ಬೆಂಗಳೂರು: ಬೆಲೆ ಬಾಳುವ ಮರಗಳ್ಳತನ ತಡೆಗೆ ತಂತ್ರಜ್ಞಾನದ ಮೊರೆ ಹೋಗಿರುವ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ಐಸಿಎಫ್ಆರ್ಇ), ಮರಗಳ ತೊಗಟೆಯಲ್ಲಿ ಮೈಕ್ರೊ ಚಿಪ್ಗಳ ಅಳವಡಿಕೆಗೆ ಮುಂದಾಗಿದೆ.
ಸಂಸ್ಥೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ ಮಹಾನಿರ್ದೇಶಕ ಎಸ್.ಸಿ.ಗೇರೊಲಾ, ''ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿರುವುದರಿಂದ ಶ್ರೀಗಂಧ, ರಕ್ತಚಂದನ ಹಾಗೂ ಇತರೆ ಬೆಲೆಬಾಳುವ ಮರಗಳ ಕಳ್ಳತನ ಹೆಚ್ಚಾಗುತ್ತಿದೆ.
ಮರಗಳ ತೊಗಟೆಯಲ್ಲಿ ಮೈಕ್ರೊ ಚಿಪ್ಗಳನ್ನು ಅಳವಡಿಸಿದರೆ ಕಳವು ತಡೆಯಬಹುದು. ಯಾರಾದರೂ ಮರಗಳನ್ನು ಕಳ್ಳತನ ಮಾಡಲು ಯತ್ನಿಸಿದರೆ ಕೂಡಲೇ ಸಂಬಂಧಿಸಿದವರಿಗೆ ಮಾಹಿತಿ ರವಾನೆಯಾಗುತ್ತದೆ. 'ಹಿಟಾಚಿ' ಸಂಸ್ಥೆಯ ಸಹಯೋಗದಲ್ಲಿ ಚಿಪ್ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಆರಂಭವಾಗಿದೆ,'' ಎಂದರು.
'ಕಾವೇರಿ, ಕೃಷ್ಣಾ ಸೇರಿದಂತೆ ದೇಶದ ಹದಿಮೂರು ನದಿಗಳ ಪಾತ್ರದಲ್ಲಿ ಮರಗಳನ್ನು ಬೆಳೆಸುವ ಮತ್ತು ಅರಣ್ಯ ಪ್ರದೇಶ ವೃದ್ಧಿಸುವ ವಿಸ್ತೃತ ಯೋಜನೆ ಸಿದ್ಧಪಡಿಸಲಾಗಿದೆ. ರಸ್ತೆ ಅಭಿವೃದ್ಧಿ ಹಾಗೂ ಇತರೆ ಯೋಜನೆಗಳನ್ನು ಕೈಗೊಂಡ ಸಂದರ್ಭದಲ್ಲಿಸಾವಿರಾರು ಮರಗಳನ್ನು ಕತ್ತರಿಸಲಾಗುತ್ತದೆ.
ಇಂತಹ ಸಂದರ್ಭದಲ್ಲಿ ಮರಗಳನ್ನು ಕತ್ತರಿಸುವ ಬದಲು, ಸ್ಥಳಾಂತರ ಮಾಡಲು ವೋಲ್ವೋ ಟ್ರಸ್ಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಯ ಯೋಜನೆ ರೂಪಿಸಲಾಗುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿಸಾವಿರಾರು ಮರಗಳನ್ನು ರಕ್ಷಿಸಬಹುದಾಗಿದೆ,'' ಎಂದು ಅವರು ವಿವರಿಸಿದರು.
ಗ್ರೀನ್-60 ಯೋಜನೆಗೆ ಚಾಲನೆ
ಸಂಸ್ಥೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ ಮಹಾನಿರ್ದೇಶಕ ಎಸ್.ಸಿ.ಗೇರೊಲಾ, ''ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿರುವುದರಿಂದ ಶ್ರೀಗಂಧ, ರಕ್ತಚಂದನ ಹಾಗೂ ಇತರೆ ಬೆಲೆಬಾಳುವ ಮರಗಳ ಕಳ್ಳತನ ಹೆಚ್ಚಾಗುತ್ತಿದೆ.
ಮರಗಳ ತೊಗಟೆಯಲ್ಲಿ ಮೈಕ್ರೊ ಚಿಪ್ಗಳನ್ನು ಅಳವಡಿಸಿದರೆ ಕಳವು ತಡೆಯಬಹುದು. ಯಾರಾದರೂ ಮರಗಳನ್ನು ಕಳ್ಳತನ ಮಾಡಲು ಯತ್ನಿಸಿದರೆ ಕೂಡಲೇ ಸಂಬಂಧಿಸಿದವರಿಗೆ ಮಾಹಿತಿ ರವಾನೆಯಾಗುತ್ತದೆ. 'ಹಿಟಾಚಿ' ಸಂಸ್ಥೆಯ ಸಹಯೋಗದಲ್ಲಿ ಚಿಪ್ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಆರಂಭವಾಗಿದೆ,'' ಎಂದರು.
'ಕಾವೇರಿ, ಕೃಷ್ಣಾ ಸೇರಿದಂತೆ ದೇಶದ ಹದಿಮೂರು ನದಿಗಳ ಪಾತ್ರದಲ್ಲಿ ಮರಗಳನ್ನು ಬೆಳೆಸುವ ಮತ್ತು ಅರಣ್ಯ ಪ್ರದೇಶ ವೃದ್ಧಿಸುವ ವಿಸ್ತೃತ ಯೋಜನೆ ಸಿದ್ಧಪಡಿಸಲಾಗಿದೆ. ರಸ್ತೆ ಅಭಿವೃದ್ಧಿ ಹಾಗೂ ಇತರೆ ಯೋಜನೆಗಳನ್ನು ಕೈಗೊಂಡ ಸಂದರ್ಭದಲ್ಲಿಸಾವಿರಾರು ಮರಗಳನ್ನು ಕತ್ತರಿಸಲಾಗುತ್ತದೆ.
ಇಂತಹ ಸಂದರ್ಭದಲ್ಲಿ ಮರಗಳನ್ನು ಕತ್ತರಿಸುವ ಬದಲು, ಸ್ಥಳಾಂತರ ಮಾಡಲು ವೋಲ್ವೋ ಟ್ರಸ್ಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಯ ಯೋಜನೆ ರೂಪಿಸಲಾಗುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿಸಾವಿರಾರು ಮರಗಳನ್ನು ರಕ್ಷಿಸಬಹುದಾಗಿದೆ,'' ಎಂದು ಅವರು ವಿವರಿಸಿದರು.
ಗ್ರೀನ್-60 ಯೋಜನೆಗೆ ಚಾಲನೆ