ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದಿದೆ. ಆದರೆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ವೀಣಾ ಅವರು ಮತ್ತೊಂದು ಕಾರ್‌ನಲ್ಲಿ ಬಾಗಲಕೋಟ ಕ್ಕೆ ಪ್ರಯಾಣ ಬೆಳೆಸಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ