ಆ್ಯಪ್ನಗರ

ಭಯೋತ್ಪಾದನೆ ಬದಲು ದಯೋತ್ಪಾದನೆ ಬೇಕು: ಪೇಜಾವರ ಶ್ರೀ

ನಮ್ಮ ದೇಶಕ್ಕೆ ಭಯೋತ್ಪಾದನೆ ಬದಲು ದಯೋತ್ಪಾದನೆ ಬೇಕಾಗಿದೆ. ಆತಂಕವಾದದ ಬದಲು ಅನುಕುಂಪವಾದ ಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

Vijaya Karnataka 4 Jul 2018, 10:17 am
ಬೆಂಗಳೂರು: ನಮ್ಮ ದೇಶಕ್ಕೆ ಭಯೋತ್ಪಾದನೆ ಬದಲು ದಯೋತ್ಪಾದನೆ ಬೇಕಾಗಿದೆ. ಆತಂಕವಾದದ ಬದಲು ಅನುಕುಂಪವಾದ ಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
Vijaya Karnataka Web ಪೇಜಾವರ ಶ್ರೀ


ನಗರದಲ್ಲಿ ಸಂತ ಶಿಶುನಾಳ ಷರೀಫರ ದ್ವಿಶತಮಾನೋತ್ಸವ ಅಂಗವಾಗಿ ಮಂಗಳವಾರ ನಡೆದ 'ಸಂತ ಶಿಶುನಾಳ ಷರೀಫರ ಹಾಗೂ ಕಳಸದ ಗುರು ಗೋವಿಂದ ಭಟ್ಟರ ಪ್ರತಿಷ್ಠಾನ'ನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ''ನಮ್ಮ ನಡುವೆ ಎಷ್ಟೇ ವಿರೋಧಗಳಿದ್ದರೂ ಸಹನೆ ಇರಬೇಕು. ಸಮಾನ ಅಂಶಗಳಲ್ಲಿ ಸಹಕಾರ ಇರಬೇಕು. ಈ ರೀತಿಯ ಧೋರಣೆಗಳಿದ್ದಾಗ ದೇಶದಲ್ಲಿ ಹಿಂಸೆ ಮತ್ತು ಘರ್ಷಣೆಗೆ ಅವಕಾಶವಿರುವುದಿಲ್ಲ. ಮುಸ್ಲಿಮರ ಮೇಲೆ ಹಲ್ಲೆ ಹಿಂಸೆಗಳಾದರೆ ಅವರ ರಕ್ಷಣೆಗೆ ಹಿಂದೂಗಳು ಹೋಗಬೇಕು. ಹಿಂದೂಗಳ ಮೇಲೆ ಹಿಂಸೆಗಳಾದಾಗ ಮುಸಲ್ಮಾನರು ರಕ್ಷಣೆ ನಿಡಬೇಕು,'' ಎಂದರು.

''ಜಾತಿ, ಧರ್ಮಗಳ ಕಗ್ಗತ್ತಲಲ್ಲಿ ಮುಳುಗಿರುವ ನಮಗೆ ಸಂತ ಶಿಶುನಾಳ ಷರೀಫರು ಹಾಗೂ ಗುರು ಗೋವಿಂದ ಭಟ್ಟರು ದಾರಿ ದೀಪವಾಗಬೇಕು,'' ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದರು.

ಇಸ್ಲಾಂ ಧರ್ಮಗುರು ಕೆ.ಎಂ.ಅಬೂಬಕರ್‌ ಸಿದ್ಧೀಕ್‌, ನಿವೃತ್ತ ನ್ಯಾ. ಎಂ.ಎನ್‌.ವೆಂಕಟಾಚಲಯ್ಯ, ಕ್ರೈಸ್ತ ಧರ್ಮಗುರು ಡಾ. ಪೀಟರ್‌ ಮಚಾಡೊ, ಗೋವಾ ಮಾಜಿ ಸಿಎಂ ದಿಗಂಬರ್‌ ಕಾಮತ್‌, ಎಚ್‌.ಕೆ.ಪಾಟೀಲ್‌, ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ, ನಾಗನೂರು ರುದ್ರಾಕ್ಷಿ ಮಠದ ಡಾ. ಸಿದ್ಧರಾಮ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಮಹಾಬೋಧಿ ಸೊಸೈಟಿಯ ಆನಂದ್‌ ಭಂತೇಜಿ ಮತ್ತಿತರರು

ಭಾಗವಹಿಸಿದ್ದರು. ಶಿಶುನಾಳ ಷರೀಫ ಪಸ್ತಕ ಹಾಗೂ ಅಂತರ್ಜಾಲ ತಾಣವನ್ನು ಬಿಡುಗಡೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ