ಆ್ಯಪ್ನಗರ

ಪೆಟ್ರೋಲ್‌ ದಾಳಿ: ಶಿಕ್ಷ ಕಿ ಸುನಂದಾ ಸಾವು

ಪತಿಯಿಂದಲೇ ಪೆಟ್ರೋಲ್‌ ದಾಳಿಗೆ ಒಳಗಾಗಿ ಸಾವು ಬದುಕಿನ ಜತೆ ಹೋರಾಡುತ್ತಿದ್ದ ಶಿಕ್ಷಕಿ ಸುನಂದಾ ಅವರು ಮೃತಪಟ್ಟಿದ್ದಾರೆ...

ವಿಕ ಸುದ್ದಿಲೋಕ 21 Aug 2017, 9:15 am

ಮಾಗಡಿ: ಶಾಲೆಯಲ್ಲಿ ಪಾಠ ಮಾಡುವಾಗ ಪತಿಯಿಂದಲೇ ಪೆಟ್ರೋಲ್‌ ದಾಳಿಗೆ ಒಳಗಾಗಿ ಸಾವು ಬದುಕಿನ ಜತೆ ಹೋರಾಡುತ್ತಿದ್ದ ಶಿಕ್ಷಕಿ ಸುನಂದಾ ಮೃತಪಟ್ಟಿದ್ದಾರೆ.

Vijaya Karnataka Web injured teacher dies
ಪೆಟ್ರೋಲ್‌ ದಾಳಿ: ಶಿಕ್ಷ ಕಿ ಸುನಂದಾ ಸಾವು


ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷ ಕಿ ಸುನಂದಾ, 4 ದಿನಗಳವರೆಗೆ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದು, ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

ಆ.16ರ ಬುಧುವಾರ ಮಾಗಡಿ ತಾಲೂಕಿನ ಶಂಭಯ್ಯನಪಾಳ್ಯದ ಸರಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷ ಕಿ ಸುನಂದಾ ಮೇಲೆ ಅವರ ಪತಿ ರೇಣುಕಾರಾದ್ಯ ಶಾಲೆ ಒಳಗೆ ನುಗ್ಗಿ, ಮಕ್ಕಳನ್ನು ಹೊರಗೆ ಕಳುಹಿಸಿ, ಪೆಟ್ರೋಲ್‌ ಎರಚಿ ಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಶೇ.60 ರಷ್ಟು ಸುಟ್ಟ ಗಾಯಕ್ಕೊಳಗಾಗಿದ್ದ ಸುನಂದಾ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸುನಂದ ಅವರ ಮೇಲೆ ಪೆಟ್ರೋಲ್‌ ದಾಳಿ ನಡೆಸಿದ ಬಳಿಕ ತಲೆ ಮರೆಸಿಕೊಂಡಿದ್ದ ಆಕೆಯ ಪತಿ ರೇಣುಕಾರಾಧ್ಯ ಧರ್ಮಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

Injured Teacher Dies

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ