ಆ್ಯಪ್ನಗರ

ಇಂದಿರಾ ಕ್ಯಾಂಟೀನ್: ಸುಳ್ಳುಗಾರನ ಮನೆ ಹಾಳಾಗ ಎಂದ ಸಿಎಂ

ಇಂದಿರಾ ಕ್ಯಾಂಟೀನ್‌ ಯೋಜನೆಯೇ ನೂರು ಕೋಟಿ ರೂ.ಗಳದ್ದು. ಇದರಲ್ಲಿ 65 ಕೋಟಿ ಅವ್ಯವಹಾರ ನಡೆದಿದೆ ಎಂದು ಯಾವನೋ ಹೇಳುತ್ತಾನೆ.

ವಿಕ ಸುದ್ದಿಲೋಕ 22 Jul 2017, 12:32 pm
ಬೆಂಗಳೂರು: ಇಂದಿರಾ ಕ್ಯಾಂಟೀನ್ ಯೋಜನೆಗೂ ಕೆಲವರು ಅಡ್ಡಗಾಲು ಹಾಕುತ್ತಾರೆ. ಈ ಯೋಜನೆಯೇ ನೂರು ಕೋಟಿ ರೂ.ಗಳದ್ದು. ಇದರಲ್ಲಿ 65 ಕೋಟಿ ಅವ್ಯವಹಾರ ನಡೆದಿದೆ ಎಂದು ಯಾವನೋ ಹೇಳುತ್ತಾನೆ. ಅವನ ಮನೆ ಹಾಳಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Vijaya Karnataka Web indira canteen and cm siddaramaiah
ಇಂದಿರಾ ಕ್ಯಾಂಟೀನ್: ಸುಳ್ಳುಗಾರನ ಮನೆ ಹಾಳಾಗ ಎಂದ ಸಿಎಂ


ಮಾಗಡಿ ರಸ್ತೆಯ ಕೆಳಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿಮಾತನಾಡಿದ ಸಿಎಂ, ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ಆರೋಪ ಮಾಡಿದವರಿಗೆ ಸ್ವಲ್ಪ ಆದರೂ ಲೆಕ್ಕ ಬರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಆರ್‌ಟಿಐ ಕಾಯಿದೆ ಬಂದ ಬಳಿಕ ಅದನ್ನು ಸುಮ್ಮನೆ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಇದು ಅಭಿವೃದ್ಧಿಗೆ ಮಾರಕ. ಹೀಗೆ ಆರೋಪ ಮಾಡಿದವನ ಮೇಲೆ ಕೇಸ್ ಹಾಕಬಹುದು. ನಾನು ಲಾಯರ್, ಆದರೆ ನನಗೆ ನ್ಯಾಯಾಲಯಕ್ಕೆ ಹೋಗಲು ಸಮಯವಿಲ್ಲ. ನೀವೇ ಯಾರಾದ್ರೂ ಕೇಸ್ ಹಾಕಿ ಎಂದು ಮುಖ್ಯಮಂತ್ರಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ