ಆ್ಯಪ್ನಗರ

ಇನ್‌ಸ್ಪೈರ್‌ ವಿಜೇತರಿಗೆ ಜಪಾನ್‌ ಪ್ರವಾಸ ಭಾಗ್ಯ

ಶಾಲಾ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಗುರುತಿಸುವ 'ಇನ್‌ಸ್ಪೈರ್‌ ಮಾನಕ್‌' ಕಾರ್ಯಕ್ರಮದ ಅಂತಿಮ ಹಂತದಲ್ಲಿ ವಿಜೇತರಾದ ಮಕ್ಕಳು ಜಪಾನ್‌ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ರಾಷ್ಟ್ರೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮ ಅಭಿವೃದ್ಧಿ ಮಂಡಳಿಯ ಮುಖ್ಯಸ್ಥ ಹರ್ಕೇಶ್‌ ಮಿತ್ತಲ್‌ ತಿಳಿಸಿದರು.

Vijaya Karnataka Web 22 Dec 2018, 5:00 am
ಬೆಂಗಳೂರು : ಶಾಲಾ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಗುರುತಿಸುವ 'ಇನ್‌ಸ್ಪೈರ್‌ ಮಾನಕ್‌' ಕಾರ್ಯಕ್ರಮದ ಅಂತಿಮ ಹಂತದಲ್ಲಿ ವಿಜೇತರಾದ ಮಕ್ಕಳು ಜಪಾನ್‌ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ರಾಷ್ಟ್ರೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮ ಅಭಿವೃದ್ಧಿ ಮಂಡಳಿಯ ಮುಖ್ಯಸ್ಥ ಹರ್ಕೇಶ್‌ ಮಿತ್ತಲ್‌ ತಿಳಿಸಿದರು.
Vijaya Karnataka Web inspire awardees japan tour
ಇನ್‌ಸ್ಪೈರ್‌ ವಿಜೇತರಿಗೆ ಜಪಾನ್‌ ಪ್ರವಾಸ ಭಾಗ್ಯ


ನಗರದಲ್ಲಿ ಶುಕ್ರವಾರ ನಡೆದ ಭಾರತೀಯ ಆವಿಷ್ಕಾರ ಪ್ರಗತಿ ಕಾರ್ಯಕ್ರಮದ 'ಡೆಮೊ ಡೇ' ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ 'ವಿಜಯ ಕರ್ನಾಟಕ'ದೊಂದಿಗೆ ಮಾತನಾಡಿ ''ರಾಷ್ಟ್ರೀಯ ಹಂತದಲ್ಲಿ ವಿಜೇತರಾದ 60 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಪಾನ್‌ ಸರಕಾರ ಉಚಿತವಾಗಿ ಆತಿಥ್ಯ ನೀಡಲಿದೆ. ಒಂದು ವಾರ ಕಾಲ ಪ್ರವಾಸದಲ್ಲಿ ತರಬೇತಿ ಒಳಗೊಂಡ ಆವಿಷ್ಕಾರ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ,'' ಎಂದರು.

''ಭಾರತ-ಜಪಾನ್‌ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ ಹೊರಹೊಮ್ಮಲು ಪ್ರವಾಸ ಸಹಕಾರಿಯಾಗಲಿದೆ. ಇದೇ ರೀತಿ ಕೆನಡಾ ಸರಕಾರ ಕೂಡ 30 ಮಂದಿಗೆ ಉಚಿತ ಪ್ರವಾಸ ಒದಗಿಸುವ ಭರವಸೆ ನೀಡಿದ್ದು, ಇನ್ನಷ್ಟೇ ಒಡಂಬಡಿಕೆ ಆಗಬೇಕಿದೆ,'' ಎಂದು ತಿಳಿಸಿದರು.

''ಪ್ರತಿವರ್ಷ ಇನ್‌ಸ್ಪೈರ್‌ ಮಾನಕ್‌ ಕಾರ್ಯಕ್ರಮ ಆಯೋಜಿಸಲು ಸರಕಾರ 200 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಭವಿಷ್ಯದಲ್ಲಿ 10 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗುವುದು,'' ಎಂದರು.

ರಾಷ್ಟ್ರಪತಿ ಭವನದಲ್ಲೂ ಆತಿಥ್ಯ

''ಜಪಾನ್‌ ಪ್ರವಾಸಕ್ಕೆ ತೆರಳುವ ಮುನ್ನ ವಿಜೇತ ವಿದ್ಯಾರ್ಥಿಗಳು ರಾಷ್ಟ್ರಪತಿ ಭವನದಲ್ಲಿ ಒಂದು ವಾರ ಕಾಲ ಆತಿಥ್ಯ ಪಡೆಯಲಿದ್ದಾರೆ. ರಾಷ್ಟ್ರಪತಿಯವರ ಭೇಟಿ, ನಾನಾ ಇಲಾಖೆಗಳ ಸಚಿವರು, ಅಧಿಕಾರಿಗಳೊಂದಿಗೆ ಸಂವಹನಕ್ಕೂ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿ ವಿಜ್ಜಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಿದಂತಾಗುತ್ತದೆ,'' ಎಂದು ಮಿತ್ತಲ್‌ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ